<p><strong>ಹೊಸಪೇಟೆ (ವಿಜಯನಗರ): </strong>‘ಎಲ್ಲಾ ವಲಯಗಳು ಡಿಜಿಟಲೀಕರಣಗೊಂಡಿವೆ. ತಂತ್ರಜ್ಞಾನದ ಅರಿವು ಅಗತ್ಯ’ ಎಂದು ಬಳ್ಳಾರಿ ಬಿ.ಐ.ಟಿ.ಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಕೆ.ಎಂ. ಸದ್ಯೋಜಾತ ತಿಳಿಸಿದರು.</p>.<p>ಎಂಜಿನಿಯರ್ ದಿನಾಚರಣೆ ಪ್ರಯುಕ್ತ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿಡಿಐಟಿ) ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ವಾಣಿಜ್ಯ, ಉತ್ಪಾದನೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳು ಡಿಜಿಟಲೀಕರಣದ ಮೂಲಕ ತಮ್ಮ ಸೇವಾ ವಲಯಗಳನ್ನು ಜಾಗತಿಕ ಮಟ್ಟಕ್ಕೆ ಚಾಚಿಕೊಂಡಿವೆ. ಅದರ ಸದುಪಯೋಗ ಪಡೆಯಬೇಕಾದರೆ ತಂತ್ರಜ್ಞಾನ ತಿಳಿಯುವುದು ಅಗತ್ಯ. ಈ ಕಾಲದ ತುರ್ತು ಕೂಡ ಹೌದು’ ಎಂದು ಹೇಳಿದರು.</p>.<p>‘ಮಾರುಕಟ್ಟೆ ಪರಿಣಿತರ ಪ್ರಕಾರ ಕೋವಿಡ್ ಸಂಕಷ್ಟಕ್ಕೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಆಗದಿದ್ದರೂ ಕ್ರಮೇಣ ಪರಿಸ್ಥಿತಿ ಸುಧಾರಿಸಬಹುದು. ಈ ನಿಟ್ಟಿನಲ್ಲಿ ತಾಂತ್ರಿಕ ಪರಿಣಿತರ ಪಾತ್ರ ಬಹು ಮುಖ್ಯವಾಗಿದೆ. ಸಮಾಜವನ್ನು ಮುನ್ನಡೆಸುವ, ಗ್ರಾಮೀಣ ಜನರನ್ನು ಕೂಡ ತಮ್ಮ ಜೊತೆಗೆ ಕರೆದೊಯ್ಯುವ ಸವಾಲು ಇದೆ. ಅದನ್ನು ತಂತ್ರಜ್ಞರು ನಿಭಾಯಿಸಬೇಕು’ ಎಂದು ತಿಳಿಸಿದರು.</p>.<p>‘ಕೋವಿಡ್ ಅನೇಕ ಸಂಕಟಗಳನ್ನು ತಂದಂತೆ ಅನೇಕ ಅವಕಾಶಗಳ ಬಾಗಿಲುಗಳನ್ನು ಕೂಡ ತೆರೆದಿದೆ. ನಿರುದ್ಯೋಗ ಪರಿಹರಿಸಲು ಹೊಸ ಕೌಶಲ ಅಳವಡಿಸಿಕೊಳ್ಳಬೇಕು. ಇಂದಿನ ಸಂದರ್ಭಕ್ಕೆ ಕೌಶಲ ಅಳವಡಿಸಿಕೊಳ್ಳುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ’ ಎಂದರು.</p>.<p>ಮುನಿರಾಬಾದಿನ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಘಟಕದ ಅಧ್ಯಕ್ಷ ಪ್ರಹ್ಲಾದ್ ಮಾತನಾಡಿ, ‘ತಮ್ಮ ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ಕೂಡ ಹಲವು ವೆಬಿನಾರ್ ಸರಣಿಗಳ ಮೂಲಕ ಆಧುನಿಕ ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದೆ. ಶತಮಾನ ಪೂರೈಸಿದ ಈ ರಾಷ್ಟ್ರೀಯ ಸಂಸ್ಥೆಯನ್ನು ನಿರ್ವಹಿಸುವ ಹೊಣೆಗಾರಿಕೆ ಯುವ ಪೀಳಿಗೆ ಮೇಲಿದೆ’ ಎಂದು ಹೇಳಿದರು.</p>.<p>ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಶಶಿಧರ್ ಮಾತನಾಡಿ, ‘ಎಂಜಿನಿಯರುಗಳು ತಮ್ಮ ವೃತ್ತಿ ಚೌಕಟ್ಟಿನ ಆಚೆಗೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ, ತಾಂತ್ರಿಕ ಪರಿಹಾರಗಳನ್ನು ಒದಗಿಸುವ ಕಡೆ ಗಮನ ಹರಿಸಬೇಕು’ ಎಂದರು.</p>.<p>ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ‘ಸಮಾಜ ಮತ್ತು ದೇಶವನ್ನು ಕಟ್ಟಲು ಎಂಜಿನಿಯರಿಂಗ್ ವೃತ್ತಿಪರರ ಕೊಡುಗೆ ಅಪಾರ. ಸೃಜನಶೀಲತೆ, ಆವಿಷ್ಕಾರ ಹಾಗೂ ವಿಜ್ಞಾನದ ಸರಿಯಾದ ಅಳವಡಿಕೆಯಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.</p>.<p>ಮುನಿರಾಬಾದಿನ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಘಟಕದ ಕಾರ್ಯದರ್ಶಿ ಡಬ್ಲ್ಯೂ. ಲಲಿತ್ ಪ್ರಸಾದ್, ಎ.ವಿ. ವಿಜಯಕುಮಾರ್, ಪ್ರೊ. ಮಧ್ವರಾಜ, ಚಂದ್ರಗೌಡ, ಪ್ರೊ. ವೀಣಾ, ಪ್ರೊ. ಬಸವರಾಜ, ಪ್ರೊ. ರಜನಿ ಉಮಾಪತಿ, ಪ್ರೊ.ಜಿ.ಸಿ. ಸುಮಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): </strong>‘ಎಲ್ಲಾ ವಲಯಗಳು ಡಿಜಿಟಲೀಕರಣಗೊಂಡಿವೆ. ತಂತ್ರಜ್ಞಾನದ ಅರಿವು ಅಗತ್ಯ’ ಎಂದು ಬಳ್ಳಾರಿ ಬಿ.ಐ.ಟಿ.ಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಕೆ.ಎಂ. ಸದ್ಯೋಜಾತ ತಿಳಿಸಿದರು.</p>.<p>ಎಂಜಿನಿಯರ್ ದಿನಾಚರಣೆ ಪ್ರಯುಕ್ತ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿಡಿಐಟಿ) ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ವಾಣಿಜ್ಯ, ಉತ್ಪಾದನೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳು ಡಿಜಿಟಲೀಕರಣದ ಮೂಲಕ ತಮ್ಮ ಸೇವಾ ವಲಯಗಳನ್ನು ಜಾಗತಿಕ ಮಟ್ಟಕ್ಕೆ ಚಾಚಿಕೊಂಡಿವೆ. ಅದರ ಸದುಪಯೋಗ ಪಡೆಯಬೇಕಾದರೆ ತಂತ್ರಜ್ಞಾನ ತಿಳಿಯುವುದು ಅಗತ್ಯ. ಈ ಕಾಲದ ತುರ್ತು ಕೂಡ ಹೌದು’ ಎಂದು ಹೇಳಿದರು.</p>.<p>‘ಮಾರುಕಟ್ಟೆ ಪರಿಣಿತರ ಪ್ರಕಾರ ಕೋವಿಡ್ ಸಂಕಷ್ಟಕ್ಕೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಆಗದಿದ್ದರೂ ಕ್ರಮೇಣ ಪರಿಸ್ಥಿತಿ ಸುಧಾರಿಸಬಹುದು. ಈ ನಿಟ್ಟಿನಲ್ಲಿ ತಾಂತ್ರಿಕ ಪರಿಣಿತರ ಪಾತ್ರ ಬಹು ಮುಖ್ಯವಾಗಿದೆ. ಸಮಾಜವನ್ನು ಮುನ್ನಡೆಸುವ, ಗ್ರಾಮೀಣ ಜನರನ್ನು ಕೂಡ ತಮ್ಮ ಜೊತೆಗೆ ಕರೆದೊಯ್ಯುವ ಸವಾಲು ಇದೆ. ಅದನ್ನು ತಂತ್ರಜ್ಞರು ನಿಭಾಯಿಸಬೇಕು’ ಎಂದು ತಿಳಿಸಿದರು.</p>.<p>‘ಕೋವಿಡ್ ಅನೇಕ ಸಂಕಟಗಳನ್ನು ತಂದಂತೆ ಅನೇಕ ಅವಕಾಶಗಳ ಬಾಗಿಲುಗಳನ್ನು ಕೂಡ ತೆರೆದಿದೆ. ನಿರುದ್ಯೋಗ ಪರಿಹರಿಸಲು ಹೊಸ ಕೌಶಲ ಅಳವಡಿಸಿಕೊಳ್ಳಬೇಕು. ಇಂದಿನ ಸಂದರ್ಭಕ್ಕೆ ಕೌಶಲ ಅಳವಡಿಸಿಕೊಳ್ಳುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ’ ಎಂದರು.</p>.<p>ಮುನಿರಾಬಾದಿನ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಘಟಕದ ಅಧ್ಯಕ್ಷ ಪ್ರಹ್ಲಾದ್ ಮಾತನಾಡಿ, ‘ತಮ್ಮ ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ಕೂಡ ಹಲವು ವೆಬಿನಾರ್ ಸರಣಿಗಳ ಮೂಲಕ ಆಧುನಿಕ ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದೆ. ಶತಮಾನ ಪೂರೈಸಿದ ಈ ರಾಷ್ಟ್ರೀಯ ಸಂಸ್ಥೆಯನ್ನು ನಿರ್ವಹಿಸುವ ಹೊಣೆಗಾರಿಕೆ ಯುವ ಪೀಳಿಗೆ ಮೇಲಿದೆ’ ಎಂದು ಹೇಳಿದರು.</p>.<p>ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಶಶಿಧರ್ ಮಾತನಾಡಿ, ‘ಎಂಜಿನಿಯರುಗಳು ತಮ್ಮ ವೃತ್ತಿ ಚೌಕಟ್ಟಿನ ಆಚೆಗೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ, ತಾಂತ್ರಿಕ ಪರಿಹಾರಗಳನ್ನು ಒದಗಿಸುವ ಕಡೆ ಗಮನ ಹರಿಸಬೇಕು’ ಎಂದರು.</p>.<p>ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ, ‘ಸಮಾಜ ಮತ್ತು ದೇಶವನ್ನು ಕಟ್ಟಲು ಎಂಜಿನಿಯರಿಂಗ್ ವೃತ್ತಿಪರರ ಕೊಡುಗೆ ಅಪಾರ. ಸೃಜನಶೀಲತೆ, ಆವಿಷ್ಕಾರ ಹಾಗೂ ವಿಜ್ಞಾನದ ಸರಿಯಾದ ಅಳವಡಿಕೆಯಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ತಿಳಿಸಿದರು.</p>.<p>ಮುನಿರಾಬಾದಿನ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಘಟಕದ ಕಾರ್ಯದರ್ಶಿ ಡಬ್ಲ್ಯೂ. ಲಲಿತ್ ಪ್ರಸಾದ್, ಎ.ವಿ. ವಿಜಯಕುಮಾರ್, ಪ್ರೊ. ಮಧ್ವರಾಜ, ಚಂದ್ರಗೌಡ, ಪ್ರೊ. ವೀಣಾ, ಪ್ರೊ. ಬಸವರಾಜ, ಪ್ರೊ. ರಜನಿ ಉಮಾಪತಿ, ಪ್ರೊ.ಜಿ.ಸಿ. ಸುಮಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>