ಅಮರ ಜ್ಯೋತಿ ಲೇಔಟ್ನಲ್ಲಿ ಮಳೆಗಾಲದ ವೇಳೆ ರಸ್ತೆಗಳಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಶೀಲಿಸಿದ ಅವರು, ‘5ನೇ ಮುಖ್ಯ ರಸ್ತೆಯ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆವರಣದಲ್ಲಿ ಸಣ್ಣ ಮೋರಿ ಇದೆ. ಹೊಸದಾಗಿ ಮೋರಿ ನಿರ್ಮಿಸಿದರೆ ರಸ್ತೆಗಳ ಮೇಲೆ ನಿಲ್ಲುವ ನೀರು ಸರಾಗವಾಗಿ ಹರಿದು ಹೋಗಲಿದೆ. ಗಾಲ್ಫ್ ಕ್ಲಬ್ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸಮಸ್ಯೆ ಇತ್ಯರ್ಥಪಡಿಸಿ’ ಎಂದು ತಿಳಿಸಿದರು.