<p><strong>ಪೀಣ್ಯದಾಸರಹಳ್ಳಿ:</strong> ಬಾಗಲಗುಂಟೆ ಮಾರಮ್ಮದೇವಿ ದೇವಸ್ಥಾನ, ವೇಣುಗೋಪಾಲ ಸ್ವಾಮಿ ದೇವಸ್ಥಾನ ಹಾಗೂ ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಇದೇ 5ರಿಂದ 7ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.</p>.<p>ಜಾತ್ರೆಯ ದಿನ ಸಿಡೆದಹಳ್ಳಿಯಲ್ಲಿ ಡಿಜೆ ಸಂಗೀತಕ್ಕೆ ಕುಟುಂಬಸ್ಥರೆಲ್ಲ ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಪ್ರಸಿದ್ಧ ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ಸಂಪ್ರದಾಯದಂತೆ ಆರತಿಗಳನ್ನು ಹೊತ್ತು ತರಲಾಗುತ್ತದೆ. ಶಾಸಕ ಎಸ್. ಮುನಿರಾಜು ಅವರು ಅಧಿಕಾರಿಗಳ ಜತೆಗೆ ಜಾತ್ರೆ ಸಿದ್ಧತೆ ಕುರಿತು ಸಭೆ ನಡೆಸಿದರು.</p>.<p>‘ಸ್ವಚ್ಛತೆ, ನೀರಿನ ಸಮಸ್ಯೆ, ಭದ್ರತೆ, ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ, ವಿದ್ಯುತ್, ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್, ಪೊಲೀಸ್ ಬಿಗಿ ಭದ್ರತೆ ಇರಬೇಕು. ನೀರಿನ ಸಮಸ್ಯೆ ಎದುರಾಗಬಾರದು’ ಎಂದು ಶಾಸಕರು ಸೂಚಿಸಿದರು.</p>.<p>‘ಡಿಜೆ ಹಾಕುವುದಕ್ಕೆ ಅನುಮತಿ ಪಡೆದಿಲ್ಲ. ಜಾತ್ರೆಗೆ ಭದ್ರತೆ ಕೈಗೊಳ್ಳಲಾಗಿದೆ’ ಎಂದು ಬಾಗಲಗುಂಟೆ ಠಾಣೆ ಇನ್ಸ್ಪೆಕ್ಟರ್ ಹನುಮಂತರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯದಾಸರಹಳ್ಳಿ:</strong> ಬಾಗಲಗುಂಟೆ ಮಾರಮ್ಮದೇವಿ ದೇವಸ್ಥಾನ, ವೇಣುಗೋಪಾಲ ಸ್ವಾಮಿ ದೇವಸ್ಥಾನ ಹಾಗೂ ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಇದೇ 5ರಿಂದ 7ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.</p>.<p>ಜಾತ್ರೆಯ ದಿನ ಸಿಡೆದಹಳ್ಳಿಯಲ್ಲಿ ಡಿಜೆ ಸಂಗೀತಕ್ಕೆ ಕುಟುಂಬಸ್ಥರೆಲ್ಲ ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಪ್ರಸಿದ್ಧ ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ಸಂಪ್ರದಾಯದಂತೆ ಆರತಿಗಳನ್ನು ಹೊತ್ತು ತರಲಾಗುತ್ತದೆ. ಶಾಸಕ ಎಸ್. ಮುನಿರಾಜು ಅವರು ಅಧಿಕಾರಿಗಳ ಜತೆಗೆ ಜಾತ್ರೆ ಸಿದ್ಧತೆ ಕುರಿತು ಸಭೆ ನಡೆಸಿದರು.</p>.<p>‘ಸ್ವಚ್ಛತೆ, ನೀರಿನ ಸಮಸ್ಯೆ, ಭದ್ರತೆ, ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ, ವಿದ್ಯುತ್, ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್, ಪೊಲೀಸ್ ಬಿಗಿ ಭದ್ರತೆ ಇರಬೇಕು. ನೀರಿನ ಸಮಸ್ಯೆ ಎದುರಾಗಬಾರದು’ ಎಂದು ಶಾಸಕರು ಸೂಚಿಸಿದರು.</p>.<p>‘ಡಿಜೆ ಹಾಕುವುದಕ್ಕೆ ಅನುಮತಿ ಪಡೆದಿಲ್ಲ. ಜಾತ್ರೆಗೆ ಭದ್ರತೆ ಕೈಗೊಳ್ಳಲಾಗಿದೆ’ ಎಂದು ಬಾಗಲಗುಂಟೆ ಠಾಣೆ ಇನ್ಸ್ಪೆಕ್ಟರ್ ಹನುಮಂತರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>