‘ರಾಜ್ಯಸರ್ಕಾರ ಮತ್ತು ಬಿಎಂಆರ್ಸಿಎಲ್ ನಡುವಣ ಒಪ್ಪಂದದನ್ವಯ, ವರಮಾನ ಮತ್ತು ಸಾಲಮರುಪಾವತಿ ನಡುವಣ ವ್ಯತ್ಯಾಸವನ್ನು ತಗ್ಗಿಸಲು ಸರ್ಕಾರ ನೆರವು ನೀಡಬೇಕು. ಆದರೆ, ಈಗ ಸರ್ಕಾರವೇ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಅಲ್ಲದೆ, ಎರಡನೇ ಹಂತದ ಯೋಜನೆ ಅನುಷ್ಠಾನಕ್ಕೂ ಸರ್ಕಾರದ ನೆರವು ಬೇಕಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯುವುದು ಅನಿವಾರ್ಯವಾಗಿದೆ’ ಎಂದು ಮೂಲಗಳು ತಿಳಿಸಿವೆ.