<p><strong>ಬೆಂಗಳೂರು:</strong> ‘34 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವೆ. ನಮ್ಮ ಅಂಗನವಾಡಿಯಲ್ಲಿ ಕಲಿತ ಎಷ್ಟೋ ಮಕ್ಕಳು ಬಳಿಕ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ನಾವು ಮಾತ್ರ ತಿಂಗಳಿಗೆ ₹12 ಸಾವಿರ ಪಡೆಯಲು ಕಷ್ಟ ಪಡುತ್ತಿದ್ದೇವೆ. ಖರ್ಚುಗಳು ಹೆಚ್ಚಾಗಿವೆ. ಕಡಿಮೆ ಸಂಬಳದಲ್ಲಿ ಹೇಗೆ ಬದುಕುವುದು ಹೇಳಿ, ಮೋದಿ ಅವರು ನಮ್ಮ ಸಂಬಳ ಜಾಸ್ತಿ ಮಾಡಲಿ. . .’</p>.<p>ಇದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭಗೊಂಡಿರುವ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿರುವ ಹೊಸಕೋಟೆ ತಾಲ್ಲೂಕು ಆಲಪ್ಪನಹಳ್ಳಿ ಗ್ರಾಮದ ಅಂಗನವಾಡಿ ನೌಕರರಾದ ಖದೀರಮ್ಮ ಅವರ ನುಡಿ.</p>.<p>‘ನಮಗೆ ಕನಿಷ್ಠ ವೇತನವನ್ನಾದರೂ ನೀಡಿ ಎಂದು ಹೋರಾಟ ಮಾಡಿದಾಗ ರಾಜ್ಯ ಸರ್ಕಾರ ₹1 ಸಾವಿರ ಏರಿಕೆ ಮಾಡಿದರೂ ನಮ್ಮ ಪೂರ್ಣ ಬೇಡಿಕೆ ಈಡೇರಿಲ್ಲ. ಕೇಂದ್ರ ಸರ್ಕಾರವಂತೂ 2018 ನಂತರ ವೇತನ ಏರಿಕೆ ಮಾಡಿಯೇ ಇಲ್ಲ. ಎಷ್ಟು ದಿನ ಅಂತಲೇ ಕೇಳುತ್ತಿರಬೇಕು. ನಮ್ಮ ಕಷ್ಟವನ್ನು ಜನಪ್ರತಿನಿಧಿಗಳು ಆಲಿಸಿ ಕೇಂದ್ರಕ್ಕೆ ಮುಟ್ಟಿಸಲಿ’ ಎಂದವರು ಅದೇ ಗ್ರಾಮದ ಶಾರದಾ.</p>.<p>‘ನಮಗೆ ನಾಲ್ಕೈದು ಕೆಲಸ ವಹಿಸಿದ್ಧಾರೆ. ಮೊಬೈಲ್ನಲ್ಲಿಯೇ ಎಲ್ಲವನ್ನೂ ದಾಖಲಿಸಬೇಕು. ಚೆನ್ನಾಗಿರುವ ಮೊಬೈಲ್ ಕೊಟ್ಟಿಲ್ಲ. ನೆಟ್ವರ್ಕ್ ಕೂಡ ಸಿಗುವುದಿಲ್ಲ. ಮುಖ ಆಧರಿತ ದಾಖಲು ವ್ಯವಸ್ಥೆ ರದ್ದು ಮಾಡಿ ಇಲ್ಲವೇ ಸರಿಯಾದ ಮೊಬೈಲ್ ಕೊಡಿ’ ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದ ಗಿರಿಜಾ ಅವರ ಬೇಡಿಕೆ.</p>.<p>‘ಬೆಳಿಗ್ಗೆ 8 ರಿಂದ ಸಂಜೆ 4ರವರೆಗೂ ಕೆಲಸ ಮಾಡಿದರೂ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಕೇಳಿದರೆ ಕಾರಣ ಹೇಳಲಾಗುತ್ತದೆ. ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ಬಂದರೆ ನಾವು ಹೇಗೆ ಬದುಕುವುದು ಹೇಳಿ’ ಎಂದು ಪ್ರಶ್ನಿಸಿದರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಪಗಡದಿನ್ನಿಯ ಬಿಸಿಯೂಟ ಕಾರ್ಯಕರ್ತೆ ರೇಣಮ್ಮ. </p>.<p>ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ 10 ಸಾವಿರದಷ್ಟು ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು. ವೇತನ ಹೆಚ್ಚಳ, ಆರೋಗ್ಯ ವಿಮೆ, ನಿವೃತ್ತಿ ವೇತನ ಸೇರಿದಂತೆ 20ಕ್ಕೂ ಹೆಚ್ಚು ಬೇಡಿಕೆಗಳನ್ನು ಮಂಡಿಸಿದರು.</p>.<p>‘ಸಂಸದರು, ಶಾಸಕರು ಯಾವುದೇ ಚರ್ಚೆಯಿಲ್ಲದೇ ತಮ್ಮ ವೇತನ ಹಾಗೂ ಸೌಲಭ್ಯಗಳನ್ನು ಏರಿಸಿಕೊಳ್ಳುತ್ತಾರೆ. ದಿನವಿಡೀ ದುಡಿಯುವ ನಮ್ಮ ಬೇಡಿಕೆಗಳು ಅವರಿಗೆ ಏಕೆ ಕಾಣುತ್ತಿಲ್ಲ. ಕೆಲವೇ ಉದ್ಯಮಿಗಳ ₹18 ಲಕ್ಷ ಕೋಟಿ ಕಾರ್ಪೊರೇಟ್ ಸಾಲ ಮನ್ನಾ ಮಾಡಲಾಗಿದೆ. ಅದರ ಬದಲು ನಮಗೆ ನೆರವಾದರೆ 56 ಲಕ್ಷ ಕುಟುಂಬಗಳಿಗೆ ಒಳಿತಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>‘ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಅವರಿಂದ ಸೂಕ್ತ ಭರವಸೆ ಸಿಗುವವರೆಗೂ ಈ ಬಾರಿ ಧರಣಿ ನಿಲ್ಲುವುದಿಲ್ಲ. ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರು ನಮ್ಮ ಪರವಾಗಿ ಗಟ್ಟಿ ದನಿ ತೋರಬೇಕು’ ಎಂದು ಪ್ರಮುಖರು ಹೇಳಿದರು.</p>.<div><blockquote>ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರ ಕಚೇರಿಗಳ ಎದುರು ಪ್ರತಿಭಟನೆ ನಡೆದಿದೆ. ಲೋಕಸಭೆಯಲ್ಲಿ ಚರ್ಚಿಸಿ ಮುಂದಿನ ಬಜೆಟ್ನಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಹೋರಾಟ ನಿಲ್ಲದು.</blockquote><span class="attribution">ಎಸ್.ವರಲಕ್ಷ್ಮಿ ಅಧ್ಯಕ್ಷೆ ಸಿಐಟಿಯು ಕರ್ನಾಟಕ</span></div>.<h3><strong>ಬೇಡಿಕೆಗಳೇನು</strong> </h3><p>ಕೇಂದ್ರ ಸರ್ಕಾರ ಕನಿಷ್ಠ ₹21 ಸಾವಿರ ವೇತನ ನೀಡಲಿ </p><p>56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತು ಸುಧಾರಣೆಗೆ ವೇತನ ಆಯೋಗ ರಚಿಸಿ </p><p>ಅಂಗನವಾಡಿಗಳಲ್ಲಿ ಎಫ್ಆರ್ಎಸ್ ರದ್ದು ಮಾಡಿ ಇಲ್ಲವೇ ವೈಫೈ ವ್ಯವಸ್ಥೆ ಕೊಡಿ </p><p>ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಿ </p><p>ಅಂಗನವಾಡಿಗಳಲ್ಲಿ ಎಲ್ಕೆಜಿ ಯುಕೆಜಿ ಆರಂಭಿಸಿ </p><p>ನಮಗೂ ಹೆರಿಗೆ ಮುಟ್ಟಿನ ರಜೆ ವಿಸ್ತರಿಸಿ </p><p>ಬಿಸಿಯೂಟ ನೌಕರರಿಗೆ ಕೆಲಸದ ಭದ್ರತೆ ನೀಡಿ </p><p>ಆಶಾ ಕಾರ್ಯಕರ್ತರಿಗೂ ನಿಯಮಿತವಾಗಿ ತರಬೇತಿ ಆಯೋಜಿಸಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘34 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವೆ. ನಮ್ಮ ಅಂಗನವಾಡಿಯಲ್ಲಿ ಕಲಿತ ಎಷ್ಟೋ ಮಕ್ಕಳು ಬಳಿಕ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ನಾವು ಮಾತ್ರ ತಿಂಗಳಿಗೆ ₹12 ಸಾವಿರ ಪಡೆಯಲು ಕಷ್ಟ ಪಡುತ್ತಿದ್ದೇವೆ. ಖರ್ಚುಗಳು ಹೆಚ್ಚಾಗಿವೆ. ಕಡಿಮೆ ಸಂಬಳದಲ್ಲಿ ಹೇಗೆ ಬದುಕುವುದು ಹೇಳಿ, ಮೋದಿ ಅವರು ನಮ್ಮ ಸಂಬಳ ಜಾಸ್ತಿ ಮಾಡಲಿ. . .’</p>.<p>ಇದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭಗೊಂಡಿರುವ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿರುವ ಹೊಸಕೋಟೆ ತಾಲ್ಲೂಕು ಆಲಪ್ಪನಹಳ್ಳಿ ಗ್ರಾಮದ ಅಂಗನವಾಡಿ ನೌಕರರಾದ ಖದೀರಮ್ಮ ಅವರ ನುಡಿ.</p>.<p>‘ನಮಗೆ ಕನಿಷ್ಠ ವೇತನವನ್ನಾದರೂ ನೀಡಿ ಎಂದು ಹೋರಾಟ ಮಾಡಿದಾಗ ರಾಜ್ಯ ಸರ್ಕಾರ ₹1 ಸಾವಿರ ಏರಿಕೆ ಮಾಡಿದರೂ ನಮ್ಮ ಪೂರ್ಣ ಬೇಡಿಕೆ ಈಡೇರಿಲ್ಲ. ಕೇಂದ್ರ ಸರ್ಕಾರವಂತೂ 2018 ನಂತರ ವೇತನ ಏರಿಕೆ ಮಾಡಿಯೇ ಇಲ್ಲ. ಎಷ್ಟು ದಿನ ಅಂತಲೇ ಕೇಳುತ್ತಿರಬೇಕು. ನಮ್ಮ ಕಷ್ಟವನ್ನು ಜನಪ್ರತಿನಿಧಿಗಳು ಆಲಿಸಿ ಕೇಂದ್ರಕ್ಕೆ ಮುಟ್ಟಿಸಲಿ’ ಎಂದವರು ಅದೇ ಗ್ರಾಮದ ಶಾರದಾ.</p>.<p>‘ನಮಗೆ ನಾಲ್ಕೈದು ಕೆಲಸ ವಹಿಸಿದ್ಧಾರೆ. ಮೊಬೈಲ್ನಲ್ಲಿಯೇ ಎಲ್ಲವನ್ನೂ ದಾಖಲಿಸಬೇಕು. ಚೆನ್ನಾಗಿರುವ ಮೊಬೈಲ್ ಕೊಟ್ಟಿಲ್ಲ. ನೆಟ್ವರ್ಕ್ ಕೂಡ ಸಿಗುವುದಿಲ್ಲ. ಮುಖ ಆಧರಿತ ದಾಖಲು ವ್ಯವಸ್ಥೆ ರದ್ದು ಮಾಡಿ ಇಲ್ಲವೇ ಸರಿಯಾದ ಮೊಬೈಲ್ ಕೊಡಿ’ ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದ ಗಿರಿಜಾ ಅವರ ಬೇಡಿಕೆ.</p>.<p>‘ಬೆಳಿಗ್ಗೆ 8 ರಿಂದ ಸಂಜೆ 4ರವರೆಗೂ ಕೆಲಸ ಮಾಡಿದರೂ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಕೇಳಿದರೆ ಕಾರಣ ಹೇಳಲಾಗುತ್ತದೆ. ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳ ಬಂದರೆ ನಾವು ಹೇಗೆ ಬದುಕುವುದು ಹೇಳಿ’ ಎಂದು ಪ್ರಶ್ನಿಸಿದರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಪಗಡದಿನ್ನಿಯ ಬಿಸಿಯೂಟ ಕಾರ್ಯಕರ್ತೆ ರೇಣಮ್ಮ. </p>.<p>ರಾಜ್ಯದ ನಾನಾ ಭಾಗಗಳಿಂದ ಆಗಮಿಸಿರುವ 10 ಸಾವಿರದಷ್ಟು ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು. ವೇತನ ಹೆಚ್ಚಳ, ಆರೋಗ್ಯ ವಿಮೆ, ನಿವೃತ್ತಿ ವೇತನ ಸೇರಿದಂತೆ 20ಕ್ಕೂ ಹೆಚ್ಚು ಬೇಡಿಕೆಗಳನ್ನು ಮಂಡಿಸಿದರು.</p>.<p>‘ಸಂಸದರು, ಶಾಸಕರು ಯಾವುದೇ ಚರ್ಚೆಯಿಲ್ಲದೇ ತಮ್ಮ ವೇತನ ಹಾಗೂ ಸೌಲಭ್ಯಗಳನ್ನು ಏರಿಸಿಕೊಳ್ಳುತ್ತಾರೆ. ದಿನವಿಡೀ ದುಡಿಯುವ ನಮ್ಮ ಬೇಡಿಕೆಗಳು ಅವರಿಗೆ ಏಕೆ ಕಾಣುತ್ತಿಲ್ಲ. ಕೆಲವೇ ಉದ್ಯಮಿಗಳ ₹18 ಲಕ್ಷ ಕೋಟಿ ಕಾರ್ಪೊರೇಟ್ ಸಾಲ ಮನ್ನಾ ಮಾಡಲಾಗಿದೆ. ಅದರ ಬದಲು ನಮಗೆ ನೆರವಾದರೆ 56 ಲಕ್ಷ ಕುಟುಂಬಗಳಿಗೆ ಒಳಿತಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>‘ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಅವರಿಂದ ಸೂಕ್ತ ಭರವಸೆ ಸಿಗುವವರೆಗೂ ಈ ಬಾರಿ ಧರಣಿ ನಿಲ್ಲುವುದಿಲ್ಲ. ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರು ನಮ್ಮ ಪರವಾಗಿ ಗಟ್ಟಿ ದನಿ ತೋರಬೇಕು’ ಎಂದು ಪ್ರಮುಖರು ಹೇಳಿದರು.</p>.<div><blockquote>ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರ ಕಚೇರಿಗಳ ಎದುರು ಪ್ರತಿಭಟನೆ ನಡೆದಿದೆ. ಲೋಕಸಭೆಯಲ್ಲಿ ಚರ್ಚಿಸಿ ಮುಂದಿನ ಬಜೆಟ್ನಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಹೋರಾಟ ನಿಲ್ಲದು.</blockquote><span class="attribution">ಎಸ್.ವರಲಕ್ಷ್ಮಿ ಅಧ್ಯಕ್ಷೆ ಸಿಐಟಿಯು ಕರ್ನಾಟಕ</span></div>.<h3><strong>ಬೇಡಿಕೆಗಳೇನು</strong> </h3><p>ಕೇಂದ್ರ ಸರ್ಕಾರ ಕನಿಷ್ಠ ₹21 ಸಾವಿರ ವೇತನ ನೀಡಲಿ </p><p>56 ಲಕ್ಷ ಸ್ಕೀಮ್ ಕಾರ್ಮಿಕರ ಸೇವಾ ಷರತ್ತು ಸುಧಾರಣೆಗೆ ವೇತನ ಆಯೋಗ ರಚಿಸಿ </p><p>ಅಂಗನವಾಡಿಗಳಲ್ಲಿ ಎಫ್ಆರ್ಎಸ್ ರದ್ದು ಮಾಡಿ ಇಲ್ಲವೇ ವೈಫೈ ವ್ಯವಸ್ಥೆ ಕೊಡಿ </p><p>ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಿ </p><p>ಅಂಗನವಾಡಿಗಳಲ್ಲಿ ಎಲ್ಕೆಜಿ ಯುಕೆಜಿ ಆರಂಭಿಸಿ </p><p>ನಮಗೂ ಹೆರಿಗೆ ಮುಟ್ಟಿನ ರಜೆ ವಿಸ್ತರಿಸಿ </p><p>ಬಿಸಿಯೂಟ ನೌಕರರಿಗೆ ಕೆಲಸದ ಭದ್ರತೆ ನೀಡಿ </p><p>ಆಶಾ ಕಾರ್ಯಕರ್ತರಿಗೂ ನಿಯಮಿತವಾಗಿ ತರಬೇತಿ ಆಯೋಜಿಸಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>