<p><strong>ಬೆಂಗಳೂರು:</strong> ಪರಪ್ಪನ ಅಗ್ರಹಾರದ ಜಿ.ಎಸ್. ಪಾಳ್ಯದ ರಾಜಕಾಲುವೆ ಬಳಿ ಮಂಗಳವಾರ ಸಿಕ್ಕಿದ ತಲೆಬುರುಡೆ ಹಾಗೂ ಮೂಳೆಗಳಿಂದ ಆತಂಕ ಸೃಷ್ಟಿಯಾಗಿತ್ತು. </p>.<p>ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಅಧ್ಯಯನಕ್ಕೆಂದು ಬಳಸಿದ್ದ ಬುರುಡೆ ಹಾಗೂ ಮೂಳೆಗಳವು ಎಂಬುದು ಅರಿವಾದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.</p>.<p>ಜಿ.ಎಸ್. ಪಾಳ್ಯದ ರಾಜಕಾಲುವೆ ಸಮೀಪ ಮಂಗಳವಾರ ಬೆಳಿಗ್ಗೆ ಮೂಳೆಗಳು ಹಾಗೂ ಬುರುಡೆ ಕಂಡ ಸ್ಥಳೀಯರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬುರುಡೆ ಹಾಗೂ ಮೂಳೆಗಳನ್ನು ಪರಿಶೀಲನೆ ನಡೆಸಿದರು.</p>.<p>ಸ್ಥಳಕ್ಕೆ ಪೊಲೀಸರು ಬಂದಿರುವುದನ್ನು ಗಮನಿಸಿದ ನಿವಾಸಿ ರಾಜಶೇಖರ್ ಅವರು ಬುರುಡೆ ರಹಸ್ಯ ಬಿಚ್ಚಿಟ್ಟರು.</p>.<p>ರಾಜಶೇಖರ್ ಅವರ ಪುತ್ರಿ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಪ್ರಾಯೋಗಿಕ ಅಧ್ಯಯನದ ಸಲುವಾಗಿ ಬುರುಡೆ ಹಾಗೂ ಮೂಳೆಗಳನ್ನು ಕಾಲೇಜಿನ ಪ್ರಯೋಗಾಲಯದಿಂದ ಮನೆಗೆ ತಂದಿದ್ದರು. ಅಧ್ಯಯನ ಮುಗಿದ ಬಳಿಕ ಮೂಳೆ ಹಾಗೂ ಬುರುಡೆಯನ್ನು ರಾಜಕಾಲುವೆ ಬಳಿ ಎಸೆಯಲಾಗಿತ್ತು. ಈ ವಿಚಾರ ತಿಳಿಯದೇ ಆತಂಕಕ್ಕೆ ಕಾರಣವಾಗಿತ್ತು.</p>.<p>‘ರಾಜಶೇಖರ್, ಅವರ ಪುತ್ರಿ ಹಾಗೂ ಕಾಲೇಜು ಆಡಳಿತ ಮಂಡಳಿಯವರಿಂದ ಮಾಹಿತಿ ಪಡೆಯಲಾಗಿದೆ. ಲಿಖಿತವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಧ್ಯಯನ ಸಲುವಾಗಿಯೇ ಅವುಗಳನ್ನು ಕಾನೂನಾತ್ಮಕವಾಗಿ ಬಳಸುತ್ತಿದ್ದರು ಎಂಬುದು ದೃಢಪಟ್ಟಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪರಪ್ಪನ ಅಗ್ರಹಾರದ ಜಿ.ಎಸ್. ಪಾಳ್ಯದ ರಾಜಕಾಲುವೆ ಬಳಿ ಮಂಗಳವಾರ ಸಿಕ್ಕಿದ ತಲೆಬುರುಡೆ ಹಾಗೂ ಮೂಳೆಗಳಿಂದ ಆತಂಕ ಸೃಷ್ಟಿಯಾಗಿತ್ತು. </p>.<p>ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಅಧ್ಯಯನಕ್ಕೆಂದು ಬಳಸಿದ್ದ ಬುರುಡೆ ಹಾಗೂ ಮೂಳೆಗಳವು ಎಂಬುದು ಅರಿವಾದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.</p>.<p>ಜಿ.ಎಸ್. ಪಾಳ್ಯದ ರಾಜಕಾಲುವೆ ಸಮೀಪ ಮಂಗಳವಾರ ಬೆಳಿಗ್ಗೆ ಮೂಳೆಗಳು ಹಾಗೂ ಬುರುಡೆ ಕಂಡ ಸ್ಥಳೀಯರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬುರುಡೆ ಹಾಗೂ ಮೂಳೆಗಳನ್ನು ಪರಿಶೀಲನೆ ನಡೆಸಿದರು.</p>.<p>ಸ್ಥಳಕ್ಕೆ ಪೊಲೀಸರು ಬಂದಿರುವುದನ್ನು ಗಮನಿಸಿದ ನಿವಾಸಿ ರಾಜಶೇಖರ್ ಅವರು ಬುರುಡೆ ರಹಸ್ಯ ಬಿಚ್ಚಿಟ್ಟರು.</p>.<p>ರಾಜಶೇಖರ್ ಅವರ ಪುತ್ರಿ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಪ್ರಾಯೋಗಿಕ ಅಧ್ಯಯನದ ಸಲುವಾಗಿ ಬುರುಡೆ ಹಾಗೂ ಮೂಳೆಗಳನ್ನು ಕಾಲೇಜಿನ ಪ್ರಯೋಗಾಲಯದಿಂದ ಮನೆಗೆ ತಂದಿದ್ದರು. ಅಧ್ಯಯನ ಮುಗಿದ ಬಳಿಕ ಮೂಳೆ ಹಾಗೂ ಬುರುಡೆಯನ್ನು ರಾಜಕಾಲುವೆ ಬಳಿ ಎಸೆಯಲಾಗಿತ್ತು. ಈ ವಿಚಾರ ತಿಳಿಯದೇ ಆತಂಕಕ್ಕೆ ಕಾರಣವಾಗಿತ್ತು.</p>.<p>‘ರಾಜಶೇಖರ್, ಅವರ ಪುತ್ರಿ ಹಾಗೂ ಕಾಲೇಜು ಆಡಳಿತ ಮಂಡಳಿಯವರಿಂದ ಮಾಹಿತಿ ಪಡೆಯಲಾಗಿದೆ. ಲಿಖಿತವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಧ್ಯಯನ ಸಲುವಾಗಿಯೇ ಅವುಗಳನ್ನು ಕಾನೂನಾತ್ಮಕವಾಗಿ ಬಳಸುತ್ತಿದ್ದರು ಎಂಬುದು ದೃಢಪಟ್ಟಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>