<p><strong>ಬೆಂಗಳೂರು: </strong>‘ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಮಾಫಿಯಾಕ್ಕೆ ಹಿಂಬಾಗಿಲಿನಿಂದ ಮತ್ತೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆದಿದೆ’ ಎಂದು ಜಾಹೀರಾತು ಹಾವಳಿ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದ್ದಾರೆ.</p>.<p>ನಗರದಲ್ಲಿ ಮತ್ತೆ ಹೋರ್ಡಿಂಗ್ ಜಾಹೀರಾತು ಅಳವಡಿಕೆ ಅವಕಾಶ ಕಲ್ಪಿಸುವ ಕುರಿತು ಚರ್ಚೆಗಳು ನಡೆದಿರುವ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, 10 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ ಜಾಹೀರಾತು ಮಾಫಿಯಾದ ಕಡಿವಾಣಕ್ಕೆ ತಾವೇ ಮುಂದೆ ನಿಂತು ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಆಯುಕ್ತರನ್ನು ಒತ್ತಾಯಿಸಿದ್ದಾರೆ.</p>.<p><strong>ಪ್ರಶ್ನೆಗಳು ಇಂತಿವೆ:</strong></p>.<p>* ತಾವು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದಾಗಲೂ ಬಿಬಿಎಂಪಿ ಜಾಹೀರಾತು ಬೈಲಾಕ್ಕೆ ತದ್ವಿರುದ್ಧವಾಗಿ ಇಲಾಖೆ ವತಿಯಿಂದ ಇನ್ನೊಂದು ಜಾಹೀರಾತು ಬೈಲಾವನ್ನು ಸಿದ್ಧಪಡಿಸಿದ್ದಿರಿ. ಅದರನ್ವಯ ವಿಧಾನ ಸೌಧದ ಆಸುಪಾಸು ಸೇರಿದಂತೆ ಬಿಬಿಎಂಪಿಯ ಎಲ್ಲ ಪ್ರದೇಶಗಳಲ್ಲೂ ಜಾಹೀರಾತಿಗೆ ಅವಕಾಶ ನೀಡಲಾಗಿತ್ತು ಏಕೆ?</p>.<p>* ಪಾಲಿಕೆಗೆ ವರ್ಷವಾರು ಬಂದಿರುವ ಜಾಹೀರಾತು ತೆರಿಗೆ ಹಣ ಮತ್ತು ಅನಧಿಕೃತ ಜಾಹೀರಾತು ತೆರವುಗೊಳಿಸಲು ಖರ್ಚು ಮಾಡಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೀರಾ?</p>.<p>* ಈ ಹಿಂದೆ ಕೆ.ಮಥಾಯಿ ಅವರುಪಾಲಿಕೆಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದಾಗ ಜಾಹೀರಾತು ಶುಲ್ಕದಿಂದ ₹ 2 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿಯನ್ನು ಓದಿದ್ದೀರಾ? ಅದರ ವಸೂಲಿಗೆ ತಾವು ಕೈಗೊಂಡ ಕ್ರಮಗಳೇನು?</p>.<p>* ಈಗಾಗಲೇ ಜಾಹೀರಾತಿನಿಂದ ನೂರಾರು ಕೋಟಿ ರೂಪಾಯಿ ತೆರಿಗೆ ಬಿಬಿಎಂಪಿಗೆ ಬರಬೇಕಾಗಿದ್ದು, ಇದರ ವಸೂಲಿ ಬಗ್ಗೆ ತಾವು ಕೈಗೊಂಡ ಕ್ರಮಗಳೇನು?</p>.<p>* ಜಾಹೀರಾತು ಬೈಲಾ 2018ರ ಪ್ರಕಾರ ಜಾಹೀರಾತು ಚೌಕಟ್ಟುಗಳನ್ನು ತೆರವುಗೊಳಿಸಲುಹೈಕೋರ್ಟ್ ನಿರ್ದೇಶನ ನೀಡಿದ್ದರೂ, ಇನ್ನೂ ಹಿಂದೇಟು ಹಾಕುತ್ತಿರುವ ಗುಟ್ಟೇನು?</p>.<p>* ಈ ಹಿಂದೆ ಜಾಹೀರಾತು ಅಳವಡಿಸುವ ಸಂದರ್ಭದಲ್ಲಿ ಹೈಕೋರ್ಟ್ನ ರಿಟ್ ಅರ್ಜಿ ಸಂಬಂಧ ತಪ್ಪು ಸಂಖ್ಯೆ ನಮೂದಿಸುವುದು ಹಾಗೂ ಪರವಾನಗಿ ಪಡೆದ ಅಳತೆಗಿಂತ ಹೆಚ್ಚು ಜಾಹೀರಾತು ಅಳವಡಿಸಿದ್ದು ಹಾಗೂ ಜಾಹೀರಾತು ಬೈಲಾಕ್ಕೆ ವಿರುದ್ಧವಾಗಿ ಜಾಹೀರಾತು ಅಳವಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ?</p>.<p>* ಈಗಾಗಲೇ ಪಾಲಿಕೆ ಹೊಸ ಜಾಹೀರಾತು ಬೈಲಾ -2018 ಜಾರಿಗೆ ತಂದಿದ್ದರೂ ತಾವು ಉದ್ದೇಶಕ್ಕೋಸ್ಕರವಾಗಿ ಹೊಸ ನಿಯಮಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಂಡಿರುವುದು. ಅಂದರೆ, ಬಿಬಿಎಂಪಿ ಕೌನ್ಸಿಲ್ಗೂ ವಿರುದ್ಧವಾದ ತೀರ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸಮಂಜಸ?</p>.<p>* ಜಾಹೀರಾತು ಹಗರಣದ ಬಗ್ಗೆ ಲೋಕಾಯುಕ ಸಂಸ್ಥೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿದೆ. ಅಲ್ಲದೇ, ರಾಜ್ಯ ಸರ್ಕಾರವೂ ಕೂಡ ಇದರ ಬಗ್ಗೆ ಸಿ.ಐ.ಡಿ. ತನಿಖೆಗೆ ಆದೇಶ ನೀಡಿದೆ. ಇದು ಗಮನಕ್ಕೆ ಬಂದಿಲ್ಲವೇ?</p>.<p>* ಈ ಮೊದಲು ಎಲ್ಲೆಂದರಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದರಿಂದ ನಗರದ ಸೌಂದರ್ಯ ಹಾಳು ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲವೆ? ಇದಕ್ಕೆಲ್ಲಾ ಬೆಂಗಳೂರಿನ ನಾಗರಿಕರು, ರಾಜ್ಯ ಸರ್ಕಾರ ಮತ್ತು ಮೇಯರ್ ಮತ್ತು ಬಹುತೇಕ ಸದಸ್ಯರು ಇದರ ವಿರುದ್ಧ ಇದ್ದರೂ ಜಾಹೀರಾತು ವಾಪಾಸು ತರುವ ಪ್ರಯತ್ನೇವೇಕೆ?</p>.<p>* ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಕಸ ನಿರ್ವಹಣೆ, ರಸ್ತೆ ಗುಂಡಿಗಳ ಸಮಸ್ಯೆ, ಕೆರೆಗಳ ಸಮಸ್ಯೆ, ನಗರ ಸಾರ್ವಜನಿಕರ ಮೂಲಸೌಕರ್ಯ ಒದಗಿಸುವ ಕಾರ್ಯಗಳಿಗೆ ಆದ್ಯತೆ ನೀಡುವ ಬದಲು ಕೇವಲ ಜಾಹೀರಾತು ನಿಯಮದಬಗ್ಗೆ ಕಾಳಜಿ ವಹಿಸುತ್ತಿರುವ ಗುಟ್ಟೇನು?</p>.<p>ಸಾಯಿದತ್ತ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್ ನಗರದಲ್ಲಿ ಹೋರ್ಡಿಂಗ್ಗಳನ್ನು ಸಂಪೂರ್ಣ ತೆರವುಗೊಳಿಸುವಂತೆ ಆದೇಶ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಮಾಫಿಯಾಕ್ಕೆ ಹಿಂಬಾಗಿಲಿನಿಂದ ಮತ್ತೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆದಿದೆ’ ಎಂದು ಜಾಹೀರಾತು ಹಾವಳಿ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದ್ದಾರೆ.</p>.<p>ನಗರದಲ್ಲಿ ಮತ್ತೆ ಹೋರ್ಡಿಂಗ್ ಜಾಹೀರಾತು ಅಳವಡಿಕೆ ಅವಕಾಶ ಕಲ್ಪಿಸುವ ಕುರಿತು ಚರ್ಚೆಗಳು ನಡೆದಿರುವ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, 10 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ ಜಾಹೀರಾತು ಮಾಫಿಯಾದ ಕಡಿವಾಣಕ್ಕೆ ತಾವೇ ಮುಂದೆ ನಿಂತು ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಆಯುಕ್ತರನ್ನು ಒತ್ತಾಯಿಸಿದ್ದಾರೆ.</p>.<p><strong>ಪ್ರಶ್ನೆಗಳು ಇಂತಿವೆ:</strong></p>.<p>* ತಾವು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದಾಗಲೂ ಬಿಬಿಎಂಪಿ ಜಾಹೀರಾತು ಬೈಲಾಕ್ಕೆ ತದ್ವಿರುದ್ಧವಾಗಿ ಇಲಾಖೆ ವತಿಯಿಂದ ಇನ್ನೊಂದು ಜಾಹೀರಾತು ಬೈಲಾವನ್ನು ಸಿದ್ಧಪಡಿಸಿದ್ದಿರಿ. ಅದರನ್ವಯ ವಿಧಾನ ಸೌಧದ ಆಸುಪಾಸು ಸೇರಿದಂತೆ ಬಿಬಿಎಂಪಿಯ ಎಲ್ಲ ಪ್ರದೇಶಗಳಲ್ಲೂ ಜಾಹೀರಾತಿಗೆ ಅವಕಾಶ ನೀಡಲಾಗಿತ್ತು ಏಕೆ?</p>.<p>* ಪಾಲಿಕೆಗೆ ವರ್ಷವಾರು ಬಂದಿರುವ ಜಾಹೀರಾತು ತೆರಿಗೆ ಹಣ ಮತ್ತು ಅನಧಿಕೃತ ಜಾಹೀರಾತು ತೆರವುಗೊಳಿಸಲು ಖರ್ಚು ಮಾಡಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೀರಾ?</p>.<p>* ಈ ಹಿಂದೆ ಕೆ.ಮಥಾಯಿ ಅವರುಪಾಲಿಕೆಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದಾಗ ಜಾಹೀರಾತು ಶುಲ್ಕದಿಂದ ₹ 2 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿಯನ್ನು ಓದಿದ್ದೀರಾ? ಅದರ ವಸೂಲಿಗೆ ತಾವು ಕೈಗೊಂಡ ಕ್ರಮಗಳೇನು?</p>.<p>* ಈಗಾಗಲೇ ಜಾಹೀರಾತಿನಿಂದ ನೂರಾರು ಕೋಟಿ ರೂಪಾಯಿ ತೆರಿಗೆ ಬಿಬಿಎಂಪಿಗೆ ಬರಬೇಕಾಗಿದ್ದು, ಇದರ ವಸೂಲಿ ಬಗ್ಗೆ ತಾವು ಕೈಗೊಂಡ ಕ್ರಮಗಳೇನು?</p>.<p>* ಜಾಹೀರಾತು ಬೈಲಾ 2018ರ ಪ್ರಕಾರ ಜಾಹೀರಾತು ಚೌಕಟ್ಟುಗಳನ್ನು ತೆರವುಗೊಳಿಸಲುಹೈಕೋರ್ಟ್ ನಿರ್ದೇಶನ ನೀಡಿದ್ದರೂ, ಇನ್ನೂ ಹಿಂದೇಟು ಹಾಕುತ್ತಿರುವ ಗುಟ್ಟೇನು?</p>.<p>* ಈ ಹಿಂದೆ ಜಾಹೀರಾತು ಅಳವಡಿಸುವ ಸಂದರ್ಭದಲ್ಲಿ ಹೈಕೋರ್ಟ್ನ ರಿಟ್ ಅರ್ಜಿ ಸಂಬಂಧ ತಪ್ಪು ಸಂಖ್ಯೆ ನಮೂದಿಸುವುದು ಹಾಗೂ ಪರವಾನಗಿ ಪಡೆದ ಅಳತೆಗಿಂತ ಹೆಚ್ಚು ಜಾಹೀರಾತು ಅಳವಡಿಸಿದ್ದು ಹಾಗೂ ಜಾಹೀರಾತು ಬೈಲಾಕ್ಕೆ ವಿರುದ್ಧವಾಗಿ ಜಾಹೀರಾತು ಅಳವಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ?</p>.<p>* ಈಗಾಗಲೇ ಪಾಲಿಕೆ ಹೊಸ ಜಾಹೀರಾತು ಬೈಲಾ -2018 ಜಾರಿಗೆ ತಂದಿದ್ದರೂ ತಾವು ಉದ್ದೇಶಕ್ಕೋಸ್ಕರವಾಗಿ ಹೊಸ ನಿಯಮಗಳನ್ನು ಅಳವಡಿಸಲು ಸಿದ್ಧತೆ ಮಾಡಿಕೊಂಡಿರುವುದು. ಅಂದರೆ, ಬಿಬಿಎಂಪಿ ಕೌನ್ಸಿಲ್ಗೂ ವಿರುದ್ಧವಾದ ತೀರ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸಮಂಜಸ?</p>.<p>* ಜಾಹೀರಾತು ಹಗರಣದ ಬಗ್ಗೆ ಲೋಕಾಯುಕ ಸಂಸ್ಥೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿದೆ. ಅಲ್ಲದೇ, ರಾಜ್ಯ ಸರ್ಕಾರವೂ ಕೂಡ ಇದರ ಬಗ್ಗೆ ಸಿ.ಐ.ಡಿ. ತನಿಖೆಗೆ ಆದೇಶ ನೀಡಿದೆ. ಇದು ಗಮನಕ್ಕೆ ಬಂದಿಲ್ಲವೇ?</p>.<p>* ಈ ಮೊದಲು ಎಲ್ಲೆಂದರಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದರಿಂದ ನಗರದ ಸೌಂದರ್ಯ ಹಾಳು ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲವೆ? ಇದಕ್ಕೆಲ್ಲಾ ಬೆಂಗಳೂರಿನ ನಾಗರಿಕರು, ರಾಜ್ಯ ಸರ್ಕಾರ ಮತ್ತು ಮೇಯರ್ ಮತ್ತು ಬಹುತೇಕ ಸದಸ್ಯರು ಇದರ ವಿರುದ್ಧ ಇದ್ದರೂ ಜಾಹೀರಾತು ವಾಪಾಸು ತರುವ ಪ್ರಯತ್ನೇವೇಕೆ?</p>.<p>* ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಕಸ ನಿರ್ವಹಣೆ, ರಸ್ತೆ ಗುಂಡಿಗಳ ಸಮಸ್ಯೆ, ಕೆರೆಗಳ ಸಮಸ್ಯೆ, ನಗರ ಸಾರ್ವಜನಿಕರ ಮೂಲಸೌಕರ್ಯ ಒದಗಿಸುವ ಕಾರ್ಯಗಳಿಗೆ ಆದ್ಯತೆ ನೀಡುವ ಬದಲು ಕೇವಲ ಜಾಹೀರಾತು ನಿಯಮದಬಗ್ಗೆ ಕಾಳಜಿ ವಹಿಸುತ್ತಿರುವ ಗುಟ್ಟೇನು?</p>.<p>ಸಾಯಿದತ್ತ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್ ನಗರದಲ್ಲಿ ಹೋರ್ಡಿಂಗ್ಗಳನ್ನು ಸಂಪೂರ್ಣ ತೆರವುಗೊಳಿಸುವಂತೆ ಆದೇಶ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>