<p><strong>ಬೆಂಗಳೂರು</strong>: ನಿಲ್ದಾಣಗಳ ಬಳಿ ನಿಂತಿರುತ್ತಿದ್ದ ಚಾಲಕರನ್ನು ಪರಿಚಯ ಮಾಡಿಕೊಂಡು ಅವರಿಗೆ ಮದ್ಯ ಕುಡಿಸಿ ಆಟೊ ಕದ್ದೊಯ್ಯುತ್ತಿದ್ದ ಆರೋಪಿ ವಿಷ್ಣುನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಆರೋಪಿ ವಿಷ್ಣು, ಕೆಂಗೇರಿಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗುತ್ತಿದ್ದ. ಈತನನ್ನು ಬಂಧಿಸಿ, 2 ಆಟೊ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದರು.</p>.<p>‘ಎಂಟನೇ ಮೈಲಿ ಬಳಿ ಚಾಲಕ ವಿಜಯ್ಕುಮಾರ್ ಅವರನ್ನು ಅಗಸ್ಟ್ 17ರಂದು ಪರಿಚಯ ಮಾಡಿಕೊಂಡಿದ್ದ ಆರೋಪಿ, ಸ್ನೇಹ ಬೆಳೆಸಿದ್ದ. ನಂತರ, ಮದ್ಯ ಕುಡಿಯೋಣವೆಂದು ಆಟೊ ಸಮೇತ ಕರೆದೊಯ್ದಿದ್ದ. ಇಬ್ಬರೂ ಸೇರಿ ಮದ್ಯ ಕುಡಿದಿದ್ದರು. ಆರೋಪಿಯೇ ಮದ್ಯದ ಬಿಲ್ ಪಾವತಿಸಿದ್ದ.’</p>.<p>‘ಪಾನಮತ್ತನಾಗಿದ್ದ ವಿಜಯ್ಕುಮಾರ್ ಅವರನ್ನು ಜಾಗವೊಂದರಲ್ಲಿ ಮಲಗಿಸಿದ್ದ. ನಂತರ, ಅವರ ಆಟೊ ಸಮೇತ ಪರಾರಿಯಾಗಿದ್ದ. ವಿಜಯ್ಕುಮಾರ್ ಅವರು ಮರುದಿನ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಿಲ್ದಾಣಗಳ ಬಳಿ ನಿಂತಿರುತ್ತಿದ್ದ ಚಾಲಕರನ್ನು ಪರಿಚಯ ಮಾಡಿಕೊಂಡು ಅವರಿಗೆ ಮದ್ಯ ಕುಡಿಸಿ ಆಟೊ ಕದ್ದೊಯ್ಯುತ್ತಿದ್ದ ಆರೋಪಿ ವಿಷ್ಣುನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>‘ಆರೋಪಿ ವಿಷ್ಣು, ಕೆಂಗೇರಿಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಕೃತ್ಯ ಎಸಗುತ್ತಿದ್ದ. ಈತನನ್ನು ಬಂಧಿಸಿ, 2 ಆಟೊ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ’ ಎಂದರು.</p>.<p>‘ಎಂಟನೇ ಮೈಲಿ ಬಳಿ ಚಾಲಕ ವಿಜಯ್ಕುಮಾರ್ ಅವರನ್ನು ಅಗಸ್ಟ್ 17ರಂದು ಪರಿಚಯ ಮಾಡಿಕೊಂಡಿದ್ದ ಆರೋಪಿ, ಸ್ನೇಹ ಬೆಳೆಸಿದ್ದ. ನಂತರ, ಮದ್ಯ ಕುಡಿಯೋಣವೆಂದು ಆಟೊ ಸಮೇತ ಕರೆದೊಯ್ದಿದ್ದ. ಇಬ್ಬರೂ ಸೇರಿ ಮದ್ಯ ಕುಡಿದಿದ್ದರು. ಆರೋಪಿಯೇ ಮದ್ಯದ ಬಿಲ್ ಪಾವತಿಸಿದ್ದ.’</p>.<p>‘ಪಾನಮತ್ತನಾಗಿದ್ದ ವಿಜಯ್ಕುಮಾರ್ ಅವರನ್ನು ಜಾಗವೊಂದರಲ್ಲಿ ಮಲಗಿಸಿದ್ದ. ನಂತರ, ಅವರ ಆಟೊ ಸಮೇತ ಪರಾರಿಯಾಗಿದ್ದ. ವಿಜಯ್ಕುಮಾರ್ ಅವರು ಮರುದಿನ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>