<p><strong>ಬೆಂಗಳೂರು:</strong> ಬಿಎಂಟಿಸಿಯ ಬಸ್ಗಳ ಅಪಘಾತ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು (ಬಿಎಂಟಿಸಿ) ಕಳವಳಕ್ಕೀಡು ಮಾಡಿದೆ.</p>.<p>ಡಿಸೆಂಬರ್ 20ರಂದು ಮೈಸೂರು ರಸ್ತೆಯ ಗೋಪಾಲನ್ ಮಾಲ್ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದರು.</p>.<p>ಈ ದುರ್ಘಟನೆ ಬಳಿಕ ಎಚ್ಚೆತ್ತ ಬಳಿಕ ಸಂಸ್ಥೆ ಇಂಥ ಘಟನೆಗಳು ಮರುಕಳಿಸಲು ಕಾರಣವೇನು ಎಂಬುದನ್ನು ಹುಡುಕಲು ಹೊರಟಿದೆ. ಅಪಘಾತಗಳನ್ನು ನಿಯಂತ್ರಿಸುವ ಮಾರ್ಗೋಪಾಯ ಕಂಡುಕೊಳ್ಳುವುದಕ್ಕೂ ಸಿದ್ಧತೆ ನಡೆಸಿದೆ.</p>.<p><strong>ತರಬೇತಿಯಲ್ಲೇ ಲೋಪ?</strong></p>.<p>‘ತರಬೇತಿ ಹಂತದಲ್ಲಿಯೇ ಲೋಪವಿದೆ. ಚಾಲಕರಾಗಿ ಒಂದೆರಡು ವರ್ಷಗಳ ಅನುಭವ ಮಾತ್ರ ಇರುವವರನ್ನು ತರಬೇತುದಾರರನ್ನಾಗಿ ನೇಮಿಸಲಾಗಿದೆ. ಇಲ್ಲಿನ ತರಬೇತಿದಾರರು ಅಪಘಾತರಹಿತ ಸೇವೆಗಾಗಿ ಚಿನ್ನ/ ಬೆಳ್ಳಿಯ ಪದಕ ಪಡೆದವರಾಗಿರಬೇಕು. ನಾಮಕ್ಕಲ್ನಲ್ಲಿ (ತಮಿಳುನಾಡಿನ ಬಸ್ ಚಾಲನೆ ತರಬೇತಿ ಕೇಂದ್ರ) ತರಬೇತಿ ಪಡೆದಿರಬೇಕು. ಅತ್ಯುತ್ತಮ ಇಂಧನ ಮೈಲೇಜ್ ನೀಡಿದ ದಾಖಲೆ ಹೊಂದಿರಬೇಕು ಎಂಬ ನಿಬಂಧನೆ ಇದೆ. ಆದರೆ, ಇಲ್ಲಿ ಈ ಅರ್ಹತೆ ಹೊಂದಿರುವ ಒಂದೆರಡು ಮಂದಿ ತರಬೇತುದಾರರು ಮಾತ್ರ ಇದ್ದಾರೆ. ಇತರ ತರಬೇತುದಾರರಿಂದ ಸಿಗುವ ತರಬೇತಿ ಗುಣಮಟ್ಟ ಅಷ್ಟಕ್ಕಷ್ಟೆ’ ಎನ್ನುತ್ತಾರೆ ಬಸ್ ಚಾಲಕರು.</p>.<p>ಬಸ್ಗಳ ನಿರ್ವಹಣೆಯನ್ನು ಇನ್ನಷ್ಟು ಕಾಳಜಿಯಿಂದ ಮಾಡಬೇಕು. ಬೆಳಿಗ್ಗೆ ವಾಹನವನ್ನು ರಸ್ತೆಗಿಳಿಸುವ ತರಾತುರಿಯಲ್ಲಿ ಅವುಗಳನ್ನು ಸರಿಯಾಗಿ ತಪಾಸಣೆ ಮಾಡುವುದೂ ಇಲ್ಲ. ಬ್ರೇಕ್ ವೈಫಲ್ಯ, ಸ್ಟೀರಿಂಗ್ ರಾಡ್ ತುಂಡಾಗುವುಕ್ಕೆ ವಾಹನದ ಬಗ್ಗೆ ನಿಗಾ ವಹಿಸದಿರುವುದೇ ಕಾರಣ ಎಂದು ಚಾಲಕರು ದೂರಿದರು.</p>.<p>ಆದರೆ, ಈ ಆರೋಪಗಳನ್ನು ಒಪ್ಪಿಕೊಳ್ಳಲು ಬಿಎಂಟಿಸಿ ಸಿದ್ಧವಿಲ್ಲ. ‘ವಾಹನಗಳನ್ನು ಪ್ರತಿದಿನ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತದೆ. ಚಾಲಕರೂ ಕಾಳಜಿ ವಹಿಸುತ್ತಾರೆ. ಇಲ್ಲವಾದರೆ ಅವರಿಗೇ ತೊಂದರೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಲ್ಲಿ ಯಾವುದೇ ರಾಜಿ ಇಲ್ಲ. ಇಷ್ಟೆಲ್ಲಾ ಕಾಳಜಿ ವಹಿಸಿದರೂ ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರುತ್ತದೆ. ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.</p>.<p><strong>ಅಪಘಾತಕ್ಕೇನು ಕಾರಣ?</strong></p>.<p>* ನಿಗದಿತ ವೇಳೆಯೊಳಗೆ ತಲುಪುವ ಒತ್ತಡ</p>.<p>* ಸ್ವಲ್ಪ ಅವಕಾಶ ಸಿಕ್ಕರೂ ಮುನ್ನುಗ್ಗುವಿಕೆ</p>.<p>* ವಾಹನ ದಟ್ಟಣೆ, ಬೈಕ್ ಸವಾರರ ಅಡ್ಡಾದಿಡ್ಡಿ ಸಂಚಾರ</p>.<p>* ತಾಂತ್ರಿಕ ದೋಷ, ನಿರ್ವಹಣೆ ಕೊರತೆ</p>.<p>* ಬಾಗಿಲು ತೆರೆದಿಟ್ಟೇ ಸಂಚಾರ</p>.<p>* ಕೊನೇ ಕ್ಷಣದ ಗಾಬರಿ (ಬ್ರೇಕ್ ಬದಲು ಆ್ಯಕ್ಸಿಲರೇಟರ್ ಒತ್ತಿಬಿಡುವುದು)</p>.<p><strong>‘ಅಪಘಾತ ನಿಯಂತ್ರಣ– ಹೆಚ್ಚಿನ ನಿಗಾ’</strong></p>.<p>ಅಪಘಾತ, ಮರಣ ಪ್ರಮಾಣಗಳು ಹೆಚ್ಚಿವೆ. ಬಸ್ಗಳ ನಿರ್ವಹಣೆ ಮೇಲೆ ಹೆಚ್ಚಿನ ನಿಗಾ ವಹಿಸಿದ್ದೇವೆ. ದೈನಂದಿನ ನಿರ್ವಹಣೆ ಜತೆಗೆ ಪ್ರತಿ 15 ದಿನಗಳಿಗೊಮ್ಮೆ ಇಡೀ ವಾಹನದ ಪರಿಪೂರ್ಣ ನಿರ್ವಹಣೆ ಮಾಡುತ್ತೇವೆ. ಚಾಲಕರ ತರಬೇತಿ ಗುಣಮಟ್ಟ ವರ್ಧನೆಗೂ ಹೆಚ್ಚು ಒತ್ತು ನೀಡುತ್ತೇವೆ.</p>.<p>ತರಬೇತಿದಾರರು ಅಪಘಾತರಹಿತ ಚಾಲನೆಗಾಗಿ ಚಿನ್ನ/ಬೆಳ್ಳಿ ಪದಕ ಪಡೆದಿರಬೇಕು ಎಂಬ ಷರತ್ತೇನೋ ಇದೆ. ಆದರೆ, ಅಂತಹವರು ಸಿಗುವುದು ಕಡಿಮೆ. ಅದಕ್ಕಾಗಿ ಉತ್ತಮ ಸೇವಾನುಭವ, ಪರಿಣತಿ ಹೊಂದಿದವರನ್ನು ತರಬೇತಿಗೆ ನಿಯೋಜಿಸಿದ್ದೇವೆ. ಇತ್ತೀಚೆಗೆ ನಡೆದ ಅಪಘಾತ ಪ್ರಕರಣಗಳಲ್ಲಿ ವಾಹನ ಚಲಾಯಿಸಿದವರಿಗೆ 8 ವರ್ಷಗಳ ಅನುಭವ ಇತ್ತು. ಈ ಹಿಂದೆ ಅವರಿಂದಾಗಿ ಯಾವುದೇ ಅಪಘಾತವೂ ಸಂಭವಿಸಿರಲಿಲ್ಲ. ಹೀಗಾಗಿ ತರಬೇತಿಯಲ್ಲಿ ಲೋಪವಿದೆ ಎನ್ನುವುದನ್ನು ಒಪ್ಪಲಾಗದು.</p>.<p><em><strong>– ಡಾ.ಎನ್.ವಿ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಎಂಟಿಸಿಯ ಬಸ್ಗಳ ಅಪಘಾತ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು (ಬಿಎಂಟಿಸಿ) ಕಳವಳಕ್ಕೀಡು ಮಾಡಿದೆ.</p>.<p>ಡಿಸೆಂಬರ್ 20ರಂದು ಮೈಸೂರು ರಸ್ತೆಯ ಗೋಪಾಲನ್ ಮಾಲ್ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದರು.</p>.<p>ಈ ದುರ್ಘಟನೆ ಬಳಿಕ ಎಚ್ಚೆತ್ತ ಬಳಿಕ ಸಂಸ್ಥೆ ಇಂಥ ಘಟನೆಗಳು ಮರುಕಳಿಸಲು ಕಾರಣವೇನು ಎಂಬುದನ್ನು ಹುಡುಕಲು ಹೊರಟಿದೆ. ಅಪಘಾತಗಳನ್ನು ನಿಯಂತ್ರಿಸುವ ಮಾರ್ಗೋಪಾಯ ಕಂಡುಕೊಳ್ಳುವುದಕ್ಕೂ ಸಿದ್ಧತೆ ನಡೆಸಿದೆ.</p>.<p><strong>ತರಬೇತಿಯಲ್ಲೇ ಲೋಪ?</strong></p>.<p>‘ತರಬೇತಿ ಹಂತದಲ್ಲಿಯೇ ಲೋಪವಿದೆ. ಚಾಲಕರಾಗಿ ಒಂದೆರಡು ವರ್ಷಗಳ ಅನುಭವ ಮಾತ್ರ ಇರುವವರನ್ನು ತರಬೇತುದಾರರನ್ನಾಗಿ ನೇಮಿಸಲಾಗಿದೆ. ಇಲ್ಲಿನ ತರಬೇತಿದಾರರು ಅಪಘಾತರಹಿತ ಸೇವೆಗಾಗಿ ಚಿನ್ನ/ ಬೆಳ್ಳಿಯ ಪದಕ ಪಡೆದವರಾಗಿರಬೇಕು. ನಾಮಕ್ಕಲ್ನಲ್ಲಿ (ತಮಿಳುನಾಡಿನ ಬಸ್ ಚಾಲನೆ ತರಬೇತಿ ಕೇಂದ್ರ) ತರಬೇತಿ ಪಡೆದಿರಬೇಕು. ಅತ್ಯುತ್ತಮ ಇಂಧನ ಮೈಲೇಜ್ ನೀಡಿದ ದಾಖಲೆ ಹೊಂದಿರಬೇಕು ಎಂಬ ನಿಬಂಧನೆ ಇದೆ. ಆದರೆ, ಇಲ್ಲಿ ಈ ಅರ್ಹತೆ ಹೊಂದಿರುವ ಒಂದೆರಡು ಮಂದಿ ತರಬೇತುದಾರರು ಮಾತ್ರ ಇದ್ದಾರೆ. ಇತರ ತರಬೇತುದಾರರಿಂದ ಸಿಗುವ ತರಬೇತಿ ಗುಣಮಟ್ಟ ಅಷ್ಟಕ್ಕಷ್ಟೆ’ ಎನ್ನುತ್ತಾರೆ ಬಸ್ ಚಾಲಕರು.</p>.<p>ಬಸ್ಗಳ ನಿರ್ವಹಣೆಯನ್ನು ಇನ್ನಷ್ಟು ಕಾಳಜಿಯಿಂದ ಮಾಡಬೇಕು. ಬೆಳಿಗ್ಗೆ ವಾಹನವನ್ನು ರಸ್ತೆಗಿಳಿಸುವ ತರಾತುರಿಯಲ್ಲಿ ಅವುಗಳನ್ನು ಸರಿಯಾಗಿ ತಪಾಸಣೆ ಮಾಡುವುದೂ ಇಲ್ಲ. ಬ್ರೇಕ್ ವೈಫಲ್ಯ, ಸ್ಟೀರಿಂಗ್ ರಾಡ್ ತುಂಡಾಗುವುಕ್ಕೆ ವಾಹನದ ಬಗ್ಗೆ ನಿಗಾ ವಹಿಸದಿರುವುದೇ ಕಾರಣ ಎಂದು ಚಾಲಕರು ದೂರಿದರು.</p>.<p>ಆದರೆ, ಈ ಆರೋಪಗಳನ್ನು ಒಪ್ಪಿಕೊಳ್ಳಲು ಬಿಎಂಟಿಸಿ ಸಿದ್ಧವಿಲ್ಲ. ‘ವಾಹನಗಳನ್ನು ಪ್ರತಿದಿನ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತದೆ. ಚಾಲಕರೂ ಕಾಳಜಿ ವಹಿಸುತ್ತಾರೆ. ಇಲ್ಲವಾದರೆ ಅವರಿಗೇ ತೊಂದರೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಲ್ಲಿ ಯಾವುದೇ ರಾಜಿ ಇಲ್ಲ. ಇಷ್ಟೆಲ್ಲಾ ಕಾಳಜಿ ವಹಿಸಿದರೂ ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರುತ್ತದೆ. ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.</p>.<p><strong>ಅಪಘಾತಕ್ಕೇನು ಕಾರಣ?</strong></p>.<p>* ನಿಗದಿತ ವೇಳೆಯೊಳಗೆ ತಲುಪುವ ಒತ್ತಡ</p>.<p>* ಸ್ವಲ್ಪ ಅವಕಾಶ ಸಿಕ್ಕರೂ ಮುನ್ನುಗ್ಗುವಿಕೆ</p>.<p>* ವಾಹನ ದಟ್ಟಣೆ, ಬೈಕ್ ಸವಾರರ ಅಡ್ಡಾದಿಡ್ಡಿ ಸಂಚಾರ</p>.<p>* ತಾಂತ್ರಿಕ ದೋಷ, ನಿರ್ವಹಣೆ ಕೊರತೆ</p>.<p>* ಬಾಗಿಲು ತೆರೆದಿಟ್ಟೇ ಸಂಚಾರ</p>.<p>* ಕೊನೇ ಕ್ಷಣದ ಗಾಬರಿ (ಬ್ರೇಕ್ ಬದಲು ಆ್ಯಕ್ಸಿಲರೇಟರ್ ಒತ್ತಿಬಿಡುವುದು)</p>.<p><strong>‘ಅಪಘಾತ ನಿಯಂತ್ರಣ– ಹೆಚ್ಚಿನ ನಿಗಾ’</strong></p>.<p>ಅಪಘಾತ, ಮರಣ ಪ್ರಮಾಣಗಳು ಹೆಚ್ಚಿವೆ. ಬಸ್ಗಳ ನಿರ್ವಹಣೆ ಮೇಲೆ ಹೆಚ್ಚಿನ ನಿಗಾ ವಹಿಸಿದ್ದೇವೆ. ದೈನಂದಿನ ನಿರ್ವಹಣೆ ಜತೆಗೆ ಪ್ರತಿ 15 ದಿನಗಳಿಗೊಮ್ಮೆ ಇಡೀ ವಾಹನದ ಪರಿಪೂರ್ಣ ನಿರ್ವಹಣೆ ಮಾಡುತ್ತೇವೆ. ಚಾಲಕರ ತರಬೇತಿ ಗುಣಮಟ್ಟ ವರ್ಧನೆಗೂ ಹೆಚ್ಚು ಒತ್ತು ನೀಡುತ್ತೇವೆ.</p>.<p>ತರಬೇತಿದಾರರು ಅಪಘಾತರಹಿತ ಚಾಲನೆಗಾಗಿ ಚಿನ್ನ/ಬೆಳ್ಳಿ ಪದಕ ಪಡೆದಿರಬೇಕು ಎಂಬ ಷರತ್ತೇನೋ ಇದೆ. ಆದರೆ, ಅಂತಹವರು ಸಿಗುವುದು ಕಡಿಮೆ. ಅದಕ್ಕಾಗಿ ಉತ್ತಮ ಸೇವಾನುಭವ, ಪರಿಣತಿ ಹೊಂದಿದವರನ್ನು ತರಬೇತಿಗೆ ನಿಯೋಜಿಸಿದ್ದೇವೆ. ಇತ್ತೀಚೆಗೆ ನಡೆದ ಅಪಘಾತ ಪ್ರಕರಣಗಳಲ್ಲಿ ವಾಹನ ಚಲಾಯಿಸಿದವರಿಗೆ 8 ವರ್ಷಗಳ ಅನುಭವ ಇತ್ತು. ಈ ಹಿಂದೆ ಅವರಿಂದಾಗಿ ಯಾವುದೇ ಅಪಘಾತವೂ ಸಂಭವಿಸಿರಲಿಲ್ಲ. ಹೀಗಾಗಿ ತರಬೇತಿಯಲ್ಲಿ ಲೋಪವಿದೆ ಎನ್ನುವುದನ್ನು ಒಪ್ಪಲಾಗದು.</p>.<p><em><strong>– ಡಾ.ಎನ್.ವಿ.ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>