<p><strong>ಬೆಂಗಳೂರು</strong>: ಆರು ವರ್ಷದ ಮಗು ಎದುರು ಮನೆಯ ನೀರಿನ ಬಕೆಟ್ನಲ್ಲಿ ಕಾಲಿಟ್ಟ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿ, ಮಗುವಿನ ಪೋಷಕರಿಗೆ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್ನಿಂದ ಥಳಿಸಿರುವ ಘಟನೆ ಬ್ಯಾಡರಹಳ್ಳಿ ಬಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ.</p>.<p>ಗಂಗಾಧರ್ ಮತ್ತು ಸೌಮ್ಯಾ ದಂಪತಿ ನೀಡಿದ ದೂರು ಆಧರಿಸಿ, ರಾಜೇಶ್ವರಿ ಹಾಗೂ ಅವರ ಮಗನ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಗಂಗಾಧರ್ ದಂಪತಿಯ ಮನೆಯ ಮುಂಭಾಗದಲ್ಲೇ ರಾಜೇಶ್ವರಿ ಅವರ ಮನೆಯಿದೆ. ದಂಪತಿಯ ಆರು ವರ್ಷದ ಮಗು, ಆಗಸ್ಟ್ 14ರಂದು ಆಟವಾಡುತ್ತಾ ರಾಜೇಶ್ವರಿ ಅವರ ಮನೆಯ ಬಳಿ ಹೋಗಿ ನೀರಿನ ಬಕೆಟ್ನ ಒಳಗೆ ಕಾಲು ಹಾಕಿತ್ತು. ಈ ವಿಚಾರಕ್ಕೆ ರಾಜೇಶ್ವರಿ ಮತ್ತು ಸೌಮ್ಯಾ ನಡುವೆ ಗಲಾಟೆಯಾಗಿತ್ತು. ಬಳಿಕ ಅದೇ ದಿನ ರಾತ್ರಿ ರಾಜೇಶ್ವರಿ ಅವರ ಮಗ ತನ್ನ ಸಹಚರರೊಂದಿಗೆ ಸೌಮ್ಯಾ ಅವರ ಮನೆ ಬಳಿ ಹೋಗಿ, ಕಿಟಕಿಗಳ ಗಾಜು ಒಡೆದು ದಾಂದಲೆ ನಡೆಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಬಳಿಕ ಗಂಗಾಧರ್ ಅವರನ್ನು ರಸ್ತೆಗೆ ಎಳೆದುಕೊಂಡು ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬ್ಯಾಟ್ ಮತ್ತು ವಿಕೆಟ್ಗಳಿಂದ ಮನಬಂದಂತೆ ಹೊಡೆದಿದ್ದಾರೆ. ಈ ವೇಳೆ ಪತಿಯ ರಕ್ಷಣೆಗೆ ಧಾವಿಸಿದ ಸೌಮ್ಯಾ ಅವರನ್ನು ಆರೋಪಿಗಳು ಸಾರ್ವಜನಿಕವಾಗಿ ಎಳೆದಾಡಿದ್ದಾರೆ. ನಂತರ ಕಾಲಿನಿಂದ ಒದ್ದು, ಬ್ಯಾಟ್ ಮತ್ತು ವಿಕೆಟ್ನಿಂದ ಥಳಿಸಿ, ಜೀವ ಬೆದರಿಕೆ ಹಾಕಿದ್ದಾರೆ. ದೌರ್ಜನ್ಯದ ದೃಶ್ಯಾವಳಿಯು ಘಟನಾ ಸ್ಥಳದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.</p>.<p>ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ದಂಪತಿಯ ದೂರು ಆಧರಿಸಿ, ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆರು ವರ್ಷದ ಮಗು ಎದುರು ಮನೆಯ ನೀರಿನ ಬಕೆಟ್ನಲ್ಲಿ ಕಾಲಿಟ್ಟ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿ, ಮಗುವಿನ ಪೋಷಕರಿಗೆ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್ನಿಂದ ಥಳಿಸಿರುವ ಘಟನೆ ಬ್ಯಾಡರಹಳ್ಳಿ ಬಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ.</p>.<p>ಗಂಗಾಧರ್ ಮತ್ತು ಸೌಮ್ಯಾ ದಂಪತಿ ನೀಡಿದ ದೂರು ಆಧರಿಸಿ, ರಾಜೇಶ್ವರಿ ಹಾಗೂ ಅವರ ಮಗನ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಗಂಗಾಧರ್ ದಂಪತಿಯ ಮನೆಯ ಮುಂಭಾಗದಲ್ಲೇ ರಾಜೇಶ್ವರಿ ಅವರ ಮನೆಯಿದೆ. ದಂಪತಿಯ ಆರು ವರ್ಷದ ಮಗು, ಆಗಸ್ಟ್ 14ರಂದು ಆಟವಾಡುತ್ತಾ ರಾಜೇಶ್ವರಿ ಅವರ ಮನೆಯ ಬಳಿ ಹೋಗಿ ನೀರಿನ ಬಕೆಟ್ನ ಒಳಗೆ ಕಾಲು ಹಾಕಿತ್ತು. ಈ ವಿಚಾರಕ್ಕೆ ರಾಜೇಶ್ವರಿ ಮತ್ತು ಸೌಮ್ಯಾ ನಡುವೆ ಗಲಾಟೆಯಾಗಿತ್ತು. ಬಳಿಕ ಅದೇ ದಿನ ರಾತ್ರಿ ರಾಜೇಶ್ವರಿ ಅವರ ಮಗ ತನ್ನ ಸಹಚರರೊಂದಿಗೆ ಸೌಮ್ಯಾ ಅವರ ಮನೆ ಬಳಿ ಹೋಗಿ, ಕಿಟಕಿಗಳ ಗಾಜು ಒಡೆದು ದಾಂದಲೆ ನಡೆಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಬಳಿಕ ಗಂಗಾಧರ್ ಅವರನ್ನು ರಸ್ತೆಗೆ ಎಳೆದುಕೊಂಡು ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬ್ಯಾಟ್ ಮತ್ತು ವಿಕೆಟ್ಗಳಿಂದ ಮನಬಂದಂತೆ ಹೊಡೆದಿದ್ದಾರೆ. ಈ ವೇಳೆ ಪತಿಯ ರಕ್ಷಣೆಗೆ ಧಾವಿಸಿದ ಸೌಮ್ಯಾ ಅವರನ್ನು ಆರೋಪಿಗಳು ಸಾರ್ವಜನಿಕವಾಗಿ ಎಳೆದಾಡಿದ್ದಾರೆ. ನಂತರ ಕಾಲಿನಿಂದ ಒದ್ದು, ಬ್ಯಾಟ್ ಮತ್ತು ವಿಕೆಟ್ನಿಂದ ಥಳಿಸಿ, ಜೀವ ಬೆದರಿಕೆ ಹಾಕಿದ್ದಾರೆ. ದೌರ್ಜನ್ಯದ ದೃಶ್ಯಾವಳಿಯು ಘಟನಾ ಸ್ಥಳದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.</p>.<p>ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ದಂಪತಿಯ ದೂರು ಆಧರಿಸಿ, ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>