<p><strong>ಬೆಂಗಳೂರು</strong>: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ಕರ್ನಾಟಕ ಮಾಹಿತಿ ಆಯೋಗ ₹25 ಸಾವಿರ ದಂಡ ವಿಧಿಸಿದೆ.</p>.<p>ಚಿಕ್ಕಬಾಣಾವರದ ನಿವಾಸಿ ಚಿಕ್ಕೇಗೌಡ ಅವರು 2018ರಲ್ಲಿ ಬಿಇಎಂಎಲ್ 4ನೇ ಹಂತದ ಕಟ್ಟಡಕ್ಕೆ ನೀಡಲಾಗಿರುವ ನಕ್ಷೆ ಮತ್ತು ಅನುಮತಿಯ ಮಾಹಿತಿಯನ್ನು ಕೇಳಿದ್ದರು. ಬಿಬಿಎಂಪಿಯ ರಾಜರಾಜೇಶ್ವರಿನಗರ ಉಪ ವಿಭಾಗದ ಅಧಿಕಾರಿಗಳು ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಅರ್ಜಿದಾರರು ಮಾಹಿತಿ ಆಯೋಗದ ಮೊರೆ ಹೋಗಿದ್ದರು.</p>.<p>ಆರು ವರ್ಷಗಳ ನಂತರವೂ ಅಧಿಕಾರಿಗಳು ಮಾಹಿತಿಯನ್ನು ನೀಡಲು ನಿರಾಕರಿಸಿದ್ದರು. 30 ದಿನದೊಳಗೆ ಮಾಹಿತಿ ಒದಗಿಸಿ, ವೈಯಕ್ತಿಕವಾಗಿ ಹಾಜರಾಗಲು ಎಇಇಗೆ ಆಯೋಗ ಆದೇಶಿಸಿತ್ತು. ಇದನ್ನೂ ಪಾಲಿಸದ ಎಇಇ ಬಸವರಾಜು ಅವರಿಗೆ ದಂಡ ವಿಧಿಸಿ, ವಿವರಣೆ ನೀಡಲು ಶೋಕಾಸ್ ನೋಟಿಸ್ ಜಾರಿ ಮಾಡಿದೆ.</p>.<p>ಬಸವರಾಜು ಅವರ ವೇತನದಲ್ಲಿ ₹25 ಸಾವಿರ ದಂಡ ಕಡಿತ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರಿಗೆ ಮಾಹಿತಿ ಆಯೋಗದ ಆಯುಕ್ತ ಎಸ್.ಬಿ. ಬೊಮ್ಮನಹಳ್ಳಿ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ಕರ್ನಾಟಕ ಮಾಹಿತಿ ಆಯೋಗ ₹25 ಸಾವಿರ ದಂಡ ವಿಧಿಸಿದೆ.</p>.<p>ಚಿಕ್ಕಬಾಣಾವರದ ನಿವಾಸಿ ಚಿಕ್ಕೇಗೌಡ ಅವರು 2018ರಲ್ಲಿ ಬಿಇಎಂಎಲ್ 4ನೇ ಹಂತದ ಕಟ್ಟಡಕ್ಕೆ ನೀಡಲಾಗಿರುವ ನಕ್ಷೆ ಮತ್ತು ಅನುಮತಿಯ ಮಾಹಿತಿಯನ್ನು ಕೇಳಿದ್ದರು. ಬಿಬಿಎಂಪಿಯ ರಾಜರಾಜೇಶ್ವರಿನಗರ ಉಪ ವಿಭಾಗದ ಅಧಿಕಾರಿಗಳು ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಅರ್ಜಿದಾರರು ಮಾಹಿತಿ ಆಯೋಗದ ಮೊರೆ ಹೋಗಿದ್ದರು.</p>.<p>ಆರು ವರ್ಷಗಳ ನಂತರವೂ ಅಧಿಕಾರಿಗಳು ಮಾಹಿತಿಯನ್ನು ನೀಡಲು ನಿರಾಕರಿಸಿದ್ದರು. 30 ದಿನದೊಳಗೆ ಮಾಹಿತಿ ಒದಗಿಸಿ, ವೈಯಕ್ತಿಕವಾಗಿ ಹಾಜರಾಗಲು ಎಇಇಗೆ ಆಯೋಗ ಆದೇಶಿಸಿತ್ತು. ಇದನ್ನೂ ಪಾಲಿಸದ ಎಇಇ ಬಸವರಾಜು ಅವರಿಗೆ ದಂಡ ವಿಧಿಸಿ, ವಿವರಣೆ ನೀಡಲು ಶೋಕಾಸ್ ನೋಟಿಸ್ ಜಾರಿ ಮಾಡಿದೆ.</p>.<p>ಬಸವರಾಜು ಅವರ ವೇತನದಲ್ಲಿ ₹25 ಸಾವಿರ ದಂಡ ಕಡಿತ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರಿಗೆ ಮಾಹಿತಿ ಆಯೋಗದ ಆಯುಕ್ತ ಎಸ್.ಬಿ. ಬೊಮ್ಮನಹಳ್ಳಿ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>