ಕಾರ್ಯಕಾರಿ ಸಮಿತಿ ಸಭೆಗಳನ್ನು ಕರೆದಿಲ್ಲ, ಬಿಯರ್ ಪೂರೈಕೆಯಲ್ಲಿ ನಷ್ಟ, ಬಾರ್ ಅಧ್ಯಕ್ಷರಿಗೆ ಹಣ ಪಾವತಿ, ಲೆಕ್ಕಪತ್ರಗಳನ್ನು ಕಾರ್ಯಕಾರಿ ಸಮಿತಿಗೆ ನೀಡದಿರುವುದು, ಅಧ್ಯಕ್ಷ ಮತ್ತು ಕಾರ್ಯದರ್ಶಿ ನಡುವೆ ಸಮನ್ವಯ ಕೊರತೆ, ಆಡಳಿತ ಮಂಡಳಿಯಿಂದ ಹಣ ದುರುಪಯೋಗ, ನಿಯಮಬಾಹಿರವಾಗಿ ಸದಸ್ಯರ ಅಮಾನತು, ವಾರ್ಷಿಕ ಸಭೆ ನಡೆಸದಿರುವುದು, ಏಪ್ರಿಲ್ 30ಕ್ಕೇ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿದ್ದರೂ, ಮೇ 8ರಂದು ಸಭೆ ನಡೆಸಿ ಚುನಾವಣೆ ನಿಗದಿಪಡಿಸಿರುವುದು ನಿಯಮಬಾಹಿರವಾಗಿದ್ದು, ಈಗಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಆಡಳಿತಾಧಿಕಾರಿ ನೇಮಿಸಿ ಸಹಕಾರ ಇಲಾಖೆ ಮೇ 21ರಂದು ಆದೇಶ ಹೊರಡಿಸಿದೆ.