<p><strong>ಬೆಂಗಳೂರು</strong>: ನಗರದಲ್ಲಿ ಭಾನುವಾರ ಶ್ರೀರಾಮಸೇನಾ ಮಂಡಳಿ ಟ್ರಸ್ಟ್ ಆಯೋಜಿಸಿದ್ದ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮರಣಾ ಸಂಗೀತೋತ್ಸವದಲ್ಲಿ ಸಂಗೀತ ಕ್ಷೇತ್ರದ ಮೂವರು ಸಾಧಕರಿಗೆ ಎಸ್ವಿಎನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.</p>.<p>ಟಿ.ಎಚ್.ವಿನಾಯಕರಾಮ್ ಹಾಗೂ ರುದ್ರಪಟ್ಟಣಂ ಸಹೋದರರಾದ ಆರ್.ಎನ್.ತ್ಯಾಗರಾಜನ್ ಹಾಗೂ ಆರ್.ಎನ್.ತಾರಾನಾಥನ್ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.</p>.<p>ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿ, ‘ಸಂಗೀತದಿಂದ ಮನೋವಿಕಾಸ, ಮಾನಸಿಕ ಶಾಂತಿ, ಮನರಂಜನೆ ದೊರೆಯುತ್ತದೆ. ಸಂಗೀತವು ಕಲೆ ಹಾಗೂ ವಿಜ್ಞಾನವೂ ಹೌದು’ ಎಂದು ಹೇಳಿದರು.</p>.<p>‘ಮೂವರು ಸಂಗೀತ ತಪಸ್ವಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ರುದ್ರಪಟ್ಟಣಂ ಅನೇಕ ಸಂಗೀತ ಸಾಧಕರನ್ನು ರಾಷ್ಟ್ರಕ್ಕೆ ನೀಡಿದೆ. ಸಂಗೀತ ಕ್ಷೇತ್ರದ ಸಾಧಕರಿಗೆ ಜನ್ಮನೀಡುವ ಭೂಮಿ ಅದು’ ಎಂದು ಹೇಳಿದರು.</p>.<p>‘ನಾರಾಯಣ ಸ್ವಾಮಿ ಅವರು ತಮ್ಮ 14ನೇ ವಯಸ್ಸಿನಲ್ಲೇ ಶ್ರೀರಾಮಸೇನಾ ಮಂಡಳಿ ಸ್ಥಾಪಿಸಿ ಅದರ ಮೂಲಕ ನಾಡಿಗೆ ಅನೇಕ ಸಂಗೀತ ದಿಗ್ಗಜರನ್ನು ಪರಿಚಯಿಸಿದ್ದರು. ಈ ಮಂಡಳಿಗೆ ರಾಷ್ಟ್ರಪತಿ ಸೇರಿದಂತೆ ಅನೇಕರು ಭೇಟಿ ನೀಡಿದ್ದರು’ ಎಂದು ಸ್ಮರಿಸಿದರು.</p>.<p>‘ರಾಮಪ್ರಸಾದ್ ಅವರು ಏಕಾಂಗಿಯಾಗಿ ತಂದೆಯವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಸಿಎಂಆರ್ ವಿಶ್ವವಿದ್ಯಾಲಯದ ಮುಖ್ಯಸ್ಥ ಕೆ.ಸಿ.ರಾಮಮೂರ್ತಿ ಮಾತನಾಡಿ, ‘ಮಂಡಳಿಯ ಕೆಲಸವನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಎಸ್ವಿಎನ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಪುತ್ರ ಸಾಗುತ್ತಿದ್ದಾರೆ. ರಾಮಪ್ರಸಾದ್ ಅವರಿಗೆ ಸಂಗೀತ ಕ್ಷೇತ್ರದ ಮೇಲೆ ಅಗಾಧವಾದ ಆಸಕ್ತಿ ಹಾಗೂ ಒಲವು’ ಎಂದು ಹೇಳಿದರು.</p>.<p>ಟ್ರಸ್ಟಿ ಶಿವರಾಮಯ್ಯ ಮಾತನಾಡಿ, ‘ಮಂಡಳಿಯಿಂದ 2001ರಿಂದ ಇಲ್ಲಿವರೆಗೆ ಎಂ.ಎಸ್.ಸುಬ್ಬುಲಕ್ಷ್ಮಿ ಸೇರಿದಂತೆ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ’ ಎಂದು ಹೇಳಿದರು. ಟ್ರಸ್ಟ್ ಅಧ್ಯಕ್ಷ ಎ.ರವೀಂದ್ರ ಹಾಜರಿದ್ದರು.</p>.<p>ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮೊದಲು ಹಾಗೂ ನಂತರ ಸಂಗೀತ ಕಾರ್ಯಕ್ರಮಗಳು ನಡೆದವು. ಅನುರಾಧಾ ಮಧುಸೂದನ್ ತಂಡದಿಂದ ವೀಣಾವಾದನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದಲ್ಲಿ ಭಾನುವಾರ ಶ್ರೀರಾಮಸೇನಾ ಮಂಡಳಿ ಟ್ರಸ್ಟ್ ಆಯೋಜಿಸಿದ್ದ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮರಣಾ ಸಂಗೀತೋತ್ಸವದಲ್ಲಿ ಸಂಗೀತ ಕ್ಷೇತ್ರದ ಮೂವರು ಸಾಧಕರಿಗೆ ಎಸ್ವಿಎನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.</p>.<p>ಟಿ.ಎಚ್.ವಿನಾಯಕರಾಮ್ ಹಾಗೂ ರುದ್ರಪಟ್ಟಣಂ ಸಹೋದರರಾದ ಆರ್.ಎನ್.ತ್ಯಾಗರಾಜನ್ ಹಾಗೂ ಆರ್.ಎನ್.ತಾರಾನಾಥನ್ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.</p>.<p>ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿ, ‘ಸಂಗೀತದಿಂದ ಮನೋವಿಕಾಸ, ಮಾನಸಿಕ ಶಾಂತಿ, ಮನರಂಜನೆ ದೊರೆಯುತ್ತದೆ. ಸಂಗೀತವು ಕಲೆ ಹಾಗೂ ವಿಜ್ಞಾನವೂ ಹೌದು’ ಎಂದು ಹೇಳಿದರು.</p>.<p>‘ಮೂವರು ಸಂಗೀತ ತಪಸ್ವಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ರುದ್ರಪಟ್ಟಣಂ ಅನೇಕ ಸಂಗೀತ ಸಾಧಕರನ್ನು ರಾಷ್ಟ್ರಕ್ಕೆ ನೀಡಿದೆ. ಸಂಗೀತ ಕ್ಷೇತ್ರದ ಸಾಧಕರಿಗೆ ಜನ್ಮನೀಡುವ ಭೂಮಿ ಅದು’ ಎಂದು ಹೇಳಿದರು.</p>.<p>‘ನಾರಾಯಣ ಸ್ವಾಮಿ ಅವರು ತಮ್ಮ 14ನೇ ವಯಸ್ಸಿನಲ್ಲೇ ಶ್ರೀರಾಮಸೇನಾ ಮಂಡಳಿ ಸ್ಥಾಪಿಸಿ ಅದರ ಮೂಲಕ ನಾಡಿಗೆ ಅನೇಕ ಸಂಗೀತ ದಿಗ್ಗಜರನ್ನು ಪರಿಚಯಿಸಿದ್ದರು. ಈ ಮಂಡಳಿಗೆ ರಾಷ್ಟ್ರಪತಿ ಸೇರಿದಂತೆ ಅನೇಕರು ಭೇಟಿ ನೀಡಿದ್ದರು’ ಎಂದು ಸ್ಮರಿಸಿದರು.</p>.<p>‘ರಾಮಪ್ರಸಾದ್ ಅವರು ಏಕಾಂಗಿಯಾಗಿ ತಂದೆಯವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಸಿಎಂಆರ್ ವಿಶ್ವವಿದ್ಯಾಲಯದ ಮುಖ್ಯಸ್ಥ ಕೆ.ಸಿ.ರಾಮಮೂರ್ತಿ ಮಾತನಾಡಿ, ‘ಮಂಡಳಿಯ ಕೆಲಸವನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಎಸ್ವಿಎನ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಪುತ್ರ ಸಾಗುತ್ತಿದ್ದಾರೆ. ರಾಮಪ್ರಸಾದ್ ಅವರಿಗೆ ಸಂಗೀತ ಕ್ಷೇತ್ರದ ಮೇಲೆ ಅಗಾಧವಾದ ಆಸಕ್ತಿ ಹಾಗೂ ಒಲವು’ ಎಂದು ಹೇಳಿದರು.</p>.<p>ಟ್ರಸ್ಟಿ ಶಿವರಾಮಯ್ಯ ಮಾತನಾಡಿ, ‘ಮಂಡಳಿಯಿಂದ 2001ರಿಂದ ಇಲ್ಲಿವರೆಗೆ ಎಂ.ಎಸ್.ಸುಬ್ಬುಲಕ್ಷ್ಮಿ ಸೇರಿದಂತೆ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ’ ಎಂದು ಹೇಳಿದರು. ಟ್ರಸ್ಟ್ ಅಧ್ಯಕ್ಷ ಎ.ರವೀಂದ್ರ ಹಾಜರಿದ್ದರು.</p>.<p>ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮೊದಲು ಹಾಗೂ ನಂತರ ಸಂಗೀತ ಕಾರ್ಯಕ್ರಮಗಳು ನಡೆದವು. ಅನುರಾಧಾ ಮಧುಸೂದನ್ ತಂಡದಿಂದ ವೀಣಾವಾದನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>