ನಾಲ್ಕು ವರ್ಷಗಳ ಹಿಂದೆ ಹೀಗೆ ತ್ಯಾಜ್ಯಗಳಿಂದ ತುಂಬಿ ಹೋಗಿ, ಕೆರೆಗೆ ಮಳೆ ನೀರು ಹರಿಯುವ ನೀರುಗಾಲುವೆಗಳು ಮುಚ್ಚಿ ಹೋಗಿದ್ದವು. ಮಳೆ ಬಂದಾಗ ಕೆರೆ ಸೇರುತ್ತಿದ್ದ ಅಲ್ಪಸ್ವಲ್ಪ ಮಳೆ ನೀರು ಡಿಸೆಂಬರ್ ವೇಳೆಗೆ ಖಾಲಿಯಾಗುತ್ತಿತ್ತು. ಕೆರೆಯ ಪರಿಸ್ಥಿತಿ ಗಮನಿಸಿದ್ದ ಯುದ್ಧ ಭೂಮಿ ಹೋರಾಟ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹೇಮಂತ್ ರಾಜ್, 2019ರಲ್ಲಿ ಕೆರೆ ಸ್ವಚ್ಛತೆಗೆ ಮುಂದಾದರು. ಕಂದಾಯ ಇಲಾಖೆಯ ಅನುಮತಿಯೊಂದಿಗೆ, ಸ್ವಂತ ಹಣದಿಂದ ಜೆಸಿಬಿ, ಟ್ರ್ಯಾಕ್ಟರ್ಗಳನ್ನು ಬಳಸಿ. ಕೆರೆ ಸ್ವಚ್ಛಗೊಳಿಸಿದರು. ನೀರುಗಾಲುವೆಗಳ ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. 2020ರಲ್ಲಿ ಉತ್ತಮ ಮಳೆ ಬಂತು ಕೆರೆ ಭರ್ತಿಯಾಯಿತು. ಸ್ವಚ್ಛಗೊಂಡ ಕೆರೆಗೆ ಕಂದಾಯ ಇಲಾಖೆ ಕೆರೆಯ ಸುತ್ತ ತಂತಿ ಬೇಲಿ ನಿರ್ಮಿಸಿತ್ತು.