ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆ ನಿಂತಿರುವುದರಿಂದ ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳು ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿವೆ. ಪ್ರತಿ ಹಬ್ಬದಂತೆ ಸಂಕ್ರಾಂತಿಗೂ ಐದಾರು ದಿನಗಳ ಮುನ್ನವೇ ಖರೀದಿ ಭರಾಟೆ ಗರಿಗೆದರಿದೆ. ಮಾರುಕಟ್ಟೆಯಲ್ಲಿ ಕಬ್ಬು, ಕಡಲೆಕಾಯಿ, ಗೆಣಸು ಮತ್ತು ಅವರೆ ರಾಶಿಗಳು ಕಣ್ಸೆಳೆಯುತ್ತಿವೆ. ಬೆಳ್ಳುಳ್ಳಿ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಶುಂಠಿ, ಮೆಣಸಿನಕಾಯಿ, ಬೀಟ್ರೂಟ್, ಬದನೆ, ಬೀನ್ಸ್, ಬೆಂಡೆಕಾಯಿ ದರಗಳು ಏರಿಕೆಯಾಗಿವೆ. ಮೂಲಂಗಿ, ಟೊಮೆಟೊ, ಹೂಕೋಸು ಮತ್ತು ಎಲೆಕೋಸು ತುಸು ಅಗ್ಗವಾಗಿವೆ.