ಬೆಂಗಳೂರು: ಭೂಮಿಜಾ ಟ್ರಸ್ಟ್ ಇಲ್ಲಿನ ರಂಗಶಂಕರದಲ್ಲಿ ಇದೇ 23 ಮತ್ತು 24ರ ಸಂಜೆ 7.30ಕ್ಕೆ ‘ಆರೋಹ’ ಸಂಗೀತ–ನಾಟಕ ಪ್ರದರ್ಶನ ಆಯೋಜಿಸಿದೆ.
ಮೈಸೂರು ಮಂಜುನಾಥ್ ಅವರ ಸಂಗೀತದಲ್ಲಿ ಈ ನಾಟಕ ಮೂಡಿಬರಲಿದೆ. ಎಸ್. ಸುರೇಂದ್ರನಾಥ್ ಅವರು ನಾಟಕ ನಿರ್ದೇಶಿಸಿದ್ದಾರೆ. ಕಲಾವಿದಶ್ರೀನಿವಾಸ ಪ್ರಭು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 90 ನಿಮಿಷಗಳ ಈ ಸಂಗೀತ ನಾಟಕದಲ್ಲಿ 20 ಯುವ ಕಲಾವಿದರು ಸಂಗೀತ ಮೇಳ ನಡೆಸಲಿದ್ದಾರೆ.
ವಯೋಲಿನ್ ಜತೆಗೆ ವಿವಿಧ ವಾದ್ಯಗಳ ವಾದನವೂ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ನಾಟಕ ವೀಕ್ಷಣೆಗೆ ₹ 300 ಪ್ರವೇಶ ಶುಲ್ಕ ವಿಧಿಸಲಾಗಿದ್ದು, ಟಿಕೆಟ್ಗಳು ಬುಕ್ಮೈ ಶೋದಲ್ಲಿ ಲಭ್ಯವಿದೆ.