<p><strong>ಬೆಂಗಳೂರು:</strong> ಮಹಾನಗರದ ಸುತ್ತ ಆವರಿಸಿಕೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯರೇ ಪ್ರಮುಖವಾಗಿರುವ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಪೈಪೋಟಿಗೆ ಸಜ್ಜಾಗಿವೆ.</p>.<p>ಇದುವರೆಗೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಲಗ್ಗೆ ಹಾಕಲು ಹವಣಿಸುತ್ತಿದೆ. ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳ ‘ಧನ–ಘನ ವ್ಯಕ್ತಿತ್ವ’ದ ಆಧಾರದ ಮೇಲೆ ಮತದಾರರನ್ನು ಸೆಳೆಯಲು ಪ್ರಯತ್ನಗಳು ನಡೆಯುತ್ತಿವೆ.</p>.<p>ಸಂಘಟನೆಯ ಸೂತ್ರ ಹಿಡಿದುಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿ, ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿ ಬೇರೂರುವ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಾಯಕತ್ವದ ಕೊರತೆ ಎದುರಿಸುತ್ತಿದ್ದರೂ ಕಾಂಗ್ರೆಸ್ ತನ್ನ ಮೂಲ ಮತದಾರರನ್ನು ನಂಬಿಕೊಂಡು ಅಬ್ಬರದ ಪ್ರಚಾರ ನಡೆಸುತ್ತಿದೆ.</p>.<p>ಚುನಾವಣೆ ನಡೆಯದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರ ಮತಗಳು ಇಲ್ಲದೆಯೇ ಈ ಮತಕ್ಷೇತ್ರ ಕಿರಿದಾಗಿದೆ.</p>.<p>2015ರಲ್ಲಿ ಬಿಜೆಪಿಯ ದೊಡ್ಡ ಬಸವರಾಜು ವಿರುದ್ಧ ಜಯಗಳಿಸಿದ್ದ ಕಾಂಗ್ರೆಸ್ನ ಎಂ. ನಾರಾಯಣಸ್ವಾಮಿ ಈ ಬಾರಿ ಸ್ಪರ್ಧಿಸಲು ನಿರಾಕರಿಸಿದ್ದರಿಂದ ರಿಯಲ್ ಎಸ್ಟೇಟ್ ಉದ್ಯಮಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಅವರನ್ನು ಕೊನೆಯ ಕ್ಷಣದಲ್ಲಿ ಪಕ್ಷವು ಕಣಕ್ಕಿಳಿಸಿದೆ.</p>.<p>ಇದೇ ಮೊದಲ ಬಾರಿ, ಚುನಾವಣಾ ಕಣಕ್ಕಿಳಿದಿರುವ ಯೂಸೂಫ್ ಷರೀಫ್ ಶ್ರೀಮಂತ ವ್ಯಕ್ತಿ ಎನ್ನುವುದು ಗಮನಸೆಳೆದಿದೆ. 5ನೇ ತರಗತಿ ಓದಿರುವ ಯೂಸುಫ್ ಷರೀಫ್ ಅವರು ₹1743 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ರಾಜಕೀಯಕ್ಕೆ ಯೂಸಫ್ ಹೊಸಬರು ಎನ್ನುವ ಆರೋಪವನ್ನು ಕಳಚಿಕೊಂಡು ಪಕ್ಷದ ಮುಖಂಡರೊಂದಿಗೆ ಯೂಸುಫ್ ಷರೀಪ್ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.</p>.<p>2009ರಲ್ಲಿ ಸ್ಪರ್ಧಿಸಿ, ಕೇವಲ 9 ಮತಗಳ ಅಂತರದಿಂದ ಪರಾಭವಗೊಂಡಿದ್ದ ಎಚ್.ಎಸ್. ಗೋಪಿನಾಥ್ ಅವರು ಈ ಬಾರಿ ಬಿಜೆಪಿಯಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೋಲಿನ ಅನುಕಂಪದ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸುವ ಯತ್ನವನ್ನು ಗೋಪಿನಾಥ್ ಮಾಡುತ್ತಿದ್ದಾರೆ. ಬಿ.ಇ. ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಗೋಪಿನಾಥ್ ಅವರು ಸಹ ₹ 47.84 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ. ಗೋಪಿನಾಥ್ ಅವರು ಪಕ್ಷ ಸಂಘಟನೆ ಜತೆ ಗುರುತಿಸಿಕೊಂಡಿರುವುದು ಸಕಾರಾತ್ಮಕವಾಗಿ ಅಂಶವಾಗಲಿದೆ.</p>.<p>ಜೆಡಿಎಸ್ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಜಿ.ಎಂ. ಶೀನಪ್ಪ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.</p>.<p>ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯೇ ಪ್ರಾಬಲ್ಯ ಹೊಂದಿದೆ. ಒಬ್ಬರು ಸಚಿವರು ಮತ್ತು ಮೂವರು ಬಿಜೆಪಿ ಶಾಸಕರು ಈ ಕ್ಷೇತ್ರದಲ್ಲಿದ್ದಾರೆ. ಇಬ್ಬರು ಮಾತ್ರ ಕಾಂಗ್ರೆಸ್ನ ಶಾಸಕರಿದ್ದಾರೆ.</p>.<p>ಹಣ ಬಲದ ವಿಷಯವೂ ಬಹಿರಂಗವಾಗಿಯೇ ಈ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ಪಕ್ಷದ ವರ್ಚಸ್ಸು ಕಡೆಗಣಿಸುವಂತಿಲ್ಲ ಎನ್ನುವುದು ಮತದಾರರ ವಿಶ್ಲೇಷಣೆ.</p>.<p>* ಚುನಾವಣೆಯಲ್ಲಿ ಹಣ ಬಲದಿಂದಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಭಿವೃದ್ಧಿಯೇ ಮೊದಲ ಕಾರ್ಯಸೂಚಿಯಾಗಿದೆ.</p>.<p><em>-ಎಚ್.ಎಸ್. ಗೋಪಿನಾಥ್, ಬಿಜೆಪಿ ಅಭ್ಯರ್ಥಿ</em></p>.<p>* ಗ್ರಾ.ಪಂ.ಸದಸ್ಯರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಮಾಡಲಾಗುವುದು. ಗ್ರಾ.ಪಂ. ಸದಸ್ಯರು ಸೂಚಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು</p>.<p><em>-ಯೂಸುಫ್ ಷರೀಫ್, ಕಾಂಗ್ರೆಸ್ ಅಭ್ಯರ್ಥಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಹಾನಗರದ ಸುತ್ತ ಆವರಿಸಿಕೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯರೇ ಪ್ರಮುಖವಾಗಿರುವ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಪೈಪೋಟಿಗೆ ಸಜ್ಜಾಗಿವೆ.</p>.<p>ಇದುವರೆಗೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಲಗ್ಗೆ ಹಾಕಲು ಹವಣಿಸುತ್ತಿದೆ. ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳ ‘ಧನ–ಘನ ವ್ಯಕ್ತಿತ್ವ’ದ ಆಧಾರದ ಮೇಲೆ ಮತದಾರರನ್ನು ಸೆಳೆಯಲು ಪ್ರಯತ್ನಗಳು ನಡೆಯುತ್ತಿವೆ.</p>.<p>ಸಂಘಟನೆಯ ಸೂತ್ರ ಹಿಡಿದುಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿ, ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿ ಬೇರೂರುವ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಾಯಕತ್ವದ ಕೊರತೆ ಎದುರಿಸುತ್ತಿದ್ದರೂ ಕಾಂಗ್ರೆಸ್ ತನ್ನ ಮೂಲ ಮತದಾರರನ್ನು ನಂಬಿಕೊಂಡು ಅಬ್ಬರದ ಪ್ರಚಾರ ನಡೆಸುತ್ತಿದೆ.</p>.<p>ಚುನಾವಣೆ ನಡೆಯದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರ ಮತಗಳು ಇಲ್ಲದೆಯೇ ಈ ಮತಕ್ಷೇತ್ರ ಕಿರಿದಾಗಿದೆ.</p>.<p>2015ರಲ್ಲಿ ಬಿಜೆಪಿಯ ದೊಡ್ಡ ಬಸವರಾಜು ವಿರುದ್ಧ ಜಯಗಳಿಸಿದ್ದ ಕಾಂಗ್ರೆಸ್ನ ಎಂ. ನಾರಾಯಣಸ್ವಾಮಿ ಈ ಬಾರಿ ಸ್ಪರ್ಧಿಸಲು ನಿರಾಕರಿಸಿದ್ದರಿಂದ ರಿಯಲ್ ಎಸ್ಟೇಟ್ ಉದ್ಯಮಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಅವರನ್ನು ಕೊನೆಯ ಕ್ಷಣದಲ್ಲಿ ಪಕ್ಷವು ಕಣಕ್ಕಿಳಿಸಿದೆ.</p>.<p>ಇದೇ ಮೊದಲ ಬಾರಿ, ಚುನಾವಣಾ ಕಣಕ್ಕಿಳಿದಿರುವ ಯೂಸೂಫ್ ಷರೀಫ್ ಶ್ರೀಮಂತ ವ್ಯಕ್ತಿ ಎನ್ನುವುದು ಗಮನಸೆಳೆದಿದೆ. 5ನೇ ತರಗತಿ ಓದಿರುವ ಯೂಸುಫ್ ಷರೀಫ್ ಅವರು ₹1743 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ರಾಜಕೀಯಕ್ಕೆ ಯೂಸಫ್ ಹೊಸಬರು ಎನ್ನುವ ಆರೋಪವನ್ನು ಕಳಚಿಕೊಂಡು ಪಕ್ಷದ ಮುಖಂಡರೊಂದಿಗೆ ಯೂಸುಫ್ ಷರೀಪ್ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.</p>.<p>2009ರಲ್ಲಿ ಸ್ಪರ್ಧಿಸಿ, ಕೇವಲ 9 ಮತಗಳ ಅಂತರದಿಂದ ಪರಾಭವಗೊಂಡಿದ್ದ ಎಚ್.ಎಸ್. ಗೋಪಿನಾಥ್ ಅವರು ಈ ಬಾರಿ ಬಿಜೆಪಿಯಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೋಲಿನ ಅನುಕಂಪದ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸುವ ಯತ್ನವನ್ನು ಗೋಪಿನಾಥ್ ಮಾಡುತ್ತಿದ್ದಾರೆ. ಬಿ.ಇ. ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಗೋಪಿನಾಥ್ ಅವರು ಸಹ ₹ 47.84 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ. ಗೋಪಿನಾಥ್ ಅವರು ಪಕ್ಷ ಸಂಘಟನೆ ಜತೆ ಗುರುತಿಸಿಕೊಂಡಿರುವುದು ಸಕಾರಾತ್ಮಕವಾಗಿ ಅಂಶವಾಗಲಿದೆ.</p>.<p>ಜೆಡಿಎಸ್ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಜಿ.ಎಂ. ಶೀನಪ್ಪ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.</p>.<p>ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯೇ ಪ್ರಾಬಲ್ಯ ಹೊಂದಿದೆ. ಒಬ್ಬರು ಸಚಿವರು ಮತ್ತು ಮೂವರು ಬಿಜೆಪಿ ಶಾಸಕರು ಈ ಕ್ಷೇತ್ರದಲ್ಲಿದ್ದಾರೆ. ಇಬ್ಬರು ಮಾತ್ರ ಕಾಂಗ್ರೆಸ್ನ ಶಾಸಕರಿದ್ದಾರೆ.</p>.<p>ಹಣ ಬಲದ ವಿಷಯವೂ ಬಹಿರಂಗವಾಗಿಯೇ ಈ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ ಪಕ್ಷದ ವರ್ಚಸ್ಸು ಕಡೆಗಣಿಸುವಂತಿಲ್ಲ ಎನ್ನುವುದು ಮತದಾರರ ವಿಶ್ಲೇಷಣೆ.</p>.<p>* ಚುನಾವಣೆಯಲ್ಲಿ ಹಣ ಬಲದಿಂದಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ. ಅಭಿವೃದ್ಧಿಯೇ ಮೊದಲ ಕಾರ್ಯಸೂಚಿಯಾಗಿದೆ.</p>.<p><em>-ಎಚ್.ಎಸ್. ಗೋಪಿನಾಥ್, ಬಿಜೆಪಿ ಅಭ್ಯರ್ಥಿ</em></p>.<p>* ಗ್ರಾ.ಪಂ.ಸದಸ್ಯರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಮಾಡಲಾಗುವುದು. ಗ್ರಾ.ಪಂ. ಸದಸ್ಯರು ಸೂಚಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು</p>.<p><em>-ಯೂಸುಫ್ ಷರೀಫ್, ಕಾಂಗ್ರೆಸ್ ಅಭ್ಯರ್ಥಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>