‘ಈಜು ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ನಾನು ಸರ್ಕಾರಿ ಈಜುಕೊಳಕ್ಕೆ ಹೋಗಿ ಈಜಿದರೆ ತಪ್ಪೇನು? ಬಿಜೆಪಿ ಮುಖಂಡರು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡರು. ‘ಬಿಜೆಪಿಯವರು ಮೋಜು ಮಸ್ತಿ ಮಾಡುತ್ತಾರಲ್ಲ. ನಿನ್ನೆ ನೆಲಮಂಗಲದಲ್ಲಿ ಅಭಿನಂದನಾ ಸಮಾರಂಭದಲ್ಲಿ ಏನೇನೋ ಹಂಚಿದರಲ್ಲ. ಅದೇ ರೀತಿ ಈಜು ಕೂಡ ಅಂತಂದುಕೊಂಡಿರಬೇಕು. ನಾನು ರೆಸಾರ್ಟ್ಗೆ ಹೋಗಿದ್ದಲ್ಲ. ಮಂಗಳೂರು ಪ್ರವಾಸದಲ್ಲಿದ್ದ ನಾನು ಬೆಳಿಗ್ಗೆ 6ಕ್ಕೆ ಅಲ್ಲಿನ ಸರ್ಕಾರಿ ಈಜುಕೊಳಕ್ಕೆ ಹೋಗಿದ್ದೆ. ಆನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ’ ಎಂದು ತಿಳಿಸಿದರು.