ಆಸ್ಟರ್ ಆರ್ವಿ ಆಸ್ಪತ್ರೆಯ ಅಪಸ್ಮಾರ ಸಲಹಾ ತಜ್ಞ ಡಾ.ಖೇಣಿ ರವೀಶ್ ರಾಜೀವ್, ‘ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗಳಿಂದಾಗಿ ಅಪಸ್ಮಾರ ನಿರ್ವಹಣೆ ಮಾಡಲು ಮತ್ತು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಆದರೂ ಸೆಳೆತ ಅಥವಾ ಫಿಟ್ಸ್ ಕುರಿತಾಗಿ ಜನರಲ್ಲಿ ಕೆಲವು ಮೂಢನಂಬಿಕೆಗಳಿವೆ. ಅಪಸ್ಮಾರ ರೋಗಿಗಳು ಶಾಲೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ವೈವಾಹಿಕ ಜೀವನ
ದಲ್ಲಿ ಎದುರಿಸುವ ಸಾಮಾಜಿಕ ತಾರತಮ್ಯ ಕಡಿಮೆಗೊಳಿಸಲು ಪ್ರಯತ್ನಿಸಲಿದ್ದೇವೆ’ ಎಂದು ವಿವರಿಸಿದರು.