ನೀತಿ ಆಯೋಗವು ಕಳೆದ ವರ್ಷ (2018ರಲ್ಲಿ) ಬಿಡುಗಡೆ ಮಾಡಿರುವ ಸಂಯೋಜಿತ ಜಲ ನಿರ್ವಹಣಾ ಸೂಚ್ಯಂಕದ ಪ್ರಕಾರ, ದೇಶದ 24 ನಗರಗಳಲ್ಲಿ ಅಂತರ್ಜಲ ಮಟ್ಟವು ಭಾರಿ ಪ್ರಮಾಣದಲ್ಲಿ ಕ್ಷೀಣಿಸುತ್ತಿದೆ ಎಂಬ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಒಳಗೊಂಡಂತೆ ಈ ಎಲ್ಲ ನಗರಗಳ ಅಂತರ್ಜಲದ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಹಸಿರು ಪೀಠವು ತಜ್ಞರ ಸಮಿತಿಗೆ ಸೂಚಿಸಿತ್ತು.