<p><strong>ಬೆಂಗಳೂರು</strong>; ಭಾರತ್ ಬಂದ್ಗೆ ರಾಜಧಾನಿ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಹಲವೆಡೆ ಅಂಗಡಿಗಳು ತೆರೆದಿದ್ದು, ಕೆಲವೆಡೆ ಅಂಗಡಿಗಳು ಬಂದ್ ಆಗಿವೆ. ಬಹುತೇಕ ಕಡೆ, ಜನರು ರಸ್ತೆಗೆ ಬಂದಿಲ್ಲ. ಹೀಗಾಗಿ, ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಕಾಣಿಸುತ್ತಿಲ್ಲ.</p>.<p>ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ, ಶೇಷಾದ್ರಿಪುರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಅಂಗಡಿಗಳಯ ಭಾಗಶಃ ತೆರೆದಿವೆ.</p>.<p>ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತಲೂ ಶೇ 75ರಷ್ಟು ಅಂಗಡಿಗಳು ಬಂದ್ ಇವೆ. ಉಳಿದಂತೆ, ಕೆಲವರು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಎಲ್ಲ ಕಡೆಯೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಇದೆ.</p>.<p>ಬಟ್ಟೆ ಅಂಗಡಿಗಳು, ಮೊಬೈಲ್ ಮಳಿಗೆಗಳು, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಪುಸ್ತಕ ಅಂಗಡಿ, ಕಿರಾಣಿ ಅಂಗಡಿ, ಕಿರು ಸೂಪರ್ ಮಾರ್ಕೆಟ್ ಹಾಗೂ ಇತರೆ ಅಂಗಡಿಗಳು ತೆರೆದಿವೆ.</p>.<p>ಕೆಲ ಸಂಘಟನೆಗಳ ಕಾರ್ಯಕರ್ತರು, ಬೆಳಿಗ್ಗೆ ಅಂಗಡಿ ಬಳಿ ಬಂದು ಬಂದ್ ಮಾಡಲು ಹೇಳಿದ್ದರು. ಕೆಲ ಮಾಲೀಕರು, ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚಿದರು.</p>.<p>ಯಾವುದೇ ಅನುಮತಿ ಇಲ್ಲ; ನಗರದಲ್ಲಿ ಪ್ರತಿಭಟನೆ ನಡೆಸಲು ಯಾವುದೇ ಸಂಘಟನೆಯವರು ಅನುಮತಿ ಪಡೆದಿಲ್ಲವೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>ಹಲವೆಡೆ ಪ್ರತಿಭಟನೆ: ನಗರದ ಪುರಭವನ, ಸುಮನಹಳ್ಳಿ ವೃತ್ತ, ಕೆ.ಆರ್.ಪುರ, ಕನಕಪುರ ರಸ್ತೆಯಲ್ಲಿ ಕಾರ್ಮಿಕರು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.</p>.<p><strong>ಇದನ್ನೂ ಓದಿ:<a href="https://www.prajavani.net/karnataka-news/farm-bill-law-bharat-bandh-farmer-many-organizations-protests-870347.html" target="_blank">ಭಾರತ ಬಂದ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಪ್ರತಿಭಟನೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>; ಭಾರತ್ ಬಂದ್ಗೆ ರಾಜಧಾನಿ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಹಲವೆಡೆ ಅಂಗಡಿಗಳು ತೆರೆದಿದ್ದು, ಕೆಲವೆಡೆ ಅಂಗಡಿಗಳು ಬಂದ್ ಆಗಿವೆ. ಬಹುತೇಕ ಕಡೆ, ಜನರು ರಸ್ತೆಗೆ ಬಂದಿಲ್ಲ. ಹೀಗಾಗಿ, ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಕಾಣಿಸುತ್ತಿಲ್ಲ.</p>.<p>ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ, ಶೇಷಾದ್ರಿಪುರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಅಂಗಡಿಗಳಯ ಭಾಗಶಃ ತೆರೆದಿವೆ.</p>.<p>ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತಲೂ ಶೇ 75ರಷ್ಟು ಅಂಗಡಿಗಳು ಬಂದ್ ಇವೆ. ಉಳಿದಂತೆ, ಕೆಲವರು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಎಲ್ಲ ಕಡೆಯೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಇದೆ.</p>.<p>ಬಟ್ಟೆ ಅಂಗಡಿಗಳು, ಮೊಬೈಲ್ ಮಳಿಗೆಗಳು, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಪುಸ್ತಕ ಅಂಗಡಿ, ಕಿರಾಣಿ ಅಂಗಡಿ, ಕಿರು ಸೂಪರ್ ಮಾರ್ಕೆಟ್ ಹಾಗೂ ಇತರೆ ಅಂಗಡಿಗಳು ತೆರೆದಿವೆ.</p>.<p>ಕೆಲ ಸಂಘಟನೆಗಳ ಕಾರ್ಯಕರ್ತರು, ಬೆಳಿಗ್ಗೆ ಅಂಗಡಿ ಬಳಿ ಬಂದು ಬಂದ್ ಮಾಡಲು ಹೇಳಿದ್ದರು. ಕೆಲ ಮಾಲೀಕರು, ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚಿದರು.</p>.<p>ಯಾವುದೇ ಅನುಮತಿ ಇಲ್ಲ; ನಗರದಲ್ಲಿ ಪ್ರತಿಭಟನೆ ನಡೆಸಲು ಯಾವುದೇ ಸಂಘಟನೆಯವರು ಅನುಮತಿ ಪಡೆದಿಲ್ಲವೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>ಹಲವೆಡೆ ಪ್ರತಿಭಟನೆ: ನಗರದ ಪುರಭವನ, ಸುಮನಹಳ್ಳಿ ವೃತ್ತ, ಕೆ.ಆರ್.ಪುರ, ಕನಕಪುರ ರಸ್ತೆಯಲ್ಲಿ ಕಾರ್ಮಿಕರು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.</p>.<p><strong>ಇದನ್ನೂ ಓದಿ:<a href="https://www.prajavani.net/karnataka-news/farm-bill-law-bharat-bandh-farmer-many-organizations-protests-870347.html" target="_blank">ಭಾರತ ಬಂದ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಪ್ರತಿಭಟನೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>