<p><strong>ಬೆಂಗಳೂರು</strong>: ಕಲ್ಲಿನ ಶಿಲ್ಪಗಳು ಪೀಠ ಕಳೆದುಕೊಂಡು ನೆಲಕ್ಕುರುಳಿವೆ, ಮಳೆ ನೀರಿನ ಮಹತ್ವ ಸಾರುವ ಮಕ್ಕಳ ಮಣ್ಣಿನ ಮೂರ್ತಿಗಳು ಕೈ, ಕಾಲು, ಭುಜಗಳನ್ನು ಕಳೆದುಕೊಂಡಿವೆ, ಆಲಂಕಾರಿಕ ಗಿಡಗಳು ಒಣಗಿವೆ, ಹುಲ್ಲಿನಹಾಸು ಕಳೆಗುಂದಿದೆ, ಬಯಲು ರಂಗಮಂದಿರದಲ್ಲಿ ಕೂರಲೂ ಸಾಧ್ಯವಿಲ್ಲ...</p>.<p>ದೇಶದ ಪ್ರಥಮ ಶಿಲ್ಪಗಳ ಉದ್ಯಾನ ಎಂದು 11 ವರ್ಷದ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದ ಶಿಲ್ಪೋದ್ಯಾನದ ಸ್ಥಿತಿ<br />ಇದು. ಈ ಸ್ಥಿತಿಯ ಶಿಲ್ಪೋದ್ಯಾನಕ್ಕೆ ವರ್ಷಕ್ಕೆ ₹74.64 ಲಕ್ಷವನ್ನು ನಿರ್ವಹಣೆಗೆ ನೀಡಲಾಗಿದೆ.</p>.<p>ಶಿಲ್ಪೋದ್ಯಾನ ಎಂಬ ಹೆಸರಿಗೇ ತದ್ವಿರುದ್ಧವಾಗಿದೆ ಇಲ್ಲಿನ ಪರಿಸ್ಥಿತಿ. ಉದ್ಯಾನದಲ್ಲಿದ್ದ 30 ಶಿಲ್ಪಗಳ ನಿರ್ವಹಣೆಯ ಹೊಣೆಯನ್ನು ಹೊತ್ತ ಬಿಡಿಎ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಹಾಳುಬಿದ್ದಿವೆ. ಹಾಳಾಗಿರುವ ಶಿಲ್ಪಗಳನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಕೆಲವು ಶಿಲ್ಪಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.</p>.<p>ಮೂರು ಕೊಳವೆಬಾವಿ ಇದ್ದರೂ ಗಿಡ, ಹುಲ್ಲುಹಾಸಿಗೆ ನೀರಿಲ್ಲ. ಬಯಲುರಂಗಮಂದಿರವನ್ನೂ ನಿರ್ವಹಣೆ ಮಾಡಿಲ್ಲ. ಮಳೆನೀರು ಸಂಗ್ರಹಕ್ಕೆ ಮಾಡಲಾದ ಕಾಲುವೆ ಹಾಗೂ ಕುಂಟೆ ನೀರಿಲ್ಲದೆ ಉದ್ಯಾನದ ತ್ಯಾಜ್ಯದ ಗುಂಡಿಯಾಗಿದೆ. ವಾಯು ವಿಹಾರಿಗಳಿಗಾಗಿ ನಿರ್ಮಿಸಿರುವ ಶೌಚಾಲಯ ಗಬ್ಬು ನಾರುತ್ತಿದೆ.</p>.<p>ಬಿಡಿಎ ಬನಶಂಕರಿ 6ನೇ ಹಂತ 1ನಬ್ಲಾಕ್ನಲ್ಲಿರುವ ಶಿಲ್ಪೋದ್ಯಾನವನ್ನು 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ಉದ್ಘಾಟಿಸಿದ್ದರು‘8 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಸುಮಾರು ₹4 ಕೋಟಿ ವೆಚ್ಚ ಮಾಡಲಾಗಿತ್ತು. ಒಂದು ವರ್ಷ ಉದ್ಯಾನ ಸುಸ್ಥಿತಿಯಲ್ಲಿತ್ತು’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.</p>.<p>‘ಶಿಲ್ಪೋದ್ಯಾನ ಮೂಲೋದ್ದೇಶವನ್ನು ಕಳೆದುಕೊಂಡು, ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಬಿಡಿಎ ಅಧಿಕಾರಿ<br />ಗಳು ಇತ್ತ ಗಮನಹರಿಸಬೇಕು’ ಎಂದು ಬನಶಂಕರಿ ಆರನೇ ಹಂತ, ಬಿಡಿಎ ಬಡಾವಣೆ, ಒಂದನೇ ಬ್ಲಾಕ್ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಸಿ.ಎನ್. ಅಪ್ಪಯ್ಯ ಆಗ್ರಹಿಸಿದರು.</p>.<p class="Subhead">₹2.71 ಕೋಟಿ ವೆಚ್ಚ: ಶಿಲ್ಪೋದ್ಯಾನ ನಿರ್ವಹಣೆಗೆ ಬಿಡಿಎ ಮಾಡಿರುವ ವೆಚ್ಚದಮಾಹಿತಿಯನ್ನು ವಕೀಲರಾದ ಎಂ.ಬಾಲ<br />ಕೃಷ್ಣ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿದ್ದಾರೆ. ಅದರಂತೆ 10 ವರ್ಷಗಳಲ್ಲಿ ₹2.71 ಕೋಟಿ ವೆಚ್ಚ ಮಾಡಲಾಗಿದೆ. ಕೆಲವು ವರ್ಷ ಅನುದಾನ ನೀಡಲಾಗಿಲ್ಲ. ಸಾಮಾನ್ಯವಾಗಿ ಉದ್ಘಟನೆಯಾದ ಮೂರು ವರ್ಷ ನಿರ್ವಹಣೆ ಶುಲ್ಕ ನೀಡುವಂತಿಲ್ಲ. ಆದರೂ ಈಶಿಲ್ಪೋದ್ಯಾನಕ್ಕೆ ಅದನ್ನೂ ನೀಡಿರುವು ದು ಈ ಮಾಹಿತಿಯಿಂದ ಸ್ಪಷ್ಟವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕಲ್ಲಿನ ಶಿಲ್ಪಗಳು ಪೀಠ ಕಳೆದುಕೊಂಡು ನೆಲಕ್ಕುರುಳಿವೆ, ಮಳೆ ನೀರಿನ ಮಹತ್ವ ಸಾರುವ ಮಕ್ಕಳ ಮಣ್ಣಿನ ಮೂರ್ತಿಗಳು ಕೈ, ಕಾಲು, ಭುಜಗಳನ್ನು ಕಳೆದುಕೊಂಡಿವೆ, ಆಲಂಕಾರಿಕ ಗಿಡಗಳು ಒಣಗಿವೆ, ಹುಲ್ಲಿನಹಾಸು ಕಳೆಗುಂದಿದೆ, ಬಯಲು ರಂಗಮಂದಿರದಲ್ಲಿ ಕೂರಲೂ ಸಾಧ್ಯವಿಲ್ಲ...</p>.<p>ದೇಶದ ಪ್ರಥಮ ಶಿಲ್ಪಗಳ ಉದ್ಯಾನ ಎಂದು 11 ವರ್ಷದ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ್ದ ಶಿಲ್ಪೋದ್ಯಾನದ ಸ್ಥಿತಿ<br />ಇದು. ಈ ಸ್ಥಿತಿಯ ಶಿಲ್ಪೋದ್ಯಾನಕ್ಕೆ ವರ್ಷಕ್ಕೆ ₹74.64 ಲಕ್ಷವನ್ನು ನಿರ್ವಹಣೆಗೆ ನೀಡಲಾಗಿದೆ.</p>.<p>ಶಿಲ್ಪೋದ್ಯಾನ ಎಂಬ ಹೆಸರಿಗೇ ತದ್ವಿರುದ್ಧವಾಗಿದೆ ಇಲ್ಲಿನ ಪರಿಸ್ಥಿತಿ. ಉದ್ಯಾನದಲ್ಲಿದ್ದ 30 ಶಿಲ್ಪಗಳ ನಿರ್ವಹಣೆಯ ಹೊಣೆಯನ್ನು ಹೊತ್ತ ಬಿಡಿಎ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಹಾಳುಬಿದ್ದಿವೆ. ಹಾಳಾಗಿರುವ ಶಿಲ್ಪಗಳನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಕೆಲವು ಶಿಲ್ಪಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.</p>.<p>ಮೂರು ಕೊಳವೆಬಾವಿ ಇದ್ದರೂ ಗಿಡ, ಹುಲ್ಲುಹಾಸಿಗೆ ನೀರಿಲ್ಲ. ಬಯಲುರಂಗಮಂದಿರವನ್ನೂ ನಿರ್ವಹಣೆ ಮಾಡಿಲ್ಲ. ಮಳೆನೀರು ಸಂಗ್ರಹಕ್ಕೆ ಮಾಡಲಾದ ಕಾಲುವೆ ಹಾಗೂ ಕುಂಟೆ ನೀರಿಲ್ಲದೆ ಉದ್ಯಾನದ ತ್ಯಾಜ್ಯದ ಗುಂಡಿಯಾಗಿದೆ. ವಾಯು ವಿಹಾರಿಗಳಿಗಾಗಿ ನಿರ್ಮಿಸಿರುವ ಶೌಚಾಲಯ ಗಬ್ಬು ನಾರುತ್ತಿದೆ.</p>.<p>ಬಿಡಿಎ ಬನಶಂಕರಿ 6ನೇ ಹಂತ 1ನಬ್ಲಾಕ್ನಲ್ಲಿರುವ ಶಿಲ್ಪೋದ್ಯಾನವನ್ನು 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ಉದ್ಘಾಟಿಸಿದ್ದರು‘8 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಸುಮಾರು ₹4 ಕೋಟಿ ವೆಚ್ಚ ಮಾಡಲಾಗಿತ್ತು. ಒಂದು ವರ್ಷ ಉದ್ಯಾನ ಸುಸ್ಥಿತಿಯಲ್ಲಿತ್ತು’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.</p>.<p>‘ಶಿಲ್ಪೋದ್ಯಾನ ಮೂಲೋದ್ದೇಶವನ್ನು ಕಳೆದುಕೊಂಡು, ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಬಿಡಿಎ ಅಧಿಕಾರಿ<br />ಗಳು ಇತ್ತ ಗಮನಹರಿಸಬೇಕು’ ಎಂದು ಬನಶಂಕರಿ ಆರನೇ ಹಂತ, ಬಿಡಿಎ ಬಡಾವಣೆ, ಒಂದನೇ ಬ್ಲಾಕ್ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಸಿ.ಎನ್. ಅಪ್ಪಯ್ಯ ಆಗ್ರಹಿಸಿದರು.</p>.<p class="Subhead">₹2.71 ಕೋಟಿ ವೆಚ್ಚ: ಶಿಲ್ಪೋದ್ಯಾನ ನಿರ್ವಹಣೆಗೆ ಬಿಡಿಎ ಮಾಡಿರುವ ವೆಚ್ಚದಮಾಹಿತಿಯನ್ನು ವಕೀಲರಾದ ಎಂ.ಬಾಲ<br />ಕೃಷ್ಣ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿದ್ದಾರೆ. ಅದರಂತೆ 10 ವರ್ಷಗಳಲ್ಲಿ ₹2.71 ಕೋಟಿ ವೆಚ್ಚ ಮಾಡಲಾಗಿದೆ. ಕೆಲವು ವರ್ಷ ಅನುದಾನ ನೀಡಲಾಗಿಲ್ಲ. ಸಾಮಾನ್ಯವಾಗಿ ಉದ್ಘಟನೆಯಾದ ಮೂರು ವರ್ಷ ನಿರ್ವಹಣೆ ಶುಲ್ಕ ನೀಡುವಂತಿಲ್ಲ. ಆದರೂ ಈಶಿಲ್ಪೋದ್ಯಾನಕ್ಕೆ ಅದನ್ನೂ ನೀಡಿರುವು ದು ಈ ಮಾಹಿತಿಯಿಂದ ಸ್ಪಷ್ಟವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>