‘ಫೆಬ್ರುವರಿ 27ರಂದು ಎರಡನೇ ಸೆಮಿಸ್ಟರ್ಗೆ ಬೋಧನೆ ಆರಂಭಿಸಿದ್ದೆವು. ಜೂನ್ 22ರವರೆಗೂ ಬೋಧನೆ ಮಾಡಿದ್ದೇವೆ. ಆದರೆ, ಗೌರವಧನ ನೀಡಿಯೇ ಇಲ್ಲ. ನನಗೊಬ್ಬನಿಗೆ ಅಲ್ಲ, ವಿಭಾಗದ ಎಲ್ಲ 10 ಮಂದಿಗೂ ಕೊಟ್ಟಿಲ್ಲ. ನನ್ನ ಅಮ್ಮನಿಗೆ ಅಸೌಖ್ಯ ಕಾಡುತ್ತಿದ್ದು, ಔಷಧ ತರುವುದಕ್ಕೂ ದುಡ್ಡಿಲ್ಲ. ಹೀಗಾಗಿ ನಿಮಗೆ ಕರೆ ಮಾಡಿ ನನ್ನ ದುಃಖ ಹೇಳಿಕೊಳ್ಳಬೇಕಾಯಿತು’ ಎಂದು ಉಪನ್ಯಾಸಕರು ಅಳಲು ತೋಡಿಕೊಂಡರು.