<p><strong>ಬೆಂಗಳೂರು:</strong> ‘ಪ್ಲಾಸ್ಟರ್ಆಫ್ ಪ್ಯಾರಿಸ್ನಿಂದ (ಪಿಒಪಿ) ಗಣೇಶ ವಿಗ್ರಹಗಳ ಆರಾಧನೆ ಕೈಬಿಟ್ಟು, ಮಣ್ಣಿನ ವಿಗ್ರಹಗಳನ್ನು ಪೂಜಿಸಿ’ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಪರಿಸರಸ್ನೇಹಿ ಗಣೇಶ ವಿಗ್ರಹಗಳ ಬಳಕೆ ಉತ್ತೇಜಿಸಲು ‘ಬಾಂಧವ’ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.</p>.<p>‘ಪಿಒಪಿ ಗಣೇಶ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಅವುಗಳಿಗೆ ಬಳಸುವ ಬಣ್ಣಗಳಲ್ಲಿರುವ ರಾಸಾಯನಿಕಗಳಿಂದಾಗಿ ಕೆರೆಗಳು ಮಲಿನವಾಗಿ, ಜಲಚರಗಳು ಸಾಯುತ್ತವೆ. ಆದ್ದರಿಂದ ಪಿಒಪಿಯಿಂದ ತಯಾರಿಸಿದ ವಿಗ್ರಹಗಳ ಸಂಪೂರ್ಣ ನಿಷೇಧದ ಅನುಷ್ಠಾನಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು.</p>.<p>ಶಾಸಕಿ ಸೌಮ್ಯಾ ರೆಡ್ಡಿ, ‘ನಗರದ ಕೆರೆಗಳ ನೀರು ಕಲುಷಿತವಾಗುತ್ತಿವೆ. ಹೆಚ್ಚುತ್ತಿರುವ ಮಾಲಿನ್ಯ ನಗರಕ್ಕೆ ಕಪ್ಪು ಚುಕ್ಕೆ’ ಎಂದರು.</p>.<p><strong>5 ಸಾವಿರ ವಿತರಣೆ:</strong>ಬಾಂಧವ ಸಂಸ್ಥೆಯು ಜೇಡಿಮಣ್ಣಿನಿಂದ ತಯಾರಿಸಿದ 5,001 ಗಣೇಶ ವಿಗ್ರಹಗಳನ್ನು ಉಚಿತವಾಗಿ ವಿತರಣೆ ಮಾಡಲಿದೆ.ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಆಭಿಯಾನ ಹಮ್ಮಿಕೊಂಡಿದೆ.ಮಕ್ಕಳೇ ಗಣೇಶ ವಿಗ್ರಹಗಳನ್ನು ತಯಾರಿಸಲಿದ್ದಾರೆ. ಆ.31ರಂದುಜಯನಗರ ಕಾಂಪ್ಲೆಕ್ಸ್ ಸಂಕಿರಣದ ಮುಂಭಾಗ ವಿಗ್ರಹ ವಿತರಣೆ ಮಾಡಲಾಗುತ್ತದೆ. <strong>ಸಂಪರ್ಕ: 9341389999</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ಲಾಸ್ಟರ್ಆಫ್ ಪ್ಯಾರಿಸ್ನಿಂದ (ಪಿಒಪಿ) ಗಣೇಶ ವಿಗ್ರಹಗಳ ಆರಾಧನೆ ಕೈಬಿಟ್ಟು, ಮಣ್ಣಿನ ವಿಗ್ರಹಗಳನ್ನು ಪೂಜಿಸಿ’ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಪರಿಸರಸ್ನೇಹಿ ಗಣೇಶ ವಿಗ್ರಹಗಳ ಬಳಕೆ ಉತ್ತೇಜಿಸಲು ‘ಬಾಂಧವ’ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.</p>.<p>‘ಪಿಒಪಿ ಗಣೇಶ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಅವುಗಳಿಗೆ ಬಳಸುವ ಬಣ್ಣಗಳಲ್ಲಿರುವ ರಾಸಾಯನಿಕಗಳಿಂದಾಗಿ ಕೆರೆಗಳು ಮಲಿನವಾಗಿ, ಜಲಚರಗಳು ಸಾಯುತ್ತವೆ. ಆದ್ದರಿಂದ ಪಿಒಪಿಯಿಂದ ತಯಾರಿಸಿದ ವಿಗ್ರಹಗಳ ಸಂಪೂರ್ಣ ನಿಷೇಧದ ಅನುಷ್ಠಾನಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು.</p>.<p>ಶಾಸಕಿ ಸೌಮ್ಯಾ ರೆಡ್ಡಿ, ‘ನಗರದ ಕೆರೆಗಳ ನೀರು ಕಲುಷಿತವಾಗುತ್ತಿವೆ. ಹೆಚ್ಚುತ್ತಿರುವ ಮಾಲಿನ್ಯ ನಗರಕ್ಕೆ ಕಪ್ಪು ಚುಕ್ಕೆ’ ಎಂದರು.</p>.<p><strong>5 ಸಾವಿರ ವಿತರಣೆ:</strong>ಬಾಂಧವ ಸಂಸ್ಥೆಯು ಜೇಡಿಮಣ್ಣಿನಿಂದ ತಯಾರಿಸಿದ 5,001 ಗಣೇಶ ವಿಗ್ರಹಗಳನ್ನು ಉಚಿತವಾಗಿ ವಿತರಣೆ ಮಾಡಲಿದೆ.ಶಾಲಾ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಆಭಿಯಾನ ಹಮ್ಮಿಕೊಂಡಿದೆ.ಮಕ್ಕಳೇ ಗಣೇಶ ವಿಗ್ರಹಗಳನ್ನು ತಯಾರಿಸಲಿದ್ದಾರೆ. ಆ.31ರಂದುಜಯನಗರ ಕಾಂಪ್ಲೆಕ್ಸ್ ಸಂಕಿರಣದ ಮುಂಭಾಗ ವಿಗ್ರಹ ವಿತರಣೆ ಮಾಡಲಾಗುತ್ತದೆ. <strong>ಸಂಪರ್ಕ: 9341389999</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>