ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಈ ಕುರಿತು ಇದೇ 8ರಂದು ಆದೇಶ ಹೊರಡಿಸಿದ್ದಾರೆ. ಆಯಾ ವಲಯಗಳ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಈ ತಂಡದಲ್ಲಿರಲಿದ್ದಾರೆ. ಕೋವಿಡ್ನಿಂದ ಸತ್ತ ಕಾಯಂ ನೌಕರರ ವಿವರಗಳನ್ನು ಪರಿಶೀಲಿಸಿ ಈ ತಂಡವು ಪರಿಹಾರ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಪಿ–3558 ಭತ್ಯೆ ಮತ್ತು ಸೌಲಭ್ಯ ಲೆಕ್ಕ ಶೀರ್ಷಿಕೆಯಡಿ ಪರಿಹಾರದ ಮೊತ್ತ ಪಾವತಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.