ಎಚ್ಎಲ್ಸಿಗೆ ಜು. 18ರಿಂದ ನ. 30ರ ವರೆಗೆ ನಿತ್ಯ 1,130 ಕ್ಯುಸೆಕ್, ಎಲ್ಎಲ್ಸಿಗೆ ನಿತ್ಯ 700 ಕ್ಯುಸೆಕ್, ಉಪಕಾಲುವೆಗಳಿಗೆ 235 ಕ್ಯುಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ. ಮೊದಲ ಬೆಳೆಗೆ ಸಕಾಲಕ್ಕೆ ನೀರು ಹರಿಸಲು ಕೈಗೊಂಡಿರುವ ಈ ನಿರ್ಧಾರದಿಂದ ರೈತರಿಗೆ ಸಹಾಯವಾಗಲಿದೆ ಎಂದು ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.