ಈ ಬಗ್ಗೆ ಮಾತನಾಡಿರುವ ರಾಜರಾಜೇಶ್ವರಿನಗರ ಪೊಲೀಸರು, ‘ದೂರುದಾರ ಹೇಳಿದ ರೀತಿಯಲ್ಲಿ ಘಟನೆ ಆಗಿಲ್ಲ. ಅವರ ಹೇಳಿಕೆಯಲ್ಲಿ ಸಾಕಷ್ಟು ಅನುಮಾನಗಳಿವೆ. ಭಾನುವಾರ ನಸುಕಿನಲ್ಲಿ ಮಾಹಿತಿ ನೀಡಿ ಹೋಗಿರುವ ಕಿರಣ್, ಸ್ಪಷ್ಟ ದೂರು ನೀಡಲು ರಾತ್ರಿಯಾದರೂ ಠಾಣೆಗೆ ಬಂದಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು.