ಮೈಸೂರಿನ ದಿ.ಬ್ರಿಟಿಷ್ ಮಿಷನರಿಯಂತಹ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಇವರು, ಅಲ್ಲಿಂದ ಪಟ್ಟಣಕ್ಕೆ ಬಂದು ‘ಕರುಣಾ’ ಚಿಕಿತ್ಸಾಲಯ ಆರಂಭಿಸಿ ಜನರ ಪಾಲಿನ ಅಚ್ಚುಮೆಚ್ಚಿನ ವೈದ್ಯರಾಗಿದ್ದಾರೆ. ಜೊತೆಗೆ ಸಾಂಸ್ಕೃತಿಕ ಲೋಕದ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಲಲಿತ ಕಲಾರಂಗ ಸಂಸ್ಥಾಪಕರಾಗಿರುವ ಅವರಿಗೆ ಜಿ.ಮಾದೇಗೌಡ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ‘ಭಾವತರಂಗ’ ಕವನ ಸಂಕಲನ, ‘ಅಪತ್ಬಾಂಧವ ಡಾ.ಬಿ.ಅಂಬಣ್ಣ’ ಅಭಿನಂದನ ಗ್ರಂಥ ಸೇರಿದಂತೆ ಐದು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.