‘ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ನಾಗರಾಜ ಅವರು ಕರ್ತವ್ಯಕ್ಕೆ ಅದೇ ಮಾರ್ಗವಾಗಿ ತೆರಳುತ್ತಿದ್ದರು. ಆ ಸಮಯದಲ್ಲಿ ಮಗುವೊಂದು ನೀರಿನ ತೊಟ್ಟಿಗೆ ಬಿದ್ದು ಅಪಾಯದಲ್ಲಿತ್ತು. ಸ್ಥಳದಲ್ಲಿದ್ದವರು ಮಗುವನ್ನು ಕಾಪಾಡುವಂತೆ ಮನವಿ ಮಾಡುತ್ತಿದ್ದರು. ಸ್ಥಳೀಯರ ಎಲ್ಲ ಪ್ರಯತ್ನಗಳು ವಿಫಲವಾಗಿ, ಮಗು ನೀರು ಕುಡಿಯುತ್ತಿತ್ತು. ಜನರ ಕೂಗಾಟ ಕೇಳಿಸಿಕೊಂಡ ಪಿಎಸ್ಐ, ತಮ್ಮ ವಾಹನ ನಿಲುಗಡೆ ಮಾಡಿ 10 ಅಡಿ ಆಳದ ಸಂಪ್ಗೆ ಇಳಿದು ಮಗುವನ್ನು ರಕ್ಷಿಸಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.