<p><strong>ಬೆಂಗಳೂರು:</strong> ಬಿಬಿಎಂಪಿಯ ಈಗಿನ ಕೌನ್ಸಿಲ್ನ ಈಗಿನ ಅವಧಿ ಇದೇ 10ರಂದು ಮುಗಿಯಲಿದೆ. ಆ ಬಳಿಕ ಪಾಲಿಕೆಗೆ ಆಡಳಿತಾಧಿಕಾರಿ ನೇಮಕಕ್ಕೆ 1976ರ ಕರ್ನಾಟಕ ಪೌರಾಡಳಿತ ಕಾಯ್ದೆಯಲ್ಲಿ ಅವಕಾಶ ಇಲ್ಲವೇ?</p>.<p>ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಮಂಗಳವಾರ ಚರ್ಚೆಗೆ ಒಳಗಾಯಿತು. ‘ಯಾವ ಕಾಯ್ದೆ ಅಡಿ ಪಾಲಿಕೆಗೆ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರಶ್ನಿಸಿದರು.</p>.<p>ಇದಕ್ಕೆ ಆಯುಕ್ತರ ಪರವಾಗಿ ಉತ್ತರಿಸಿದ ವಿಶೇಷ ಆಯುಕ್ತ ಅನ್ಬುಕುಮಾರ್, ‘ಕೆಎಂಸಿ ಕಾಯ್ದೆ ಸೆಕ್ಷನ್ 100 ಎ ಪ್ರಕಾರ, ಚುನಾವಣೆ ನಡೆಸಲು ನ್ಯಾಯಾಲಯದ ತಡೆ ಇದ್ದಾಗ, ಕೌನ್ಸಿಲ್ನ ಮೂರನೇ ಎರಡರಷ್ಟು ಸದಸ್ಯರು ರಾಜೀನಾಮೆ ನೀಡಿದ್ದರೆ ಅಥವಾ ಮೂರನೇ ಎರಡರಷ್ಟು ಸದಸ್ಯರ ಸದಸ್ಯತ್ವ ರದ್ದಾಗಿದ್ದರೆ ಆಡಳಿತಾಧಿಕಾರಿಯನ್ನು ನೇಮಿಸಬಹುದು’ ಎಂದರು.</p>.<p>‘ಈಗ ಅಂತಹ ಪ್ರಮೇಯವೇ ಉದ್ಭವಿಸಿಲ್ಲ. ಯಾವ ಆಧಾರದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲಾಗುತ್ತದೆ ಎಂಬುದನ್ನು ಕಾನೂನುಕೋಶದ ಮುಖ್ಯಸ್ಥರು ಸ್ಪಷ್ಟಪಡಿಸಬೇಕು’ ಎಂದು ವಾಜಿದ್ ಒತ್ತಾಯಿಸಿದರು.</p>.<p>‘ಕೆಎಂಸಿ ಕಾಯ್ದೆಯ ಸೆಕ್ಷನ್ 508ರ ಪ್ರಕಾರ ಈ ಕಾಯ್ದೆಯ ಯಾವುದೇ ಅಂಶಗಳು ಅನ್ವಯ ಆಗದ ಸಂದರ್ಭದಲ್ಲಿ ಸರ್ಕಾರ ತನ್ನ ಅಧಿಕಾರ ಚಲಾಯಿಸಿ ರಾಜ್ಯಪತ್ರದಲ್ಲಿ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟಿಸಿ ಆಡಳಿತಾಧಿಕಾರಿ ನೇಮಕಕ್ಕೆ ಕ್ರಮಕೈಗೊಳ್ಳಬಹುದು. ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿಲ್ಲದೆ ಬಿಕ್ಕಟ್ಟು ಸೃಷ್ಟಿಯಾದರೆ, ಅದನ್ನು ನಿವಾರಿಸಲು ಸೆಕ್ಷನ್ 509ರ ಪ್ರಕಾರ ಕ್ರಮ ಕೈಗೊಳ್ಳಬಹುದು’ ಎಂದು ಕಾನೂನುಕೋಶದ ಮುಖ್ಯಸ್ಥರು ತಿಳಿಸಿದರು.</p>.<p>‘ಚುನಾವಣೆ ಮುಂದೂಡಲು ಕೆಎಂಸಿ ಕಾಯ್ದೆ ಸೆಕ್ಷನ್ 508 ಅಥವಾ 509 ಅನ್ನು ಬಳಸಲು ಕೆಎಂಸಿಯ ಮೂಲ ಸ್ವರೂಪದಲ್ಲಿ ಅವಕಾಶ ಇದ್ದುದು ನಿಜ. ಆದರೆ, 1994ರಲ್ಲಿ ಸಂವಿಧಾನದ 74ನೇ ತಿದ್ದುಪಡಿ ಬಳಿಕ ಚುನಾವಣೆ ಮುಂದೂಡಲು ಈ ಸೆಕ್ಷನ್ಗಳನ್ನು ಬಳಸಲು ಅವಕಾಶ ಇಲ್ಲ. ಜಿ.ಕುಪ್ಪುಸ್ವಾಮಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಹೈಕೋರ್ಟ್ ಇದನ್ನು ಸ್ಪಷ್ಟಪಡಿಸಿದೆ’ ಎಂದು ಪದ್ಮನಾಭ ರೆಡ್ಡಿ ಸ್ಪಷ್ಟಪಡಿಸಿದರು.</p>.<p>‘ಕಾನೂನು ಹಾಗೂ ಸಂವಿಧಾನ ವಿಚಾರಗಳು ಬಂದಾಗ ಸಂವಿಧಾನವೇ ಮೇಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸರ್ಕಾರ ನಿರಂತರವಾಗಿರಬೇಕು ಎಂಬುದು ಸಂವಿಧಾನದ 74ನೇ ತಿದ್ದುಪಡಿಯ ಆಶಯ. ಅದಕ್ಕೆ ಚುನಾವಣಾ ಆಯೋಗ ಬದ್ಧವಾಗಿರಬೇಕು’ ಎಂದು ಗುಣಶೇಖರ ತಿಳಿಸಿದರು.</p>.<p>‘ಕೋವಿಡ್ ಇರುವುದರಿಂದ ಪಾಲಿಕೆಗೆ ಆಡಳಿತಾಧಿಕಾರಿ ನೇಮಕಕ್ಕೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಅವರಿಗೆ ಅಧಿಕಾರವಿದೆ. ಬೇರೆಲ್ಲ ಕಾಯ್ದೆಗಳ ಅಂಶವನ್ನು ಮೀರಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ವಿಪತ್ತು ನಿರ್ವಹಣಾ ಕಾಯ್ದೆ ಒದಗಿಸುತ್ತದೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿಯ ಈಗಿನ ಕೌನ್ಸಿಲ್ನ ಈಗಿನ ಅವಧಿ ಇದೇ 10ರಂದು ಮುಗಿಯಲಿದೆ. ಆ ಬಳಿಕ ಪಾಲಿಕೆಗೆ ಆಡಳಿತಾಧಿಕಾರಿ ನೇಮಕಕ್ಕೆ 1976ರ ಕರ್ನಾಟಕ ಪೌರಾಡಳಿತ ಕಾಯ್ದೆಯಲ್ಲಿ ಅವಕಾಶ ಇಲ್ಲವೇ?</p>.<p>ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಮಂಗಳವಾರ ಚರ್ಚೆಗೆ ಒಳಗಾಯಿತು. ‘ಯಾವ ಕಾಯ್ದೆ ಅಡಿ ಪಾಲಿಕೆಗೆ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರಶ್ನಿಸಿದರು.</p>.<p>ಇದಕ್ಕೆ ಆಯುಕ್ತರ ಪರವಾಗಿ ಉತ್ತರಿಸಿದ ವಿಶೇಷ ಆಯುಕ್ತ ಅನ್ಬುಕುಮಾರ್, ‘ಕೆಎಂಸಿ ಕಾಯ್ದೆ ಸೆಕ್ಷನ್ 100 ಎ ಪ್ರಕಾರ, ಚುನಾವಣೆ ನಡೆಸಲು ನ್ಯಾಯಾಲಯದ ತಡೆ ಇದ್ದಾಗ, ಕೌನ್ಸಿಲ್ನ ಮೂರನೇ ಎರಡರಷ್ಟು ಸದಸ್ಯರು ರಾಜೀನಾಮೆ ನೀಡಿದ್ದರೆ ಅಥವಾ ಮೂರನೇ ಎರಡರಷ್ಟು ಸದಸ್ಯರ ಸದಸ್ಯತ್ವ ರದ್ದಾಗಿದ್ದರೆ ಆಡಳಿತಾಧಿಕಾರಿಯನ್ನು ನೇಮಿಸಬಹುದು’ ಎಂದರು.</p>.<p>‘ಈಗ ಅಂತಹ ಪ್ರಮೇಯವೇ ಉದ್ಭವಿಸಿಲ್ಲ. ಯಾವ ಆಧಾರದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲಾಗುತ್ತದೆ ಎಂಬುದನ್ನು ಕಾನೂನುಕೋಶದ ಮುಖ್ಯಸ್ಥರು ಸ್ಪಷ್ಟಪಡಿಸಬೇಕು’ ಎಂದು ವಾಜಿದ್ ಒತ್ತಾಯಿಸಿದರು.</p>.<p>‘ಕೆಎಂಸಿ ಕಾಯ್ದೆಯ ಸೆಕ್ಷನ್ 508ರ ಪ್ರಕಾರ ಈ ಕಾಯ್ದೆಯ ಯಾವುದೇ ಅಂಶಗಳು ಅನ್ವಯ ಆಗದ ಸಂದರ್ಭದಲ್ಲಿ ಸರ್ಕಾರ ತನ್ನ ಅಧಿಕಾರ ಚಲಾಯಿಸಿ ರಾಜ್ಯಪತ್ರದಲ್ಲಿ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟಿಸಿ ಆಡಳಿತಾಧಿಕಾರಿ ನೇಮಕಕ್ಕೆ ಕ್ರಮಕೈಗೊಳ್ಳಬಹುದು. ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿಲ್ಲದೆ ಬಿಕ್ಕಟ್ಟು ಸೃಷ್ಟಿಯಾದರೆ, ಅದನ್ನು ನಿವಾರಿಸಲು ಸೆಕ್ಷನ್ 509ರ ಪ್ರಕಾರ ಕ್ರಮ ಕೈಗೊಳ್ಳಬಹುದು’ ಎಂದು ಕಾನೂನುಕೋಶದ ಮುಖ್ಯಸ್ಥರು ತಿಳಿಸಿದರು.</p>.<p>‘ಚುನಾವಣೆ ಮುಂದೂಡಲು ಕೆಎಂಸಿ ಕಾಯ್ದೆ ಸೆಕ್ಷನ್ 508 ಅಥವಾ 509 ಅನ್ನು ಬಳಸಲು ಕೆಎಂಸಿಯ ಮೂಲ ಸ್ವರೂಪದಲ್ಲಿ ಅವಕಾಶ ಇದ್ದುದು ನಿಜ. ಆದರೆ, 1994ರಲ್ಲಿ ಸಂವಿಧಾನದ 74ನೇ ತಿದ್ದುಪಡಿ ಬಳಿಕ ಚುನಾವಣೆ ಮುಂದೂಡಲು ಈ ಸೆಕ್ಷನ್ಗಳನ್ನು ಬಳಸಲು ಅವಕಾಶ ಇಲ್ಲ. ಜಿ.ಕುಪ್ಪುಸ್ವಾಮಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಹೈಕೋರ್ಟ್ ಇದನ್ನು ಸ್ಪಷ್ಟಪಡಿಸಿದೆ’ ಎಂದು ಪದ್ಮನಾಭ ರೆಡ್ಡಿ ಸ್ಪಷ್ಟಪಡಿಸಿದರು.</p>.<p>‘ಕಾನೂನು ಹಾಗೂ ಸಂವಿಧಾನ ವಿಚಾರಗಳು ಬಂದಾಗ ಸಂವಿಧಾನವೇ ಮೇಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸರ್ಕಾರ ನಿರಂತರವಾಗಿರಬೇಕು ಎಂಬುದು ಸಂವಿಧಾನದ 74ನೇ ತಿದ್ದುಪಡಿಯ ಆಶಯ. ಅದಕ್ಕೆ ಚುನಾವಣಾ ಆಯೋಗ ಬದ್ಧವಾಗಿರಬೇಕು’ ಎಂದು ಗುಣಶೇಖರ ತಿಳಿಸಿದರು.</p>.<p>‘ಕೋವಿಡ್ ಇರುವುದರಿಂದ ಪಾಲಿಕೆಗೆ ಆಡಳಿತಾಧಿಕಾರಿ ನೇಮಕಕ್ಕೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಅವರಿಗೆ ಅಧಿಕಾರವಿದೆ. ಬೇರೆಲ್ಲ ಕಾಯ್ದೆಗಳ ಅಂಶವನ್ನು ಮೀರಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ವಿಪತ್ತು ನಿರ್ವಹಣಾ ಕಾಯ್ದೆ ಒದಗಿಸುತ್ತದೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>