<p><strong>ಬೆಂಗಳೂರು:</strong> ಕಾರ್ಮಿಕ ಚಳವಳಿಯ ಹೋರಾಟವನ್ನು ನೆನಪಿಸುವ ಮ್ಯೂಸಿಯಂ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ಭರವಸೆ ನೀಡಿದರು.</p>.<p>ಕಾಮ್ರೇಡ್ ಸೂರ್ಯನಾರಾಯಣ ರಾವ್ ಅವರ ಜನ್ಮ ಶತಮಾನೋತ್ಸವ– ‘ಕಾಮ್ರೇಡ್ ಸೂರಿ 100’ ಪ್ರಯುಕ್ತ ನಡೆದ ‘ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ ಚಳವಳಿಯ ಪಾತ್ರ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ದುಡಿಯುವ ವರ್ಗದ ಸಾಧನೆಗಳು ಬಿಂಬಿಸುವ ಮ್ಯೂಸಿಯಂ ಬೇಕು ಎಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು’ ಎಂದರು.</p>.<p>‘ಕಾಮ್ರೇಡ್ ಸೂರ್ಯನಾರಾಯಣ ಮತ್ತು ನಾನು ಒಟ್ಟಿಗೆ ವಿಧಾನಸಭೆಗೆ ಪ್ರವೇಶಿಸಿದವರು. ಅವರು ಪೂರ್ಣ ತಯಾರಿಯೊಂದಿಗೆ ಸದನಕ್ಕೆ ಬಂದು ಕಾರ್ಮಿಕರ ಕಲ್ಯಾಣ ಮಾತ್ರವಲ್ಲ; ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಳನೋಟದಿಂದ ಮಾತನಾಡುತ್ತಿದ್ದರು. ಜನರ ಹಿತಕ್ಕಾಗಿ ಬದ್ಧತೆ ಮತ್ತು ಕಾಳಜಿಯಿಂದ ಸದನದ ಒಳಗೂ ಹೊರಗೂ ಹೋರಾಟ ಮಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.</p>.<p>‘ಸೂರಿ ಅವರು ಸುಳ್ಳು ಹೇಳಿಕೆ ನೀಡಿ ಹೋರಾಟ ಮಾಡಿದವರಲ್ಲ. ಆಗಿನ ಬಹುತೇಕ ರಾಜಕಾರಣಿಗಳು ವಿಷಯಾಧಾರಿತವಾಗಿ, ಸತ್ಯ ವಿಚಾರ ತಿಳಿಸಿ ಎಚ್ಚರಿಸುತ್ತಿದ್ದರು. ಆದರೆ ಈಗ ಸುಳ್ಳುಗಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಬಿಂಬಿಸುವ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>ಅಧ್ಯಕ್ಷತೆ ವಹಿಸಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ.ನಾಯರ್, ‘ಕಾರ್ಮಿಕರ ಒಪ್ಪಿಗೆ ಪಡೆಯದೇ ಮುಖಂಡರು ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಕಾಮ್ರೇಡ್ ಸೂರಿ ಅವರು ಈ ವ್ಯವಸ್ಥೆಯನ್ನು ತಪ್ಪಿಸಿದರು. ಕಾರ್ಮಿಕರ ಒಪ್ಪಿಗೆ ಪಡೆದೇ ಮುಂದುವರಿಯುವ ಕ್ರಮವನ್ನು ರೂಢಿಗೆ ತಂದರು’ ಎಂದು ಸ್ಮರಿಸಿದರು.</p>.<p>ದೇಶದ, ಸಮಾಜದ ಅಭಿವೃದ್ಧಿ ಎಂದರೆ ಬಂಡವಾಳಶಾಹಿಗಳ, ಶ್ರೀಮಂತರ ಅಭಿವೃದ್ಧಿಯಲ್ಲ. ಬಡವರ, ಕಾರ್ಮಿಕರ ಕೈಗೆ ಹಣ ಬರಬೇಕು. ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಆಗ ಅಭಿವೃದ್ಧಿ ಸಾಧ್ಯ ಎಂದು ವ್ಯಾಖ್ಯಾನಿಸಿದರು.</p>.<p>ನಿವೃತ್ತ ಪ್ರಾಧ್ಯಾಪಕಿ ಜಾನಕಿ ನಾಯರ್ ಮಾತನಾಡಿ, ‘ದುಡಿಮೆ ಅವಧಿ ಕಡಿಮೆ ಮಾಡಿ ಎಂದು ನೂರು ವರ್ಷ ಹೋರಾಟ ಮಾಡಿ 8 ಗಂಟೆಯ ದುಡಿಮೆ ಜಾರಿಗೆ ಬರುವಂತೆ ಕಾರ್ಮಿಕರು ಮಾಡಿದ್ದರು. ಈಗ ಅದಕ್ಕೆ ವಿರುದ್ಧವಾಗಿ ನವ ಬಂಡವಾಳಶಾಹಿಗಳು 12 ಗಂಟೆ– 14 ಗಂಟೆಗೆ ಹೆಚ್ಚಿಸಲು ಮುಂದಾಗಿದ್ದಾರೆ. ಆ್ಯಪ್ ಆಧಾರಿತ ಸ್ವಿಗ್ಗಿ, ಜೊಮೆಟೊ, ಓಲಾಗಳಲ್ಲಿ ದುಡಿಮೆ ಅವಧಿ ಗಣನೆಯೇ ಇಲ್ಲ’ ಎಂದು ವಿಷಾದಿಸಿದರು. </p>.<p>ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ವಿಚಾರ ಸಂಕಿರಣ ಉದ್ಘಾಟಿಸಿದರು. ಸಿಪಿಎಂ ಕಾರ್ಯದರ್ಶಿ ಯು. ಬಸವರಾಜ್, ಸೂರಿಯವರ ಪುತ್ರಿ ರೇಖಾ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಾರ್ಮಿಕ ಚಳವಳಿಯ ಹೋರಾಟವನ್ನು ನೆನಪಿಸುವ ಮ್ಯೂಸಿಯಂ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ಭರವಸೆ ನೀಡಿದರು.</p>.<p>ಕಾಮ್ರೇಡ್ ಸೂರ್ಯನಾರಾಯಣ ರಾವ್ ಅವರ ಜನ್ಮ ಶತಮಾನೋತ್ಸವ– ‘ಕಾಮ್ರೇಡ್ ಸೂರಿ 100’ ಪ್ರಯುಕ್ತ ನಡೆದ ‘ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ ಚಳವಳಿಯ ಪಾತ್ರ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ದುಡಿಯುವ ವರ್ಗದ ಸಾಧನೆಗಳು ಬಿಂಬಿಸುವ ಮ್ಯೂಸಿಯಂ ಬೇಕು ಎಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು’ ಎಂದರು.</p>.<p>‘ಕಾಮ್ರೇಡ್ ಸೂರ್ಯನಾರಾಯಣ ಮತ್ತು ನಾನು ಒಟ್ಟಿಗೆ ವಿಧಾನಸಭೆಗೆ ಪ್ರವೇಶಿಸಿದವರು. ಅವರು ಪೂರ್ಣ ತಯಾರಿಯೊಂದಿಗೆ ಸದನಕ್ಕೆ ಬಂದು ಕಾರ್ಮಿಕರ ಕಲ್ಯಾಣ ಮಾತ್ರವಲ್ಲ; ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಳನೋಟದಿಂದ ಮಾತನಾಡುತ್ತಿದ್ದರು. ಜನರ ಹಿತಕ್ಕಾಗಿ ಬದ್ಧತೆ ಮತ್ತು ಕಾಳಜಿಯಿಂದ ಸದನದ ಒಳಗೂ ಹೊರಗೂ ಹೋರಾಟ ಮಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.</p>.<p>‘ಸೂರಿ ಅವರು ಸುಳ್ಳು ಹೇಳಿಕೆ ನೀಡಿ ಹೋರಾಟ ಮಾಡಿದವರಲ್ಲ. ಆಗಿನ ಬಹುತೇಕ ರಾಜಕಾರಣಿಗಳು ವಿಷಯಾಧಾರಿತವಾಗಿ, ಸತ್ಯ ವಿಚಾರ ತಿಳಿಸಿ ಎಚ್ಚರಿಸುತ್ತಿದ್ದರು. ಆದರೆ ಈಗ ಸುಳ್ಳುಗಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಬಿಂಬಿಸುವ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>ಅಧ್ಯಕ್ಷತೆ ವಹಿಸಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ.ನಾಯರ್, ‘ಕಾರ್ಮಿಕರ ಒಪ್ಪಿಗೆ ಪಡೆಯದೇ ಮುಖಂಡರು ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಕಾಮ್ರೇಡ್ ಸೂರಿ ಅವರು ಈ ವ್ಯವಸ್ಥೆಯನ್ನು ತಪ್ಪಿಸಿದರು. ಕಾರ್ಮಿಕರ ಒಪ್ಪಿಗೆ ಪಡೆದೇ ಮುಂದುವರಿಯುವ ಕ್ರಮವನ್ನು ರೂಢಿಗೆ ತಂದರು’ ಎಂದು ಸ್ಮರಿಸಿದರು.</p>.<p>ದೇಶದ, ಸಮಾಜದ ಅಭಿವೃದ್ಧಿ ಎಂದರೆ ಬಂಡವಾಳಶಾಹಿಗಳ, ಶ್ರೀಮಂತರ ಅಭಿವೃದ್ಧಿಯಲ್ಲ. ಬಡವರ, ಕಾರ್ಮಿಕರ ಕೈಗೆ ಹಣ ಬರಬೇಕು. ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಆಗ ಅಭಿವೃದ್ಧಿ ಸಾಧ್ಯ ಎಂದು ವ್ಯಾಖ್ಯಾನಿಸಿದರು.</p>.<p>ನಿವೃತ್ತ ಪ್ರಾಧ್ಯಾಪಕಿ ಜಾನಕಿ ನಾಯರ್ ಮಾತನಾಡಿ, ‘ದುಡಿಮೆ ಅವಧಿ ಕಡಿಮೆ ಮಾಡಿ ಎಂದು ನೂರು ವರ್ಷ ಹೋರಾಟ ಮಾಡಿ 8 ಗಂಟೆಯ ದುಡಿಮೆ ಜಾರಿಗೆ ಬರುವಂತೆ ಕಾರ್ಮಿಕರು ಮಾಡಿದ್ದರು. ಈಗ ಅದಕ್ಕೆ ವಿರುದ್ಧವಾಗಿ ನವ ಬಂಡವಾಳಶಾಹಿಗಳು 12 ಗಂಟೆ– 14 ಗಂಟೆಗೆ ಹೆಚ್ಚಿಸಲು ಮುಂದಾಗಿದ್ದಾರೆ. ಆ್ಯಪ್ ಆಧಾರಿತ ಸ್ವಿಗ್ಗಿ, ಜೊಮೆಟೊ, ಓಲಾಗಳಲ್ಲಿ ದುಡಿಮೆ ಅವಧಿ ಗಣನೆಯೇ ಇಲ್ಲ’ ಎಂದು ವಿಷಾದಿಸಿದರು. </p>.<p>ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ವಿಚಾರ ಸಂಕಿರಣ ಉದ್ಘಾಟಿಸಿದರು. ಸಿಪಿಎಂ ಕಾರ್ಯದರ್ಶಿ ಯು. ಬಸವರಾಜ್, ಸೂರಿಯವರ ಪುತ್ರಿ ರೇಖಾ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>