ಶ್ರೀವಿಜಯ, ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಜತೆಗೆ ಇತ್ತೀಚಿನವರಾದ ಎಂ. ರಾಘವೇಂದ್ರರಾವ್, ಆರ್. ಶಂಕರನಾರಾಯಣ ಅವರ ವರೆಗಿನ ಹಲವು ಆಯ್ದ ಕವಿಗಳು ಹಾಗೂ ಅವರ ಪ್ರಮುಖ ಕಾವ್ಯಗಳ ಪರಿಚಯ ಈ ಸರಣಿಯ ಉದ್ದೇಶ. ಹಿರಿಯ ವಿದ್ವಾಂಸರು, ವಿಮರ್ಶಕರು ಕವಿ-ಕಾವ್ಯಗಳ ವಿವರವನ್ನು ಸಂಕ್ಷಿಪ್ತವಾಗಿ ಕೇಳುಗರಿಗೆ ಕಟ್ಟಿ ಕೊಡಲಿದ್ದಾರೆ.