ನೇರವಾಗಿ ನೇಮಕಗೊಂಡ ಪ್ರಾಧ್ಯಾಪಕರು ಹಾಗೂ ವೃತ್ತಿ ಸುಧಾರಣಾ ಯೋಜನೆಯಡಿಯಲ್ಲಿ (ಸಿಎಎಸ್) ಬಡ್ತಿ ಪಡೆದ ಪ್ರಾಧ್ಯಾಪಕರ ಹಿರಿತನವನ್ನು ಗುರುತಿಸುವಲ್ಲಿ ಕೇಂದ್ರ, ರಾಜ್ಯಗಳ ಇತರ ನಿಯಮಗಳೇ ಅನ್ವಯವಾಗಬೇಕು. ಎಂಜಿನಿಯರಿಂಗ್ ಮತ್ತು ಇತರ ವಿಭಾಗಗಳ ಪ್ರೊಫೆಸರ್ಗಳ ಹಿರಿತನ ವಿಷಯ ಅಂತಿಮಗೊಳಿಸಲು ನ್ಯಾಯಾಂಗ ಸಮಿತಿ ರಚಿಸಬೇಕು ಎಂಬ ಮನವಿಯನ್ನು ಧರಣಿ ನಿರತರು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಅವರಿಗೆ ಸಲ್ಲಿಸಿದರು.ಪರಿಷತ್ನ ಅಧ್ಯಕ್ಷ ಡಾ.ಎಂ.ಮುನಿರಾಜಪ್ಪ, ಉಪಾಧ್ಯಕ್ಷ ಡಾ.ಬಿ.ಶಾಂತವೀರನಗೌಡ ನೇತೃತ್ವ ವಹಿಸಿದ್ದರು.