ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬುಧವಾರ ಪತ್ರ ಬರೆದಿರುವ ಶ್ರೀನಿವಾಸ ಪ್ರಸಾದ್, ‘ಈಗಾಗಲೇ ಆಯ್ಕೆಯಾಗಿರುವ 1,110 ಫಲಾನುಭವಿಗಳಿಗೆ ನಿವೇಶನ ನೀಡುವುದಕ್ಕೆ ಮಾತ್ರ ಈ ಜಮೀನನ್ನು ಉಪಯೋಗಿಸಿಕೊಳ್ಳಬೇಕು. ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಬಡಾವಣೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ನಿವೇಶನ ಹಂಚಲು ಆದೇಶ ಮಾಡಬೇಕು. ಈ ಜಮೀನನ್ನು ವಸತಿ ನಿರ್ಮಾಣಕ್ಕೆ ಬಳಸುವ ನಿರ್ದೇಶನವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.