<p><strong>ಬೆಂಗಳೂರು:</strong> ನಗರದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಮೂಲಸೌಲಭ್ಯ ಒದಗಿಸಬೇಕು ಹಾಗೂ ಜೀವನ ಗುಣಮಟ್ಟವನ್ನು ವೃದ್ಧಿಸಬೇಕು ಎಂಬ ಉದ್ದೇಶದಿಂದ ಒಟ್ಟಾರೆ ಬಜೆಟ್ನ ಹಂಚಿಕೆಯಲ್ಲಿ ಶೇ 63.66ರಷ್ಟು ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಏಳು ಸಾವಿರ ಕೋಟಿಗೂ ಮೀರಿದ ಹಣವನ್ನು ಈ ವಲಯಕ್ಕೆ ನೀಡಲಾಗಿದೆ.</p>.<p>ಅಮೃತ ನಗರೋತ್ಥಾನ ಯೋಜನೆಯಲ್ಲಿ ₹6 ಸಾವಿರ ಕೋಟಿ ವೆಚ್ಚ ಮಾಡಿರುವ ಕಾರಣಕ್ಕೆ 2022–23 ಅನ್ನು ‘ಅಮೃತ ವರ್ಷ’ ಎಂದೇ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಶಂಸಿಸಲಾಗಿದೆ. ಹಳೆಯ ಯೋಜನೆಗಳನ್ನು ಮತ್ತೆ ಪ್ರಸ್ತಾಪಿಸಿ, ರಾಜ್ಯ ಸರ್ಕಾರ ಬಜೆಟ್ನಲ್ಲಿ ಪ್ರಕಟಿಸಿರುವ ಯೋಜನೆಗಳನ್ನು ನಮೂದಿಸಿದ್ದು, ಹೊಸ ಯೋಜನೆಗಳಿಗೆ ಸಾಲವನ್ನೂ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.</p>.<p>ಸಂಚಾರ ದಟ್ಟಣೆ ಹಾಗೂ ಜಂಕ್ಷನ್ಗಳ ನಿಧಾನಗತಿಯ ಸಂಚಾರ ಸಮಸ್ಯೆ ನೀಗಿಸಲು ಸಿಗ್ನಲ್ರಹಿತ ಸಂಚಾರ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಐದು ಹೊಸ ಮೇಲ್ಸೇತುವೆ ನಿರ್ಮಿಸಲು ₹210 ಕೋಟಿ ವೆಚ್ಚ ಮಾಡಲಾಗುತ್ತಿದೆ.</p>.<p>ನಿಧಾನಗತಿಯ ಸಂಚಾರವನ್ನು ತಪ್ಪಿಸಲು 75 ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿ ಹಾಗೂ 60 ಅಡಿ ಉದ್ದಕ್ಕೂ ಕಡಿಮೆಯಿರುವ ರಸ್ತೆಗಳಲ್ಲಿ ‘ಬಾಟಲ್ನೆಕ್’ ಪರಿಸ್ಥಿತಿ ನಿವಾರಣೆಗೆ ₹150 ಕೋಟಿ ಮೀಸಲಿಟ್ಟು, ರಸ್ತೆ ವಿಸ್ತರಣೆ ಹಾಗೂ ಸಮತೋಲನ ಕಾಪಾಡಲು<br />ಉದ್ದೇಶಿಸಲಾಗಿದೆ.</p>.<p>ಹೊಸ ಮೇಲ್ಸೇತುವೆಗಳಲ್ಲದೆ 9 ಹಳೆಯ ರಸ್ತೆ ಯೋಜನೆಗಳಿಗೆ ₹965 ಕೋಟಿ ಹೆಚ್ಚುವರಿ ಅನುದಾನ ನೀಡಲು ₹770 ಕೋಟಿಯನ್ನು ಕೆಯುಐಡಿಎಫ್ಸಿಯಿಂದ ಸಾಲ ಪಡೆಯಲಾಗುತ್ತಿದೆ. ಉಳಿದ ₹195 ಕೋಟಿಯನ್ನು ಬಿಬಿಎಂಪಿ ಭರಿಸುತ್ತಿದೆ.</p>.<p>ನಗರದಲ್ಲಿ 42 ಮೇಲ್ಸೇತುವೆ ಮತ್ತು 28 ಕೆಳಸೇತುವೆಗಳಿದ್ದು, ಹೊಸದಾಗಿ ನಾಲ್ಕು ಮೇಲ್ಸೇತುವೆ ಹಾಗೂ ನಾಲ್ಕು ಕೆಳಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಮೇಲ್ಸೇತುವೆ–ಕೆಳಸೇತುವೆ ಸೇರಿದಂತೆ ಸುರಂಗ ಮಾರ್ಗಗಳ ನಿರ್ವಹಣೆಗೆ ₹20 ಕೋಟಿ ಮೀಸಡಲಿಡಲಾಗಿದೆ. ಮುಖ್ಯ, ಉಪಮುಖ್ಯ ರಸ್ತೆಗಳ ನಿರ್ವಹಣೆ, ಟೆಂಡರ್ ಶ್ಯೂರ್– ಸ್ಮಾರ್ಟ್ ಸಿಟಿ ಯೋಜನೆಯ ರಸ್ತೆಗಳ ನಿರ್ವಹಣೆಗೂ ₹20 ಕೋಟಿ ನೀಡಲಾಗಿದೆ.</p>.<p class="Briefhead"><u><strong>ಪ್ರತಿ ವಾರ್ಡ್ಗೆ ₹2 ಕೋಟಿ</strong></u></p>.<p>ವಲಯವಾರು ಕಾಮಗಾರಿಗಾಗಿ ಪ್ರತಿ ವಾರ್ಡ್ಗೆ ₹2 ಕೋಟಿ ಮೊತ್ತವನ್ನು ಕಾಮಗಾರಿ ಹಣ ಎಂದು ನಿಗದಿಪಡಿಸಲಾಗಿದೆ. 243 ವಾರ್ಡ್ಗಳಲ್ಲಿ ಚರಂಡಿಗಳ ಹೂಳೆತ್ತುವಿಕೆ, ನಿರ್ವಹಣೆಗೆ ತಲಾ ₹30 ಲಕ್ಷ, ರಸ್ತೆ ಗುಂಡಿ ಮುಚ್ಚಲು ತಲಾ ₹15 ಲಕ್ಷ, ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ ₹25 ಲಕ್ಷ, ಮಳೆಗಾಲ ನಿಯಂತ್ರಣ ಕೊಠಡಿ ನಿರ್ವಹಣೆಗೆ ತಲಾ ₹5 ಲಕ್ಷ ನೀಡಲಾಗಿದೆ. ಇದಲ್ಲದೆ ವಾರ್ಡ್ ಕಾಮಗಾರಿಗಳಿಗಾಗಿಯೇತಲಾ ₹125 ಲಕ್ಷ ಬಿಡುಗಡೆ ಮಾಡಲುನಿರ್ಧರಿಸಲಾಗಿದೆ.</p>.<p class="Briefhead"><strong>ಆ್ಯಪ್ ಮೂಲಕ ಪಾವತಿ</strong></p>.<p>ರಸ್ತೆ ಗುಂಡಿ ಕಾಮಗಾರಿಯನ್ನು ’ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ಮೂಲಕವೇ ನಿರ್ವಹಿಸಲು ನಿರ್ಧರಿಸಲಾಗಿದೆ. ನಾಗರಿಕರು ಜಿಯೊಟ್ಯಾಗ್ನೊಂದಿಗೆ ಕಳುಹಿಸಿದ ಗುಂಡಿ ಚಿತ್ರವನ್ನು ಪರಿಶೀಲಿಸಿ, ಕಾಮಗಾರಿ ಪರಿವೀಕ್ಷಣೆ, ಬಿಲ್ ಸಲ್ಲಿಸುವುದು ಮತ್ತು ಪಾವತಿಸುವುದನ್ನು ಆ್ಯಪ್ನಲ್ಲೇ ನಿರ್ವಹಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಮೂಲಸೌಲಭ್ಯ ಒದಗಿಸಬೇಕು ಹಾಗೂ ಜೀವನ ಗುಣಮಟ್ಟವನ್ನು ವೃದ್ಧಿಸಬೇಕು ಎಂಬ ಉದ್ದೇಶದಿಂದ ಒಟ್ಟಾರೆ ಬಜೆಟ್ನ ಹಂಚಿಕೆಯಲ್ಲಿ ಶೇ 63.66ರಷ್ಟು ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಏಳು ಸಾವಿರ ಕೋಟಿಗೂ ಮೀರಿದ ಹಣವನ್ನು ಈ ವಲಯಕ್ಕೆ ನೀಡಲಾಗಿದೆ.</p>.<p>ಅಮೃತ ನಗರೋತ್ಥಾನ ಯೋಜನೆಯಲ್ಲಿ ₹6 ಸಾವಿರ ಕೋಟಿ ವೆಚ್ಚ ಮಾಡಿರುವ ಕಾರಣಕ್ಕೆ 2022–23 ಅನ್ನು ‘ಅಮೃತ ವರ್ಷ’ ಎಂದೇ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಶಂಸಿಸಲಾಗಿದೆ. ಹಳೆಯ ಯೋಜನೆಗಳನ್ನು ಮತ್ತೆ ಪ್ರಸ್ತಾಪಿಸಿ, ರಾಜ್ಯ ಸರ್ಕಾರ ಬಜೆಟ್ನಲ್ಲಿ ಪ್ರಕಟಿಸಿರುವ ಯೋಜನೆಗಳನ್ನು ನಮೂದಿಸಿದ್ದು, ಹೊಸ ಯೋಜನೆಗಳಿಗೆ ಸಾಲವನ್ನೂ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.</p>.<p>ಸಂಚಾರ ದಟ್ಟಣೆ ಹಾಗೂ ಜಂಕ್ಷನ್ಗಳ ನಿಧಾನಗತಿಯ ಸಂಚಾರ ಸಮಸ್ಯೆ ನೀಗಿಸಲು ಸಿಗ್ನಲ್ರಹಿತ ಸಂಚಾರ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಐದು ಹೊಸ ಮೇಲ್ಸೇತುವೆ ನಿರ್ಮಿಸಲು ₹210 ಕೋಟಿ ವೆಚ್ಚ ಮಾಡಲಾಗುತ್ತಿದೆ.</p>.<p>ನಿಧಾನಗತಿಯ ಸಂಚಾರವನ್ನು ತಪ್ಪಿಸಲು 75 ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿ ಹಾಗೂ 60 ಅಡಿ ಉದ್ದಕ್ಕೂ ಕಡಿಮೆಯಿರುವ ರಸ್ತೆಗಳಲ್ಲಿ ‘ಬಾಟಲ್ನೆಕ್’ ಪರಿಸ್ಥಿತಿ ನಿವಾರಣೆಗೆ ₹150 ಕೋಟಿ ಮೀಸಲಿಟ್ಟು, ರಸ್ತೆ ವಿಸ್ತರಣೆ ಹಾಗೂ ಸಮತೋಲನ ಕಾಪಾಡಲು<br />ಉದ್ದೇಶಿಸಲಾಗಿದೆ.</p>.<p>ಹೊಸ ಮೇಲ್ಸೇತುವೆಗಳಲ್ಲದೆ 9 ಹಳೆಯ ರಸ್ತೆ ಯೋಜನೆಗಳಿಗೆ ₹965 ಕೋಟಿ ಹೆಚ್ಚುವರಿ ಅನುದಾನ ನೀಡಲು ₹770 ಕೋಟಿಯನ್ನು ಕೆಯುಐಡಿಎಫ್ಸಿಯಿಂದ ಸಾಲ ಪಡೆಯಲಾಗುತ್ತಿದೆ. ಉಳಿದ ₹195 ಕೋಟಿಯನ್ನು ಬಿಬಿಎಂಪಿ ಭರಿಸುತ್ತಿದೆ.</p>.<p>ನಗರದಲ್ಲಿ 42 ಮೇಲ್ಸೇತುವೆ ಮತ್ತು 28 ಕೆಳಸೇತುವೆಗಳಿದ್ದು, ಹೊಸದಾಗಿ ನಾಲ್ಕು ಮೇಲ್ಸೇತುವೆ ಹಾಗೂ ನಾಲ್ಕು ಕೆಳಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಮೇಲ್ಸೇತುವೆ–ಕೆಳಸೇತುವೆ ಸೇರಿದಂತೆ ಸುರಂಗ ಮಾರ್ಗಗಳ ನಿರ್ವಹಣೆಗೆ ₹20 ಕೋಟಿ ಮೀಸಡಲಿಡಲಾಗಿದೆ. ಮುಖ್ಯ, ಉಪಮುಖ್ಯ ರಸ್ತೆಗಳ ನಿರ್ವಹಣೆ, ಟೆಂಡರ್ ಶ್ಯೂರ್– ಸ್ಮಾರ್ಟ್ ಸಿಟಿ ಯೋಜನೆಯ ರಸ್ತೆಗಳ ನಿರ್ವಹಣೆಗೂ ₹20 ಕೋಟಿ ನೀಡಲಾಗಿದೆ.</p>.<p class="Briefhead"><u><strong>ಪ್ರತಿ ವಾರ್ಡ್ಗೆ ₹2 ಕೋಟಿ</strong></u></p>.<p>ವಲಯವಾರು ಕಾಮಗಾರಿಗಾಗಿ ಪ್ರತಿ ವಾರ್ಡ್ಗೆ ₹2 ಕೋಟಿ ಮೊತ್ತವನ್ನು ಕಾಮಗಾರಿ ಹಣ ಎಂದು ನಿಗದಿಪಡಿಸಲಾಗಿದೆ. 243 ವಾರ್ಡ್ಗಳಲ್ಲಿ ಚರಂಡಿಗಳ ಹೂಳೆತ್ತುವಿಕೆ, ನಿರ್ವಹಣೆಗೆ ತಲಾ ₹30 ಲಕ್ಷ, ರಸ್ತೆ ಗುಂಡಿ ಮುಚ್ಚಲು ತಲಾ ₹15 ಲಕ್ಷ, ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ ₹25 ಲಕ್ಷ, ಮಳೆಗಾಲ ನಿಯಂತ್ರಣ ಕೊಠಡಿ ನಿರ್ವಹಣೆಗೆ ತಲಾ ₹5 ಲಕ್ಷ ನೀಡಲಾಗಿದೆ. ಇದಲ್ಲದೆ ವಾರ್ಡ್ ಕಾಮಗಾರಿಗಳಿಗಾಗಿಯೇತಲಾ ₹125 ಲಕ್ಷ ಬಿಡುಗಡೆ ಮಾಡಲುನಿರ್ಧರಿಸಲಾಗಿದೆ.</p>.<p class="Briefhead"><strong>ಆ್ಯಪ್ ಮೂಲಕ ಪಾವತಿ</strong></p>.<p>ರಸ್ತೆ ಗುಂಡಿ ಕಾಮಗಾರಿಯನ್ನು ’ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ಮೂಲಕವೇ ನಿರ್ವಹಿಸಲು ನಿರ್ಧರಿಸಲಾಗಿದೆ. ನಾಗರಿಕರು ಜಿಯೊಟ್ಯಾಗ್ನೊಂದಿಗೆ ಕಳುಹಿಸಿದ ಗುಂಡಿ ಚಿತ್ರವನ್ನು ಪರಿಶೀಲಿಸಿ, ಕಾಮಗಾರಿ ಪರಿವೀಕ್ಷಣೆ, ಬಿಲ್ ಸಲ್ಲಿಸುವುದು ಮತ್ತು ಪಾವತಿಸುವುದನ್ನು ಆ್ಯಪ್ನಲ್ಲೇ ನಿರ್ವಹಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>