<p><strong>ದಾಬಸ್ ಪೇಟೆ:</strong> ಗುಣ ಸಂಪನ್ಮೂಲಗಳು ಒಂದೆಡೆ ಕಲೆತಾಗ ಸಂಸ್ಕಾರವುಂಟಾಗಿ ಕತ್ತಲೆ ದೂರವಾಗಿ ಸಾಮರಸ್ಯದ ಬದುಕು ಮೂಡುತ್ತದೆ ಎಂದು ಶಿವಗಂಗೆಯ ಮೇಲಣಗವಿ ಮಠಾಧೀಶ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ಮಠದ ಆಶ್ರಯದಲ್ಲಿ ನಡೆದ 6ನೇ ಧರ್ಮಚಿಂತನ ಕನ್ನಡ ದೀಪೋತ್ಸವ, ಕವಿ ಸಮ್ಮೇಳನ ಮತ್ತು ರೇಣುಕಾಚಾರ್ಯರ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿಭೂತಿಪುರ ವೀರಸಿಂಹಾಸನ ಮಠದ ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಜ್ಞಾನವನ್ನು ತೊಡೆದು ಜ್ಞಾನದ ಬೆಳಕನ್ನು ಮಠವು ಸಾದರಪಡಿಸುತ್ತಾ ಬಂದಿದೆ. ಧರ್ಮ ಸಂದೇಶಗಳನ್ನು ದೇಶ, ವಿದೇಶಗಳಲ್ಲಿ ಸಾರಿ, ಭಕ್ತರನ್ನು ಸೆಳೆಯುವ ಮುಖೇನ ಮಠದ ಕಾರ್ಯತತ್ಪರತೆ ಹೆಚ್ಚಿಸುತ್ತಿರುವುದು ಸಮಾಜಕ್ಕೆ ಸಾರ್ಥಕತೆ ಬಿತ್ತರಿಸುತ್ತಿದೆ ಎಂದರು.</p>.<p>ಮಾಗಡಿಯ ಜಡೆದೇವರ ಮಠದ ಮಠಾಧೀಶ ಇಮ್ಮಡಿ ಬಸವರಾಜು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾಹಿತಿ ವಿ.ಮನೋಹರ್ ಹಾಜರಿದ್ದರು. </p>.<p>ಸ್ಥಳೀಯ ಶಾಸಕ ಎನ್.ಶ್ರೀನಿವಾಸ್ ಅವರು ಮಠದ ದಾಸೋಹ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ₹50 ಲಕ್ಷ ಮಂಜೂರು ಮಾಡಿಕೊಡುವ ಭರವಸೆ ನೀಡಿದರು.</p>.<p>ಮಾಗಡಿ ಪುರಸಭಾಧ್ಯಕ್ಷೆ ಶಿವರುದ್ರಮ್ಮ ವಿಜಯ ಕುಮಾರ್ ಮತ್ತು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎನ್.ಜಿ.ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕವಿಗಳು ಕವನ ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ:</strong> ಗುಣ ಸಂಪನ್ಮೂಲಗಳು ಒಂದೆಡೆ ಕಲೆತಾಗ ಸಂಸ್ಕಾರವುಂಟಾಗಿ ಕತ್ತಲೆ ದೂರವಾಗಿ ಸಾಮರಸ್ಯದ ಬದುಕು ಮೂಡುತ್ತದೆ ಎಂದು ಶಿವಗಂಗೆಯ ಮೇಲಣಗವಿ ಮಠಾಧೀಶ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ಮಠದ ಆಶ್ರಯದಲ್ಲಿ ನಡೆದ 6ನೇ ಧರ್ಮಚಿಂತನ ಕನ್ನಡ ದೀಪೋತ್ಸವ, ಕವಿ ಸಮ್ಮೇಳನ ಮತ್ತು ರೇಣುಕಾಚಾರ್ಯರ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ವಿಭೂತಿಪುರ ವೀರಸಿಂಹಾಸನ ಮಠದ ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಜ್ಞಾನವನ್ನು ತೊಡೆದು ಜ್ಞಾನದ ಬೆಳಕನ್ನು ಮಠವು ಸಾದರಪಡಿಸುತ್ತಾ ಬಂದಿದೆ. ಧರ್ಮ ಸಂದೇಶಗಳನ್ನು ದೇಶ, ವಿದೇಶಗಳಲ್ಲಿ ಸಾರಿ, ಭಕ್ತರನ್ನು ಸೆಳೆಯುವ ಮುಖೇನ ಮಠದ ಕಾರ್ಯತತ್ಪರತೆ ಹೆಚ್ಚಿಸುತ್ತಿರುವುದು ಸಮಾಜಕ್ಕೆ ಸಾರ್ಥಕತೆ ಬಿತ್ತರಿಸುತ್ತಿದೆ ಎಂದರು.</p>.<p>ಮಾಗಡಿಯ ಜಡೆದೇವರ ಮಠದ ಮಠಾಧೀಶ ಇಮ್ಮಡಿ ಬಸವರಾಜು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾಹಿತಿ ವಿ.ಮನೋಹರ್ ಹಾಜರಿದ್ದರು. </p>.<p>ಸ್ಥಳೀಯ ಶಾಸಕ ಎನ್.ಶ್ರೀನಿವಾಸ್ ಅವರು ಮಠದ ದಾಸೋಹ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ₹50 ಲಕ್ಷ ಮಂಜೂರು ಮಾಡಿಕೊಡುವ ಭರವಸೆ ನೀಡಿದರು.</p>.<p>ಮಾಗಡಿ ಪುರಸಭಾಧ್ಯಕ್ಷೆ ಶಿವರುದ್ರಮ್ಮ ವಿಜಯ ಕುಮಾರ್ ಮತ್ತು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎನ್.ಜಿ.ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕವಿಗಳು ಕವನ ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>