<p><strong>ಬೆಂಗಳೂರು</strong>: ಪಾಲಿಕೆ ನಿಯಮಾವಳಿಗಳ ಪ್ರಕಾರ, ಅಪಾರ್ಟ್ಮೆಂಟ್ಗೆ ದೈನಂದಿನ ಕುಡಿಯುವ ಮತ್ತು ಅಡುಗೆ ಅಗತ್ಯಗಳಿಗಾಗಿ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದರು.</p>.<p>ಶನಿವಾರ ಮತ್ತು ಭಾನುವಾರ ನಗರದ ಹೊರ ವಲಯದ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿ, ನಾಗರಿಕರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.</p>.<p>ಕಮ್ಮನಹಳ್ಳಿಯ ಅಮೋದ ವಾಲ್ಮಾರ್ಟ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಸದಸ್ಯರು ಕೊಳವೆಬಾವಿಗಳು ಬತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳನ್ನು ವಿವರಿಸಿದರು. ಅಪಾರ್ಟ್ಮೆಂಟ್ಗೆ ಕಾವೇರಿ ನೀರು ಸಂಪರ್ಕಕ್ಕಾಗಿ 2013ರಲ್ಲಿ ನೀರಿನ ಸಂಪರ್ಕಕ್ಕಾಗಿ ಬಿಲ್ಡರ್ ಈಗಾಗಲೇ ಅಗತ್ಯ ಶುಲ್ಕವನ್ನು ಮಂಡಳಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.</p>.<p>‘ಕಮ್ಮನಹಳ್ಳಿ ಗ್ರಾಮವು ಬಿಬಿಎಂಪಿಯ 110 ಗ್ರಾಮಗಳ ವ್ಯಾಪ್ತಿಗೆ ಬರುತ್ತಿದ್ದು, ಕಾವೇರಿ 5ನೇ ಹಂತ ಕಾರ್ಯಾರಂಭವಾದ ಮೇಲೆ ನೀರು ಸಿಗುತ್ತದೆ’ ಎಂದು ಅಧ್ಯಕ್ಷರು ಹೇಳಿದರು.</p>.<p>ಕಮ್ಮನಹಳ್ಳಿ ಕೆರೆಯ ಪಕ್ಕದಲ್ಲಿ ಫಿಲ್ಟರ್ ಬೋರ್ವೆಲ್ ಕೊರೆದು, ಸಮೀಪದ ಅಪಾರ್ಟ್ಮೆಂಟ್ಗಳಿಗೆ ಕುಡಿಯಲು ಮತ್ತು ಅಡುಗೆ ಹೊರತುಪಡಿಸಿ ಇತರೆ ಅಗತ್ಯಗಳಿಗಾಗಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಹೊಂಗಸಂದ್ರದ ಗಾರ್ವೆಭಾವಿಪಾಳ್ಯದಲ್ಲಿರುವ ಪೂರ್ವವೆಸ್ಟೆಂಡ್ ಸಮೀಪದ ಅಗರ ಮತ್ತು ಚಿಕ್ಕಬೇಗೂರು ಕೆರೆಗಳ ಬಳಿ ಫಿಲ್ಟರ್ ಬೋರ್ವೆಲ್ ಕೊರೆದು ನೀರು ಪೂರೈಸಲು ಹೇಳಿದರು.</p>.<p>ಹೆಚ್ಚುವರಿ ಟ್ಯಾಂಕ್ ಅಳವಡಿಸಲು ಸೂಚನೆ: ವಸಂತಪುರ ವಾರ್ಡ್ನ ಯಾದಳಂ ನಗರದ ಕೊಳೆಗೇರಿಯಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿದ ಅಧ್ಯಕ್ಷರು, ಚಿಕ್ಕ ಗಲ್ಲಿಗಳಲ್ಲಿನ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯ ಎಂಜಿನಿಯರ್ ಎಸ್.ವಿ.ವೆಂಕಟೇಶ್ ಅವರಿಗೆ ಸೂಚನೆ ನೀಡಿದರು. ಜನರ ಮನವಿಯಂತೆ ಹೆಚ್ಚಿನ ಟ್ಯಾಂಕ್ ಅಳವಡಿಸಲು ಹೇಳಿದರು.</p>.<p>ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಗುಲ್ಬರ್ಗ ಕಾಲೊನಿಯ ಜನರೊಂದಿಗೆ ಮಾತುಕತೆ ನಡೆಸಿ, ಕಾಲೊನಿ ಮತ್ತು ಇತರ ಅಗತ್ಯವಿರುವ ಪ್ರದೇಶಗಳಲ್ಲಿ ಹೆಚ್ಚುವರಿ 2 ಸಾವಿರ ಲೀಟರ್ ಟ್ಯಾಂಕ್ಗಳನ್ನು ಅಳವಡಿಸಬೇಕು. ಈಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿ, ಪೈಪ್ಲೈನ್ ಬದಲು ಟ್ಯಾಂಕ್ನಿಂದ ನೀರು ಸಂಗ್ರಹಿಸಲು ಜನರಿಗೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಗುಬ್ಬಲಾಳದ ಮಂತ್ರಿ ಟ್ರಾಂಕ್ವಿಲ್ ವಸತಿ ಸಮುಚ್ಛಯದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದ ರಾಮ್ ಪ್ರಸಾತ್ ಮನೋಹರ್, ಕುಡಿಯುವ ನೀರು ಪೂರೈಸುವುದಾಗಿ ಭರವಸೆ ನೀಡಿದರು. ಇನ್ನಿತರ ಬಳಕೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸಬೇಕು ಎಂದು ಸೂಚನೆ ನೀಡಿದರು.</p>.<p>ಸುಬ್ರಮಣ್ಯಪುರ ಹಾಗೂ ದೊರಕೆರೆ ಅಂಗಳದಲ್ಲಿ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯನ್ನು ತಜ್ಞರೊಂದಿಗೆ ಪರಿಶೀಲಿಸಿ ದೀರ್ಘಕಾಲದ ಪರಿಹಾರವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಆದೇಶಿಸಿದರು.</p>.<p>ಅಗರ ಕೆರೆ ಬಳಿಯ ಎಸ್ಟಿಪಿಯಲ್ಲಿ ನೀರು ಶುದ್ಧೀಕರಿಸಿ ಪೂರೈಕೆ ಮಾಡುತ್ತಿರುವುದನ್ನು ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.</p>.<p>ಎ.ನಾರಾಯಣಪುರ, ಕೆ.ಆರ್.ಪುರ, ವಿಜ್ಞಾನ ನಗರ, ಎಚ್ಎಎಲ್ ವಾರ್ಡ್ಗೆ ಟ್ಯಾಂಕರ್ ನೀರು ಸರಬರಾಜು ವ್ಯವಸ್ಥೆ ಪರಿಶೀಲಿಸಿದರು. ಕೃಷ್ಣನಗರದ ಕೊಳೆಗೇರಿಗೆ ಭೇಟಿ ನೀಡಿ, ಹೆಚ್ಚುವರಿಯಾಗಿ ಒಂದು ಟ್ಯಾಂಕ್ ಅಳವಡಿಸಲು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪಾಲಿಕೆ ನಿಯಮಾವಳಿಗಳ ಪ್ರಕಾರ, ಅಪಾರ್ಟ್ಮೆಂಟ್ಗೆ ದೈನಂದಿನ ಕುಡಿಯುವ ಮತ್ತು ಅಡುಗೆ ಅಗತ್ಯಗಳಿಗಾಗಿ ವಾರಕ್ಕೆ 35 ಸಾವಿರ ಲೀಟರ್ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದರು.</p>.<p>ಶನಿವಾರ ಮತ್ತು ಭಾನುವಾರ ನಗರದ ಹೊರ ವಲಯದ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಿ, ನಾಗರಿಕರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.</p>.<p>ಕಮ್ಮನಹಳ್ಳಿಯ ಅಮೋದ ವಾಲ್ಮಾರ್ಟ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಸದಸ್ಯರು ಕೊಳವೆಬಾವಿಗಳು ಬತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳನ್ನು ವಿವರಿಸಿದರು. ಅಪಾರ್ಟ್ಮೆಂಟ್ಗೆ ಕಾವೇರಿ ನೀರು ಸಂಪರ್ಕಕ್ಕಾಗಿ 2013ರಲ್ಲಿ ನೀರಿನ ಸಂಪರ್ಕಕ್ಕಾಗಿ ಬಿಲ್ಡರ್ ಈಗಾಗಲೇ ಅಗತ್ಯ ಶುಲ್ಕವನ್ನು ಮಂಡಳಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.</p>.<p>‘ಕಮ್ಮನಹಳ್ಳಿ ಗ್ರಾಮವು ಬಿಬಿಎಂಪಿಯ 110 ಗ್ರಾಮಗಳ ವ್ಯಾಪ್ತಿಗೆ ಬರುತ್ತಿದ್ದು, ಕಾವೇರಿ 5ನೇ ಹಂತ ಕಾರ್ಯಾರಂಭವಾದ ಮೇಲೆ ನೀರು ಸಿಗುತ್ತದೆ’ ಎಂದು ಅಧ್ಯಕ್ಷರು ಹೇಳಿದರು.</p>.<p>ಕಮ್ಮನಹಳ್ಳಿ ಕೆರೆಯ ಪಕ್ಕದಲ್ಲಿ ಫಿಲ್ಟರ್ ಬೋರ್ವೆಲ್ ಕೊರೆದು, ಸಮೀಪದ ಅಪಾರ್ಟ್ಮೆಂಟ್ಗಳಿಗೆ ಕುಡಿಯಲು ಮತ್ತು ಅಡುಗೆ ಹೊರತುಪಡಿಸಿ ಇತರೆ ಅಗತ್ಯಗಳಿಗಾಗಿ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಹೊಂಗಸಂದ್ರದ ಗಾರ್ವೆಭಾವಿಪಾಳ್ಯದಲ್ಲಿರುವ ಪೂರ್ವವೆಸ್ಟೆಂಡ್ ಸಮೀಪದ ಅಗರ ಮತ್ತು ಚಿಕ್ಕಬೇಗೂರು ಕೆರೆಗಳ ಬಳಿ ಫಿಲ್ಟರ್ ಬೋರ್ವೆಲ್ ಕೊರೆದು ನೀರು ಪೂರೈಸಲು ಹೇಳಿದರು.</p>.<p>ಹೆಚ್ಚುವರಿ ಟ್ಯಾಂಕ್ ಅಳವಡಿಸಲು ಸೂಚನೆ: ವಸಂತಪುರ ವಾರ್ಡ್ನ ಯಾದಳಂ ನಗರದ ಕೊಳೆಗೇರಿಯಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿದ ಅಧ್ಯಕ್ಷರು, ಚಿಕ್ಕ ಗಲ್ಲಿಗಳಲ್ಲಿನ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯ ಎಂಜಿನಿಯರ್ ಎಸ್.ವಿ.ವೆಂಕಟೇಶ್ ಅವರಿಗೆ ಸೂಚನೆ ನೀಡಿದರು. ಜನರ ಮನವಿಯಂತೆ ಹೆಚ್ಚಿನ ಟ್ಯಾಂಕ್ ಅಳವಡಿಸಲು ಹೇಳಿದರು.</p>.<p>ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಗುಲ್ಬರ್ಗ ಕಾಲೊನಿಯ ಜನರೊಂದಿಗೆ ಮಾತುಕತೆ ನಡೆಸಿ, ಕಾಲೊನಿ ಮತ್ತು ಇತರ ಅಗತ್ಯವಿರುವ ಪ್ರದೇಶಗಳಲ್ಲಿ ಹೆಚ್ಚುವರಿ 2 ಸಾವಿರ ಲೀಟರ್ ಟ್ಯಾಂಕ್ಗಳನ್ನು ಅಳವಡಿಸಬೇಕು. ಈಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಿ, ಪೈಪ್ಲೈನ್ ಬದಲು ಟ್ಯಾಂಕ್ನಿಂದ ನೀರು ಸಂಗ್ರಹಿಸಲು ಜನರಿಗೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.</p>.<p>ಗುಬ್ಬಲಾಳದ ಮಂತ್ರಿ ಟ್ರಾಂಕ್ವಿಲ್ ವಸತಿ ಸಮುಚ್ಛಯದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದ ರಾಮ್ ಪ್ರಸಾತ್ ಮನೋಹರ್, ಕುಡಿಯುವ ನೀರು ಪೂರೈಸುವುದಾಗಿ ಭರವಸೆ ನೀಡಿದರು. ಇನ್ನಿತರ ಬಳಕೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸಬೇಕು ಎಂದು ಸೂಚನೆ ನೀಡಿದರು.</p>.<p>ಸುಬ್ರಮಣ್ಯಪುರ ಹಾಗೂ ದೊರಕೆರೆ ಅಂಗಳದಲ್ಲಿ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯನ್ನು ತಜ್ಞರೊಂದಿಗೆ ಪರಿಶೀಲಿಸಿ ದೀರ್ಘಕಾಲದ ಪರಿಹಾರವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಆದೇಶಿಸಿದರು.</p>.<p>ಅಗರ ಕೆರೆ ಬಳಿಯ ಎಸ್ಟಿಪಿಯಲ್ಲಿ ನೀರು ಶುದ್ಧೀಕರಿಸಿ ಪೂರೈಕೆ ಮಾಡುತ್ತಿರುವುದನ್ನು ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.</p>.<p>ಎ.ನಾರಾಯಣಪುರ, ಕೆ.ಆರ್.ಪುರ, ವಿಜ್ಞಾನ ನಗರ, ಎಚ್ಎಎಲ್ ವಾರ್ಡ್ಗೆ ಟ್ಯಾಂಕರ್ ನೀರು ಸರಬರಾಜು ವ್ಯವಸ್ಥೆ ಪರಿಶೀಲಿಸಿದರು. ಕೃಷ್ಣನಗರದ ಕೊಳೆಗೇರಿಗೆ ಭೇಟಿ ನೀಡಿ, ಹೆಚ್ಚುವರಿಯಾಗಿ ಒಂದು ಟ್ಯಾಂಕ್ ಅಳವಡಿಸಲು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>