<p><strong>ಬೆಂಗಳೂರು:</strong> ದಿವಂಗತ ಅನಂತಕುಮಾರ್ ಅವರ ಅಪೂರ್ಣ ಕೆಲಸಗಳು ಮತ್ತು ಕನಸುಗಳನ್ನು ಪೂರ್ಣಗೊಳಿಸಲು ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಮುಂದಾಗಬೇಕು ಎಂದುತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸಲಹೆ ನೀಡಿದರು.</p>.<p>‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೆ ತೇಜಸ್ವಿನಿ ಅವರೂ ದೇಶಕ್ಕೆ ಕೊಡುಗೆಯಾಗಲಿ. ಕರ್ನಾಟಕ ಮತ್ತು ದೆಹಲಿಗೆ ಕೊಂಡಿಯಾಗಿ ಮಹತ್ವದ ಪಾತ್ರವಹಿಸಲಿ’ ಎಂದು ಅವರು ಭಾನುವಾರ ಅನಂತನಮನ ಕಾರ್ಯಕ್ರಮದಲ್ಲಿ ಹಾರೈಸಿದರು.</p>.<p>ತೇಜಸ್ವಿನಿಯವರು ಜನ ಸಾಮಾನ್ಯರ ದೂರು– ದುಮ್ಮಾನಗಳನ್ನು ತಾಯಿಯ ಹೃದಯದಿಂದ ಆಲಿಸುತ್ತಾರೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಚುನಾಯಿತ ಪ್ರತಿನಿಧಿಯಾಗಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದೂ ಸ್ವಾಮೀಜಿ ಹೇಳಿದರು.</p>.<p><strong>ಚಿತ್ರ ಪ್ರದರ್ಶನಕ್ಕೆ ಚಾಲನೆ:</strong>ಅನಂತಕುಮಾರ್ ಅವರ ಬಾಲ್ಯದಿಂದ ಕೊನೆಯ ಹಂತದವರೆಗಿನ ನೆನಪನ್ನು ಕಟ್ಟಿಕೊಡುವ ಛಾಯಾಚಿತ್ರಗಳ ಪ್ರದರ್ಶನ ‘ಅನಂತಯಾನ’ಕ್ಕೆ ಭಾನುವಾರ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಚಾಲನೆ ನೀಡಲಾಯಿತು.</p>.<p>ಮೂರು ದಿನಗಳ ‘ಅನಂತ ನಮನ’ ಕಾರ್ಯಕ್ರಮದ ಭಾಗವಾಗಿ ‘ಅನಂತ ಯಾನ ಚಿತ್ರ ನಮನ’ ಏರ್ಪಡಿಸಲಾಗಿತ್ತು. ಛಾಯಾಚಿತ್ರ ಪ್ರದರ್ಶನ ಜನವರಿ 2ರವರೆಗೆ ಇರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದಿವಂಗತ ಅನಂತಕುಮಾರ್ ಅವರ ಅಪೂರ್ಣ ಕೆಲಸಗಳು ಮತ್ತು ಕನಸುಗಳನ್ನು ಪೂರ್ಣಗೊಳಿಸಲು ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಮುಂದಾಗಬೇಕು ಎಂದುತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸಲಹೆ ನೀಡಿದರು.</p>.<p>‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೆ ತೇಜಸ್ವಿನಿ ಅವರೂ ದೇಶಕ್ಕೆ ಕೊಡುಗೆಯಾಗಲಿ. ಕರ್ನಾಟಕ ಮತ್ತು ದೆಹಲಿಗೆ ಕೊಂಡಿಯಾಗಿ ಮಹತ್ವದ ಪಾತ್ರವಹಿಸಲಿ’ ಎಂದು ಅವರು ಭಾನುವಾರ ಅನಂತನಮನ ಕಾರ್ಯಕ್ರಮದಲ್ಲಿ ಹಾರೈಸಿದರು.</p>.<p>ತೇಜಸ್ವಿನಿಯವರು ಜನ ಸಾಮಾನ್ಯರ ದೂರು– ದುಮ್ಮಾನಗಳನ್ನು ತಾಯಿಯ ಹೃದಯದಿಂದ ಆಲಿಸುತ್ತಾರೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಚುನಾಯಿತ ಪ್ರತಿನಿಧಿಯಾಗಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದೂ ಸ್ವಾಮೀಜಿ ಹೇಳಿದರು.</p>.<p><strong>ಚಿತ್ರ ಪ್ರದರ್ಶನಕ್ಕೆ ಚಾಲನೆ:</strong>ಅನಂತಕುಮಾರ್ ಅವರ ಬಾಲ್ಯದಿಂದ ಕೊನೆಯ ಹಂತದವರೆಗಿನ ನೆನಪನ್ನು ಕಟ್ಟಿಕೊಡುವ ಛಾಯಾಚಿತ್ರಗಳ ಪ್ರದರ್ಶನ ‘ಅನಂತಯಾನ’ಕ್ಕೆ ಭಾನುವಾರ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಚಾಲನೆ ನೀಡಲಾಯಿತು.</p>.<p>ಮೂರು ದಿನಗಳ ‘ಅನಂತ ನಮನ’ ಕಾರ್ಯಕ್ರಮದ ಭಾಗವಾಗಿ ‘ಅನಂತ ಯಾನ ಚಿತ್ರ ನಮನ’ ಏರ್ಪಡಿಸಲಾಗಿತ್ತು. ಛಾಯಾಚಿತ್ರ ಪ್ರದರ್ಶನ ಜನವರಿ 2ರವರೆಗೆ ಇರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>