<p><strong>ಬಸ್ ತಂಗುದಾಣ ಸರಿಪಡಿಸಿ</strong></p>.<p>ಜ್ಞಾನಭಾರತಿ ವಾರ್ಡ್ನ ಕೆಂಗುಂಟೆ ವೃತ್ತದಿಂದ ನಾಗರಬಾವಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಬಸ್ ತಂಗುದಾಣದಲ್ಲಿ ಗುಂಡಿಗಳು ಬಿದ್ದಿವೆ. ಪ್ರಯಾಣಿಕರ ಆಶ್ರಯಕ್ಕಾಗಿ ಇರುವ ತಂಗುದಾಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ.ಕುಳಿತುಕೊಳ್ಳುವ ಜಾಗದಲ್ಲಿ ಗುಂಡಿ ಬಿದ್ದು, ಗಿಡಗಂಟಿಗಳು ಬೆಳೆದಿವೆ. ಈ ದುಸ್ಥಿತಿಯಿಂದಾಗಿ ಪ್ರಯಾಣಿಕರು ಇಲ್ಲಿ ನಿಲ್ಲುವುದೇ ಇಲ್ಲ. ತಂಗುದಾಣದ ಚಾವಣಿಯೂ ಸರಿಯಾಗಿಲ್ಲ. ದಯವಿಟ್ಟು ಈ ತಂಗುದಾಣವನ್ನು ದುರಸ್ತಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ.</p>.<p>- ತುಕಾರಾಂ, ಮಲ್ಲತ್ತಹಳ್ಳಿ</p>.<p>---</p>.<p class="Briefhead"><strong>ಕೆರೆಯಂತಾದ ನಿವೇಶನ</strong></p>.<p>ಸರ್ಜಾಪುರ ರಸ್ತೆಯ ದೊಡ್ಡಕನ್ನಳ್ಳಿಯ ಅಣ್ಣಯ್ಯರೆಡ್ಡಿ ಬಡಾವಣೆಯಲ್ಲಿರುವ ಖಾಲಿ ಮನೆಯೊಂದು ಪಾಳು ಬಿದ್ದಿದೆ. ಇದರ ಮಾಲೀಕರು ವಿದೇಶದಲ್ಲಿ ನೆಲೆಸಿದ್ದಾರೆ. ಈ ಮನೆಯಲ್ಲಿ ಮಳೆ ನೀರು ಸಂಗ್ರಹಗೊಂಡು, ಇಲ್ಲಿನ ಕೊಳಚೆ ನೀರು ಪಕ್ಕದ ನಿವೇಶನಕ್ಕೂ ಹರಿಯುತ್ತಿದೆ. ಈ ಸಮಸ್ಯೆ ಕುರಿತು ಪಾಲಿಕೆಯವರಿಗೂ ದೂರು ನೀಡಲಾಗಿದ್ದು, ಯಾವುದೇ ಪ್ರಯೋಜನ ಆಗಲಿಲ್ಲ.</p>.<p>ಮಳೆ ಬಂದಾಗ ಇಲ್ಲಿನ ನಿವಾಸಿಗಳ ಗೋಳನ್ನು ಕೇಳುವವರು ಯಾರೂ ಇಲ್ಲ. ಕೊಳಚೆ ದುರ್ವಾಸನೆಯಿಂದ ನಿವಾಸಿಗಳು ಮೂಗುಮುಚ್ಚಿ ನಡೆಯಬೇಕಾಗಿದೆ. ಪಕ್ಕದಲ್ಲೇ ಶಾಲೆಯಿದ್ದು, ಇದರಿಂದ ವಿದ್ಯಾರ್ಥಿಗಳಿಗೂ ಸಮಸ್ಯೆ ಆಗುತ್ತಿದೆ. ಪಾಲಿಕೆಯವರು ಈ ಸ್ಥಳವನ್ನು ಕೊಳಚೆಮುಕ್ತಗೊಳಿಸಲು ಕ್ರಮ ಕೈಗೊಂಡರೆ ಸ್ಥಳೀಯರಿಗೆ ಅನುಕೂಲವಾಗಲಿದೆ.</p>.<p>- ರಾಘವೇಂದ್ರ, ದೊಡ್ಡಕನ್ನಳ್ಳಿ</p>.<p>–––</p>.<p class="Briefhead"><strong>ಬಸ್ ಸ್ಥಗಿತದಿಂದ ಸಮಸ್ಯೆ</strong></p>.<p>ಕೆ.ಆರ್.ಮಾರುಕಟ್ಟೆಯಿಂದ ಕಾಕೋಳು ಮಾರ್ಗದಲ್ಲಿ ಸಂಚರಿಸುತ್ತಿದ್ದ 251ಎ ಬಿಎಂಟಿಸಿ ಬಸ್ ಅನ್ನು ಸ್ಥಗಿತಗೊಳಿಸಲಾಗಿದೆ. ಪೀಣ್ಯ ದಾಸರಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏಕೈಕ ಬಸ್ ಇದಾಗಿತ್ತು. ಕಾರ್ಖಾನೆಗಳಿಗೆ ಹೋಗುತ್ತಿರುವ ಕೆಲಸಗಾರರಿಗೆ ಈ ಬಸ್ ಸಂಚಾರ ಸ್ಥಗಿತದಿಂದ ಭಾರಿ ಸಮಸ್ಯೆ ಎದುರಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕು.</p>.<p>- ರವಿಕುಮಾರ್, ಚಿಕ್ಕಬಾಣಾವರ</p>.<p>–</p>.<p class="Briefhead"><strong>ಚರಂಡಿ ಕಾಮಗಾರಿ ಪೂರ್ಣಗೊಳಿಸಿ</strong></p>.<p>ಮಹಾಲಕ್ಷ್ಮೀ ಬಡಾವಣೆ ಸಮೀಪದ ಕಮಲಾನಗರ ಒಂದನೇ ಮುಖ್ಯ ರಸ್ತೆಯಲ್ಲಿ ಚರಂಡಿ ಕಾಮಗಾರಿ ಆರಂಭಿಸಿ ಹಲವು ದಿನಗಳು ಕಳೆದಿದ್ದು, ಈವರೆಗೆ ಮುಗಿದಿಲ್ಲ. ಕಿರಿದಾದ ಈ ರಸ್ತೆಯಲ್ಲಿ ಬಸ್ ನಿಲ್ದಾಣ, ಶಾಲೆ ಹಾಗೂ ತರಕಾರಿ ಮಾರುಕಟ್ಟೆಗಳಿವೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಿ.</p>.<p>- ಮಂಜುಳಾ, ಬಸವೇಶ್ವರ ನಗರ ನಿವಾಸಿ</p>.<p>–––</p>.<p class="Briefhead"><strong>ಶೌಚಾಲಯದಲ್ಲಿ ಸುಲಿಗೆ</strong></p>.<p><strong>ವ್ಯಾ</strong>ಪಾರ ನಿಮಿತ್ತ ಕೆ.ಆರ್.ಮಾರುಕಟ್ಟೆಗೆ ಹೋಗಿದ್ದೆ. ಮೂತ್ರವಿಸರ್ಜನೆಗೆಂದು ಮಾರುಕಟ್ಟೆಯ ಒಳ ಆವರಣದಲ್ಲಿರುವ ಶೌಚಾಲಯಕ್ಕೆ ಹೋದಾಗ ಅಲ್ಲಿನ ವಾತಾವರಣ ಕಂಡು ವಾಕರಿಕೆ ಬಂತು. ಮೂತ್ರ ವಿಸರ್ಜನೆ ಉಚಿತವಿದ್ದರೂ ಅಲ್ಲಿದ್ದ ವ್ಯಕ್ತಿ ₹5 ನೀಡಬೇಕು ಎಂದು ಗದರಿಸಿದ. ಅದಕ್ಕೆ ವಿರೋಧಿಸಿದಾಗ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ.</p>.<p>ಶೌಚಾಲಯದಲ್ಲಿ ಸ್ವಚ್ಛತೆ ಎನ್ನುವುದೇ ಇಲ್ಲ. ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಶೌಚಾಲಯವನ್ನು ಅನಧಿಕೃತವಾಗಿ ನಡೆಸುತ್ತಿರುವುದಾಗಿ ತಿಳಿಯಿತು. ಇಲ್ಲಿಗೆ ಬರುವ ಮಹಿಳೆಯರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯದ ಸ್ಥಿತಿ ಸರಿಪಡಿಸಿ, ಇಲ್ಲಿನ ಸುಲಿಗೆಗೆ ಕಡಿವಾಣ ಹಾಕಬೇಕು.</p>.<p>- ನರಸಿಂಹ ಮೂರ್ತಿ, ಹನುಮಂತನಗರ</p>.<p>–––</p>.<p class="Briefhead"><strong>ರಸ್ತೆಗೆ ಡಾಂಬರು ಹಾಕಿಸಿ</strong></p>.<p>ಜೆ.ಪಿ.ನಗರದ ಜಂಬೂಸವಾರಿ ದಿಣ್ಣೆಯಿಂದ ಅಂಜನಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒಂದೂವರೆ ವರ್ಷದಿಂದ ಹಾಳಾದ ಸ್ಥಿತಿಯಲ್ಲೇ ಇದೆ. ರಸ್ತೆಗೆ ಮೊದಲು ಹಾಕಲಾಗಿದ್ದ ಡಾಂಬರು ಕಿತ್ತುಹೋಗಿದೆ. ಇದರಿಂದ ರಸ್ತೆಯುದ್ದಕ್ಕೂ ದೊಡ್ಡ ಗುಂಡಿಗಳು ಬಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.</p>.<p>ಒಮ್ಮೆ ಇದೇ ರಸ್ತೆಯಲ್ಲಿ ವಾಹನದಿಂದ ಬಿದ್ದು ಆಸ್ಪತ್ರೆಯಲ್ಲಿ ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆಯಬೇಕಾಯಿತು. ಮಳೆ ಬಂದರಂತೂ ಇದು ರಸ್ತೆಯ ಸ್ವರೂಪದಲ್ಲಿ ಇರುವುದಿಲ್ಲ. ಇದೇ ರಸ್ತೆಯಲ್ಲಿ ಶಾಲೆಯಿದ್ದು, ನೂರಾರು ವಿದ್ಯಾರ್ಥಿಗಳು ಪ್ರತಿದಿನ ಸಂಚರಿಸುತ್ತಾರೆ. ಮಕ್ಕಳ ಹಿತದೃಷ್ಟಿಯಿಂದಾದರೂ ಈ ರಸ್ತೆಗೆ ಡಾಂಬರು ಭಾಗ್ಯ ಕಲ್ಪಿಸಿ.</p>.<p>- ನಾಗರಾಜ ಬಾಬು, ಜೆ.ಪಿ.ನಗರ ನಿವಾಸಿ</p>.<p>–––</p>.<p class="Briefhead"><strong>ಹದಗೆಟ್ಟ ರಸ್ತೆಯನ್ನು ಸರಿಪಡಿಸಿ</strong></p>.<p>ಅಂದ್ರಹಳ್ಳಿಯ ವಿದ್ಯಮಾನ ನಗರದ 5ನೇ ಅಡ್ಡರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆ ಬಂದಾಗ ಕೆಸರುಮಯವಾಗುವ ಈ ರಸ್ತೆಯಲ್ಲಿ ವಾಹನ ಸವಾರರ ಪರದಾಟ ಹೇಳತೀರದು. ಒಮ್ಮೆ ಮಳೆ ಬಂದರೆ, ರಸ್ತೆ ಸಹಜ ಸ್ಥಿತಿಗೆ ಬರಲು ವಾರಗಟ್ಟಲೆ ಸಮಯ ಬೇಕು. ಈ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ಸಂಚರಿಸಲು ಹಿಂದೇಟು ಹಾಕುತ್ತಾರೆ. ರಸ್ತೆಗೆ ಡಾಂಬರು ಹಾಕಿದರೆ, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ.</p>.<p>- ಸುಧಾ ಕಾಂತರಾಜು, ಅಂದ್ರಹಳ್ಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸ್ ತಂಗುದಾಣ ಸರಿಪಡಿಸಿ</strong></p>.<p>ಜ್ಞಾನಭಾರತಿ ವಾರ್ಡ್ನ ಕೆಂಗುಂಟೆ ವೃತ್ತದಿಂದ ನಾಗರಬಾವಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಬಸ್ ತಂಗುದಾಣದಲ್ಲಿ ಗುಂಡಿಗಳು ಬಿದ್ದಿವೆ. ಪ್ರಯಾಣಿಕರ ಆಶ್ರಯಕ್ಕಾಗಿ ಇರುವ ತಂಗುದಾಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ.ಕುಳಿತುಕೊಳ್ಳುವ ಜಾಗದಲ್ಲಿ ಗುಂಡಿ ಬಿದ್ದು, ಗಿಡಗಂಟಿಗಳು ಬೆಳೆದಿವೆ. ಈ ದುಸ್ಥಿತಿಯಿಂದಾಗಿ ಪ್ರಯಾಣಿಕರು ಇಲ್ಲಿ ನಿಲ್ಲುವುದೇ ಇಲ್ಲ. ತಂಗುದಾಣದ ಚಾವಣಿಯೂ ಸರಿಯಾಗಿಲ್ಲ. ದಯವಿಟ್ಟು ಈ ತಂಗುದಾಣವನ್ನು ದುರಸ್ತಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಿ.</p>.<p>- ತುಕಾರಾಂ, ಮಲ್ಲತ್ತಹಳ್ಳಿ</p>.<p>---</p>.<p class="Briefhead"><strong>ಕೆರೆಯಂತಾದ ನಿವೇಶನ</strong></p>.<p>ಸರ್ಜಾಪುರ ರಸ್ತೆಯ ದೊಡ್ಡಕನ್ನಳ್ಳಿಯ ಅಣ್ಣಯ್ಯರೆಡ್ಡಿ ಬಡಾವಣೆಯಲ್ಲಿರುವ ಖಾಲಿ ಮನೆಯೊಂದು ಪಾಳು ಬಿದ್ದಿದೆ. ಇದರ ಮಾಲೀಕರು ವಿದೇಶದಲ್ಲಿ ನೆಲೆಸಿದ್ದಾರೆ. ಈ ಮನೆಯಲ್ಲಿ ಮಳೆ ನೀರು ಸಂಗ್ರಹಗೊಂಡು, ಇಲ್ಲಿನ ಕೊಳಚೆ ನೀರು ಪಕ್ಕದ ನಿವೇಶನಕ್ಕೂ ಹರಿಯುತ್ತಿದೆ. ಈ ಸಮಸ್ಯೆ ಕುರಿತು ಪಾಲಿಕೆಯವರಿಗೂ ದೂರು ನೀಡಲಾಗಿದ್ದು, ಯಾವುದೇ ಪ್ರಯೋಜನ ಆಗಲಿಲ್ಲ.</p>.<p>ಮಳೆ ಬಂದಾಗ ಇಲ್ಲಿನ ನಿವಾಸಿಗಳ ಗೋಳನ್ನು ಕೇಳುವವರು ಯಾರೂ ಇಲ್ಲ. ಕೊಳಚೆ ದುರ್ವಾಸನೆಯಿಂದ ನಿವಾಸಿಗಳು ಮೂಗುಮುಚ್ಚಿ ನಡೆಯಬೇಕಾಗಿದೆ. ಪಕ್ಕದಲ್ಲೇ ಶಾಲೆಯಿದ್ದು, ಇದರಿಂದ ವಿದ್ಯಾರ್ಥಿಗಳಿಗೂ ಸಮಸ್ಯೆ ಆಗುತ್ತಿದೆ. ಪಾಲಿಕೆಯವರು ಈ ಸ್ಥಳವನ್ನು ಕೊಳಚೆಮುಕ್ತಗೊಳಿಸಲು ಕ್ರಮ ಕೈಗೊಂಡರೆ ಸ್ಥಳೀಯರಿಗೆ ಅನುಕೂಲವಾಗಲಿದೆ.</p>.<p>- ರಾಘವೇಂದ್ರ, ದೊಡ್ಡಕನ್ನಳ್ಳಿ</p>.<p>–––</p>.<p class="Briefhead"><strong>ಬಸ್ ಸ್ಥಗಿತದಿಂದ ಸಮಸ್ಯೆ</strong></p>.<p>ಕೆ.ಆರ್.ಮಾರುಕಟ್ಟೆಯಿಂದ ಕಾಕೋಳು ಮಾರ್ಗದಲ್ಲಿ ಸಂಚರಿಸುತ್ತಿದ್ದ 251ಎ ಬಿಎಂಟಿಸಿ ಬಸ್ ಅನ್ನು ಸ್ಥಗಿತಗೊಳಿಸಲಾಗಿದೆ. ಪೀಣ್ಯ ದಾಸರಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏಕೈಕ ಬಸ್ ಇದಾಗಿತ್ತು. ಕಾರ್ಖಾನೆಗಳಿಗೆ ಹೋಗುತ್ತಿರುವ ಕೆಲಸಗಾರರಿಗೆ ಈ ಬಸ್ ಸಂಚಾರ ಸ್ಥಗಿತದಿಂದ ಭಾರಿ ಸಮಸ್ಯೆ ಎದುರಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕು.</p>.<p>- ರವಿಕುಮಾರ್, ಚಿಕ್ಕಬಾಣಾವರ</p>.<p>–</p>.<p class="Briefhead"><strong>ಚರಂಡಿ ಕಾಮಗಾರಿ ಪೂರ್ಣಗೊಳಿಸಿ</strong></p>.<p>ಮಹಾಲಕ್ಷ್ಮೀ ಬಡಾವಣೆ ಸಮೀಪದ ಕಮಲಾನಗರ ಒಂದನೇ ಮುಖ್ಯ ರಸ್ತೆಯಲ್ಲಿ ಚರಂಡಿ ಕಾಮಗಾರಿ ಆರಂಭಿಸಿ ಹಲವು ದಿನಗಳು ಕಳೆದಿದ್ದು, ಈವರೆಗೆ ಮುಗಿದಿಲ್ಲ. ಕಿರಿದಾದ ಈ ರಸ್ತೆಯಲ್ಲಿ ಬಸ್ ನಿಲ್ದಾಣ, ಶಾಲೆ ಹಾಗೂ ತರಕಾರಿ ಮಾರುಕಟ್ಟೆಗಳಿವೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಿ.</p>.<p>- ಮಂಜುಳಾ, ಬಸವೇಶ್ವರ ನಗರ ನಿವಾಸಿ</p>.<p>–––</p>.<p class="Briefhead"><strong>ಶೌಚಾಲಯದಲ್ಲಿ ಸುಲಿಗೆ</strong></p>.<p><strong>ವ್ಯಾ</strong>ಪಾರ ನಿಮಿತ್ತ ಕೆ.ಆರ್.ಮಾರುಕಟ್ಟೆಗೆ ಹೋಗಿದ್ದೆ. ಮೂತ್ರವಿಸರ್ಜನೆಗೆಂದು ಮಾರುಕಟ್ಟೆಯ ಒಳ ಆವರಣದಲ್ಲಿರುವ ಶೌಚಾಲಯಕ್ಕೆ ಹೋದಾಗ ಅಲ್ಲಿನ ವಾತಾವರಣ ಕಂಡು ವಾಕರಿಕೆ ಬಂತು. ಮೂತ್ರ ವಿಸರ್ಜನೆ ಉಚಿತವಿದ್ದರೂ ಅಲ್ಲಿದ್ದ ವ್ಯಕ್ತಿ ₹5 ನೀಡಬೇಕು ಎಂದು ಗದರಿಸಿದ. ಅದಕ್ಕೆ ವಿರೋಧಿಸಿದಾಗ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ.</p>.<p>ಶೌಚಾಲಯದಲ್ಲಿ ಸ್ವಚ್ಛತೆ ಎನ್ನುವುದೇ ಇಲ್ಲ. ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಶೌಚಾಲಯವನ್ನು ಅನಧಿಕೃತವಾಗಿ ನಡೆಸುತ್ತಿರುವುದಾಗಿ ತಿಳಿಯಿತು. ಇಲ್ಲಿಗೆ ಬರುವ ಮಹಿಳೆಯರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯದ ಸ್ಥಿತಿ ಸರಿಪಡಿಸಿ, ಇಲ್ಲಿನ ಸುಲಿಗೆಗೆ ಕಡಿವಾಣ ಹಾಕಬೇಕು.</p>.<p>- ನರಸಿಂಹ ಮೂರ್ತಿ, ಹನುಮಂತನಗರ</p>.<p>–––</p>.<p class="Briefhead"><strong>ರಸ್ತೆಗೆ ಡಾಂಬರು ಹಾಕಿಸಿ</strong></p>.<p>ಜೆ.ಪಿ.ನಗರದ ಜಂಬೂಸವಾರಿ ದಿಣ್ಣೆಯಿಂದ ಅಂಜನಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒಂದೂವರೆ ವರ್ಷದಿಂದ ಹಾಳಾದ ಸ್ಥಿತಿಯಲ್ಲೇ ಇದೆ. ರಸ್ತೆಗೆ ಮೊದಲು ಹಾಕಲಾಗಿದ್ದ ಡಾಂಬರು ಕಿತ್ತುಹೋಗಿದೆ. ಇದರಿಂದ ರಸ್ತೆಯುದ್ದಕ್ಕೂ ದೊಡ್ಡ ಗುಂಡಿಗಳು ಬಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.</p>.<p>ಒಮ್ಮೆ ಇದೇ ರಸ್ತೆಯಲ್ಲಿ ವಾಹನದಿಂದ ಬಿದ್ದು ಆಸ್ಪತ್ರೆಯಲ್ಲಿ ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆಯಬೇಕಾಯಿತು. ಮಳೆ ಬಂದರಂತೂ ಇದು ರಸ್ತೆಯ ಸ್ವರೂಪದಲ್ಲಿ ಇರುವುದಿಲ್ಲ. ಇದೇ ರಸ್ತೆಯಲ್ಲಿ ಶಾಲೆಯಿದ್ದು, ನೂರಾರು ವಿದ್ಯಾರ್ಥಿಗಳು ಪ್ರತಿದಿನ ಸಂಚರಿಸುತ್ತಾರೆ. ಮಕ್ಕಳ ಹಿತದೃಷ್ಟಿಯಿಂದಾದರೂ ಈ ರಸ್ತೆಗೆ ಡಾಂಬರು ಭಾಗ್ಯ ಕಲ್ಪಿಸಿ.</p>.<p>- ನಾಗರಾಜ ಬಾಬು, ಜೆ.ಪಿ.ನಗರ ನಿವಾಸಿ</p>.<p>–––</p>.<p class="Briefhead"><strong>ಹದಗೆಟ್ಟ ರಸ್ತೆಯನ್ನು ಸರಿಪಡಿಸಿ</strong></p>.<p>ಅಂದ್ರಹಳ್ಳಿಯ ವಿದ್ಯಮಾನ ನಗರದ 5ನೇ ಅಡ್ಡರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆ ಬಂದಾಗ ಕೆಸರುಮಯವಾಗುವ ಈ ರಸ್ತೆಯಲ್ಲಿ ವಾಹನ ಸವಾರರ ಪರದಾಟ ಹೇಳತೀರದು. ಒಮ್ಮೆ ಮಳೆ ಬಂದರೆ, ರಸ್ತೆ ಸಹಜ ಸ್ಥಿತಿಗೆ ಬರಲು ವಾರಗಟ್ಟಲೆ ಸಮಯ ಬೇಕು. ಈ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ಸಂಚರಿಸಲು ಹಿಂದೇಟು ಹಾಕುತ್ತಾರೆ. ರಸ್ತೆಗೆ ಡಾಂಬರು ಹಾಕಿದರೆ, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ.</p>.<p>- ಸುಧಾ ಕಾಂತರಾಜು, ಅಂದ್ರಹಳ್ಳಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>