<p><strong>ಬೆಂಗಳೂರು:</strong> ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾದ ಎನ್.ಮಂಜುಳಾ ಬುಧವಾರ ಪರಿಶೀಲಿಸಿದರು.</p>.<p>ಬಡಾವಣೆಗೆ ಭೂಮಿ ಬಿಟ್ಟುಕೊಟ್ಟಿರುವ ರೈತರ ಮುಖಂಡರು ಹಾಗೂ ನಿವೇಶನದಾರರು ಈ ಸಂದರ್ಭದಲ್ಲಿ ಆಯುಕ್ತರಿಗೆ ಅಹವಾಲು ಸಲ್ಲಿಸಿದರು.</p>.<p>ಅಭಿವೃದ್ಧಿಪಡಿಸಿದ ನಿವೇಶನಗಳನ್ನು ರೈತರಿಗೆ ಬಿಟ್ಟುಕೊಡಲು ಮೀನಮೇಷ ಎಣಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕುಎಂದು ರೈತರು ಒತ್ತಾಯಿಸಿದರು.</p>.<p>‘ನಿವೇಶನ ನೀಡುವಾಗಲೂ ತಾರತಮ್ಯ ನಡೆಸಲಾಗುತ್ತಿದೆ. ಕೆಲವರಿಗೆ ಉತ್ತಮ ಜಾಗದಲ್ಲಿರುವ ನಿವೇಶನವನ್ನು ನೀಡಲಾಗುತ್ತಿದೆ’ ಎಂದು ರೈತರು ದೂರಿದರು.</p>.<p>ನಿವೇಶನ ಹಂಚಿಕೆ ಆಗಬೇಕಾದ ರೈತರ ಪಟ್ಟಿ ತಯಾರಿಸಿ ಸುಮಾರು 25 ಮಂದಿಗೆ ಒಟ್ಟಿಗೆ ನಿವೇಶನ ಹಂಚಿಕೆ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.</p>.<p>‘ಬಡಾವಣೆಯಲ್ಲಿ ಮೂಲಸೌಕರ್ಯ ಕಾಮಗಾರಿ ಚುರುಕುಗೊಳಿಸಬೇಕು ಹಾಗೂ ಅವುಗಳ ಗುಣಮಟ್ಟದಲ್ಲಿ ಲೋಪ ಆಗದಂತೆ ಎಚ್ಚರವಹಿಸಬೇಕು’ ಎಂದು ಈ ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆಯ ಪ್ರತಿನಿಧಿಗಳು ಒತ್ತಾಯಿಸಿದರು.</p>.<p>‘ಮುಖ್ಯರಸ್ತೆಗೆ ಕೆಲವೆಡೆ ರೈತರು ಇನ್ನಷ್ಟೇ ಜಮೀನು ಬಿಟ್ಟುಕೊಡಬೇಕಿದೆ. ಹಾಗಾಗಿ ಕಾಮಗಾರಿ ವಿಳಂಬವಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಿದ್ದೇವೆ’ ಎಂದು ಆಯುಕ್ತರು ಭರವಸೆ ನೀಡಿದರು.</p>.<p><strong>‘120 ದಿನದಲ್ಲಿ ದುಡ್ಡಿ ಕಟ್ಟಿದ್ದರೆ ಬಡ್ಡಿ ಇಲ್ಲ’</strong></p>.<p>ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಹಂಚಿಕೆಯಾದವರು120 ದಿನದೊಳಗೆ ಹಣ ಕಟ್ಟಿದರೆ ಬಡ್ಡಿ ವಿಧಿಸುವುದಿಲ್ಲ ಎಂದು ಬಿಡಿಎ ಭರವಸೆ ನೀಡಿತ್ತು. ಆದರೆ, ಉಪಕಾರ್ಯದರ್ಶಿ ಕಚೇರಿ ಸಿಬ್ಬಂದಿ, ‘90 ದಿನಗಳ ಬಳಿಕ ಶುಲ್ಕ ಕಟ್ಟಿದ್ದರೆ ಬಡ್ಡಿ ಕಟ್ಟಬೇಕಾಗುತ್ತದೆ’ ಎಂದು ನೋಟಿಸ್ ಜಾರಿಗೊಳಿಸುತ್ತಿದ್ದಾರೆ.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಬಿಡಿಎ ವತಿಯಿಂದಲೇ ಈ ಬಗ್ಗೆ ಪ್ರಕಟಣೆ ನೀಡಲಾಗಿತ್ತು. ಹಾಗಾಗಿ 120 ದಿನಗಳ ಒಳಗೆ ಶುಲ್ಕ ಪಾವತಿಸಿದವರು ಬಡ್ಡಿ ತೆರಬೇಕಾಗಿಲ್ಲ. ಈ ಬಗ್ಗೆ ಸರ್ಕಾರದ ಆದೇಶ ಆಗದ ಕಾರಣ ಗೊಂದಲ ಸೃಷ್ಟಿಯಾಗಿದೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಗೊಂದಲ ಬಗೆಹರಿಸುತ್ತೇವೆ’ ಎಂದರು.</p>.<p><strong>ನಿವೇಶನದಾರರ ಬೇಡಿಕೆಗಳು</strong></p>.<p>* ಪ್ರತಿ ಬ್ಲಾಕ್ನಲ್ಲೂ ವಿಶಾಲವಾದ ಉದ್ಯಾನ ನಿರ್ಮಿಸಿ</p>.<p>* ಪಾದಚಾರಿ ಮಾರ್ಗಗಳಿಗೆ ಸಾಕಷ್ಟು ಜಾಗ ಕಾಯ್ದಿರಿಸಿ</p>.<p>* ಹೊಸ ಮುಖ್ಯರಸ್ತೆಯನ್ನು ಸಿಗ್ನಲ್ರಹಿತ ಕಾರಿಡಾರ್ ಆಗಿ ವಿನ್ಯಾಸಗೊಳಿಸಿ</p>.<p>* ಮುಖ್ಯರಸ್ತೆಯಲ್ಲಿ ಬಸ್ ಬೇಗಳನ್ನು ನಿರ್ಮಿಸಿ</p>.<p>* ಬಿಬಿಎಂಪಿ, ಅಂಚೆ ಮತ್ತಿತರ ಸರ್ಕಾರಿ ಕಚೇರಿಗಳಿಗೆ ನಿವೇಶನಗಳನ್ನು ಕಾಯ್ದಿರಿಸಿ</p>.<p>* ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ, ಶಾಲೆಗಳಿಗೆ ಜಾಗ ಕಾಯ್ದಿರಿಸಿ</p>.<p>* ಸಿಸಿಟಿವಿ ಕ್ಯಾಮೆರಾ ಅಳವಡಿಸಿ</p>.<p>* ಸೌರಶಕ್ತಿ ಸದ್ಬಳಕೆಗೆ ಯೋಜನೆ ರೂಪಿಸಿ</p>.<p>* ವಾಹನಗಳ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ</p>.<p><strong>ಅಂಕಿ ಅಂಶ</strong></p>.<p><strong>10.75 ಕಿ.ಮಿ –</strong>ಕೆಂಪೇಗೌಡ ಬಡಾವಣೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ಮುಖ್ಯರಸ್ತೆಯ ಉದ್ದ</p>.<p><strong>4.7 ಕಿ.ಮೀ –</strong>ಮುಖ್ಯರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದು</p>.<p><strong>10.75 ಕಿ.ಮಿ –</strong> ಕೆಂಪೇಗೌಡ ಬಡಾವಣೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ಮುಖ್ಯರಸ್ತೆಯ ಉದ್ದ</p>.<p><strong>4.7 ಕಿ.ಮೀ –</strong> ಮುಖ್ಯರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾದ ಎನ್.ಮಂಜುಳಾ ಬುಧವಾರ ಪರಿಶೀಲಿಸಿದರು.</p>.<p>ಬಡಾವಣೆಗೆ ಭೂಮಿ ಬಿಟ್ಟುಕೊಟ್ಟಿರುವ ರೈತರ ಮುಖಂಡರು ಹಾಗೂ ನಿವೇಶನದಾರರು ಈ ಸಂದರ್ಭದಲ್ಲಿ ಆಯುಕ್ತರಿಗೆ ಅಹವಾಲು ಸಲ್ಲಿಸಿದರು.</p>.<p>ಅಭಿವೃದ್ಧಿಪಡಿಸಿದ ನಿವೇಶನಗಳನ್ನು ರೈತರಿಗೆ ಬಿಟ್ಟುಕೊಡಲು ಮೀನಮೇಷ ಎಣಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕುಎಂದು ರೈತರು ಒತ್ತಾಯಿಸಿದರು.</p>.<p>‘ನಿವೇಶನ ನೀಡುವಾಗಲೂ ತಾರತಮ್ಯ ನಡೆಸಲಾಗುತ್ತಿದೆ. ಕೆಲವರಿಗೆ ಉತ್ತಮ ಜಾಗದಲ್ಲಿರುವ ನಿವೇಶನವನ್ನು ನೀಡಲಾಗುತ್ತಿದೆ’ ಎಂದು ರೈತರು ದೂರಿದರು.</p>.<p>ನಿವೇಶನ ಹಂಚಿಕೆ ಆಗಬೇಕಾದ ರೈತರ ಪಟ್ಟಿ ತಯಾರಿಸಿ ಸುಮಾರು 25 ಮಂದಿಗೆ ಒಟ್ಟಿಗೆ ನಿವೇಶನ ಹಂಚಿಕೆ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.</p>.<p>‘ಬಡಾವಣೆಯಲ್ಲಿ ಮೂಲಸೌಕರ್ಯ ಕಾಮಗಾರಿ ಚುರುಕುಗೊಳಿಸಬೇಕು ಹಾಗೂ ಅವುಗಳ ಗುಣಮಟ್ಟದಲ್ಲಿ ಲೋಪ ಆಗದಂತೆ ಎಚ್ಚರವಹಿಸಬೇಕು’ ಎಂದು ಈ ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆಯ ಪ್ರತಿನಿಧಿಗಳು ಒತ್ತಾಯಿಸಿದರು.</p>.<p>‘ಮುಖ್ಯರಸ್ತೆಗೆ ಕೆಲವೆಡೆ ರೈತರು ಇನ್ನಷ್ಟೇ ಜಮೀನು ಬಿಟ್ಟುಕೊಡಬೇಕಿದೆ. ಹಾಗಾಗಿ ಕಾಮಗಾರಿ ವಿಳಂಬವಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಿದ್ದೇವೆ’ ಎಂದು ಆಯುಕ್ತರು ಭರವಸೆ ನೀಡಿದರು.</p>.<p><strong>‘120 ದಿನದಲ್ಲಿ ದುಡ್ಡಿ ಕಟ್ಟಿದ್ದರೆ ಬಡ್ಡಿ ಇಲ್ಲ’</strong></p>.<p>ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಹಂಚಿಕೆಯಾದವರು120 ದಿನದೊಳಗೆ ಹಣ ಕಟ್ಟಿದರೆ ಬಡ್ಡಿ ವಿಧಿಸುವುದಿಲ್ಲ ಎಂದು ಬಿಡಿಎ ಭರವಸೆ ನೀಡಿತ್ತು. ಆದರೆ, ಉಪಕಾರ್ಯದರ್ಶಿ ಕಚೇರಿ ಸಿಬ್ಬಂದಿ, ‘90 ದಿನಗಳ ಬಳಿಕ ಶುಲ್ಕ ಕಟ್ಟಿದ್ದರೆ ಬಡ್ಡಿ ಕಟ್ಟಬೇಕಾಗುತ್ತದೆ’ ಎಂದು ನೋಟಿಸ್ ಜಾರಿಗೊಳಿಸುತ್ತಿದ್ದಾರೆ.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಬಿಡಿಎ ವತಿಯಿಂದಲೇ ಈ ಬಗ್ಗೆ ಪ್ರಕಟಣೆ ನೀಡಲಾಗಿತ್ತು. ಹಾಗಾಗಿ 120 ದಿನಗಳ ಒಳಗೆ ಶುಲ್ಕ ಪಾವತಿಸಿದವರು ಬಡ್ಡಿ ತೆರಬೇಕಾಗಿಲ್ಲ. ಈ ಬಗ್ಗೆ ಸರ್ಕಾರದ ಆದೇಶ ಆಗದ ಕಾರಣ ಗೊಂದಲ ಸೃಷ್ಟಿಯಾಗಿದೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಗೊಂದಲ ಬಗೆಹರಿಸುತ್ತೇವೆ’ ಎಂದರು.</p>.<p><strong>ನಿವೇಶನದಾರರ ಬೇಡಿಕೆಗಳು</strong></p>.<p>* ಪ್ರತಿ ಬ್ಲಾಕ್ನಲ್ಲೂ ವಿಶಾಲವಾದ ಉದ್ಯಾನ ನಿರ್ಮಿಸಿ</p>.<p>* ಪಾದಚಾರಿ ಮಾರ್ಗಗಳಿಗೆ ಸಾಕಷ್ಟು ಜಾಗ ಕಾಯ್ದಿರಿಸಿ</p>.<p>* ಹೊಸ ಮುಖ್ಯರಸ್ತೆಯನ್ನು ಸಿಗ್ನಲ್ರಹಿತ ಕಾರಿಡಾರ್ ಆಗಿ ವಿನ್ಯಾಸಗೊಳಿಸಿ</p>.<p>* ಮುಖ್ಯರಸ್ತೆಯಲ್ಲಿ ಬಸ್ ಬೇಗಳನ್ನು ನಿರ್ಮಿಸಿ</p>.<p>* ಬಿಬಿಎಂಪಿ, ಅಂಚೆ ಮತ್ತಿತರ ಸರ್ಕಾರಿ ಕಚೇರಿಗಳಿಗೆ ನಿವೇಶನಗಳನ್ನು ಕಾಯ್ದಿರಿಸಿ</p>.<p>* ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ, ಶಾಲೆಗಳಿಗೆ ಜಾಗ ಕಾಯ್ದಿರಿಸಿ</p>.<p>* ಸಿಸಿಟಿವಿ ಕ್ಯಾಮೆರಾ ಅಳವಡಿಸಿ</p>.<p>* ಸೌರಶಕ್ತಿ ಸದ್ಬಳಕೆಗೆ ಯೋಜನೆ ರೂಪಿಸಿ</p>.<p>* ವಾಹನಗಳ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ</p>.<p><strong>ಅಂಕಿ ಅಂಶ</strong></p>.<p><strong>10.75 ಕಿ.ಮಿ –</strong>ಕೆಂಪೇಗೌಡ ಬಡಾವಣೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ಮುಖ್ಯರಸ್ತೆಯ ಉದ್ದ</p>.<p><strong>4.7 ಕಿ.ಮೀ –</strong>ಮುಖ್ಯರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದು</p>.<p><strong>10.75 ಕಿ.ಮಿ –</strong> ಕೆಂಪೇಗೌಡ ಬಡಾವಣೆಯಲ್ಲಿ ಹೊಸತಾಗಿ ನಿರ್ಮಾಣವಾಗುತ್ತಿರುವ ಮುಖ್ಯರಸ್ತೆಯ ಉದ್ದ</p>.<p><strong>4.7 ಕಿ.ಮೀ –</strong> ಮುಖ್ಯರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>