ಚಿಕ್ಕಮಗಳೂರಿನ ಸರ್ಕಾರಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಆರ್.ಎ.ಪುಷ್ಪಭಾರತಿ, 'ಜನಪದ ಸಾಹಿತ್ಯದಲ್ಲಿ ಜನರ ಹಸಿವು, ನೋವು, ಸಂಕಟಗಳು ಹಾಗೂ ಅಸಹಾಯಕತೆಯನ್ನು ವಿಡಂಬನೆ ರೂಪದಲ್ಲಿ ಹೊರಹಾಕಿರುವುದನ್ನು ಕಾಣಬಹುದು. ಅದರ ತೀವ್ರತೆಯನ್ನು ಪದಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಈ ರೀತಿಯ ನೋವಿನ ಸ್ಫೋಟಗಳು ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ' ಎಂದರು.