<p><strong>ಬೆಂಗಳೂರು</strong>: ಕರ್ನಾಟಕ ಹಾಲು ಮಹಾಮಂಡಳವು ನಂದಿನಿ ಉತ್ಪನ್ನಗಳನ್ನು ಜನರಿಗೆ ತಲುಪಿಸಿ, ಇನ್ನಷ್ಟು ಹತ್ತಿರವಾಗಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ವಹಿವಾಟು ವಿಸ್ತರಣೆಗೆ ನಂದಿನಿ ಶಾಪಿಗಳನ್ನು ಹೆಚ್ಚಿಸುತ್ತಿದೆ.</p><p>ಈಗಾಗಲೇ ಮದರ್ಡೇರಿ ಆರಂಭಿಸಿದ್ದ ಶಾಪಿಗಳಿಗೆ ಕೆಎಂಎಫ್ ಹೊಸ ರೂಪ ನೀಡಿ ಗ್ರಾಹಕಸ್ನೇಹಿಯಾಗಿಸುವ ಜತೆಗೆ ಹೊಸದಾಗಿ ಶಾಪಿಗಳನ್ನು ತೆರೆಯಲು ಜಾಗಗಳನ್ನು ಗುರುತಿಸುತ್ತಿದೆ.</p><p>‘ಗೋವಿನಿಂದ ಗ್ರಾಹಕರವರೆಗೆ’ ಎನ್ನುವ ಘೋಷವಾಕ್ಯ, ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಬಗೆಬಗೆಯ ಉತ್ಪನ್ನಗಳು ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಜತೆಗೆ ಜನರಿಗೆ ಉದ್ಯೋಗ ನೀಡುವುದಕ್ಕೂ ಒತ್ತು ನೀಡುತ್ತಿದೆ.</p><p>ನಂದಿನಿ ಉತ್ಪನ್ನಗಳನ್ನು ಮೊದಲು ಬಲ್ಕ್ ವೆಂಡಿಂಗ್ ಬೂತ್ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ನಂತರ ಅವುಗಳಿಗೆ ಪಾರ್ಲರ್ಗಳ ರೂಪ ನೀಡಲಾಯಿತು. ಬಳಿಕ ಪ್ರಾಂಚೈಸಿ ನೀಡಿ ಮಾರಾಟವನ್ನು ವಿಸ್ತರಣೆ ಮಾಡಲಾಯಿತು.</p><p>ಹೊಸ ಕಾಲಘಟ್ಟಕ್ಕೆ ಅನುಗುಣವಾಗಿ ಶಾಪಿಗಳನ್ನು ಶುರು ಮಾಡಿ ಅವುಗಳನ್ನು ಜನಾಕರ್ಷಕ ಕೇಂದ್ರಗಳಾಗಿ ರೂಪಿಸಲಾಗಿದೆ. ಕೆಲವು ಕಡೆ ಪಾರ್ಲರ್ಗಳೇ ಶಾಪಿಗಳ ರೂಪ ಪಡೆದುಕೊಂಡರೆ, ಹಲವು ಕಡೆ ಹೊಸದಾಗಿ ಶಾಪಿಗಳನ್ನು ಆರಂಭಿಸಲು ಕೆಎಂಎಫ್ ಅನುಮತಿ ನೀಡುತ್ತಿದೆ.</p><p>ನಗರದಲ್ಲಿ ಬಮೂಲ್ ಜತೆಗೆ ಕೆಎಂಎಫ್ನ ಮದರ್ಡೇರಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ತುಮಕೂರು ಹಾಲು ಒಕ್ಕೂಟಗಳು ವಹಿವಾಟು ನಡೆಸುತ್ತಿವೆ. ಆರು ಘಟಕಗಳು ಪಾರ್ಲರ್, ಪ್ರಾಂಚೈಸಿ ಘಟಕಗಳನ್ನು ಹೊಂದಿವೆ. ಆದರೆ 130 ಶಾಪಿಗಳನ್ನು ಮಾತ್ರ ಮದರ್ಡೇರಿ ನಿರ್ವಹಣೆ ಮಾಡುತ್ತಿದೆ.</p><p><strong>ಹೇಗಿವೆ ಶಾಪಿಗಳು?</strong></p><p>ನಗರದ ವಿಲ್ಸನ್ ಗಾರ್ಡನ್, ಎಂ.ಜಿ. ರಸ್ತೆ, ಹೆಬ್ಬಾಳ, ರಾಜಾಜಿನಗರ ಸೇರಿದಂತೆ ಹಲವು ಭಾಗಗಳಲ್ಲಿ ನಂದಿನಿ ಶಾಪಿಗಳಿವೆ. ವಿಶಾಲವಾದ ಜಾಗ ಇರುವ ಕಡೆಗಳಲ್ಲಿ ಪಾರ್ಕಿಂಗ್ ಸೇರಿ ಅಗತ್ಯ ಸೌಲಭ್ಯಗಳನ್ನು ಶಾಪಿಗಳ ಆವರಣದಲ್ಲಿಯೇ ನೀಡಲಾಗಿದೆ.</p><p>ಸಣ್ಣ ಜಾಗ ಇರುವ ಕಡೆ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಡೀ ಮಳಿಗೆ ಗ್ರಾಹಕರನ್ನು ಆಕರ್ಷಿಸುವ ರೀತಿ ಅಂದಗಾಣಿಸುವಂತೆ ರೂಪಿಸಲಾಗುತ್ತದೆ. ನಂದಿನಿ ಉತ್ಪನ್ನಗಳ ಚಿತ್ರಗಳು ಶಾಪಿಯಲ್ಲಿ ಗಮನಸೆಳೆಯಲಿವೆ. ಶಾಪಿಯ ಒಳ ಹೊಕ್ಕರೆ ಮಾಲ್ ರೀತಿಯಲ್ಲಿಯೇ ಕಾಣುತ್ತದೆ.</p><p>ಕೆಲವು ಪ್ರದೇಶಗಳಲ್ಲಿ ದಿನಕ್ಕೆ ಒಂದು ಶಾಪಿಯಲ್ಲಿ ₹1.50 ಲಕ್ಷದವರೆಗೂ, ಕೆಲವೆಡೆ ₹50 ಸಾವಿರಕ್ಕೂ ಅಧಿಕ ವಹಿವಾಟು ನಡೆಯುತ್ತದೆ. ನಂದಿನಿ ಶಾಪಿ ಆರಂಭಕ್ಕೆ ₹5 ಲಕ್ಷದಿಂದ ₹7 ಲಕ್ಷದವರೆಗೂ ಸಹಾಯಧನವನ್ನು ಕೆಎಂಎಫ್ ನೀಡಲಿದೆ.</p><p><strong>ಹೊಸ ಶಾಪಿ: </strong>ಈಗಾಗಲೇ ಇರುವ ಶಾಪಿಗಳ ನಿರ್ವಹಣೆ ಹಾಗೂ ಮಾರಾಟಕ್ಕೆ ಒತ್ತು ನೀಡುವ ಜತೆಗೆ ಹೊಸದಾಗಿ ಈ ವರ್ಷದಲ್ಲಿಯೇ 70 ಶಾಪಿಗಳನ್ನು ತೆರೆದು, ಒಟ್ಟು 200ರ ಗಡಿ ತಲುಪುವ ಗುರಿಯನ್ನು ಕೆಎಂಎಫ್ ಹೊಂದಿದೆ. ಇವುಗಳಿಗೆ ಮಿನಿ ಮಾಲ್ಗಳ ರೂಪ ನೀಡುವ ಉದ್ದೇಶ ಹೊಂದಲಾಗಿದೆ.</p><p>ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಸಿಎ ನಿವೇಶನ ಇಲ್ಲವೇ ಸ್ಥಳೀಯವಾಗಿ ಲಭ್ಯ ಇರುವ ಜಾಗವನ್ನು ನಂದಿನಿ ಶಾಪಿಗೆ ನೀಡುವಂತೆ ಕೋರಲಾಗಿದೆ.</p><p>‘ನಂದಿನಿ ಉತ್ಪನ್ನಗಳ ಮೇಲೆ ಜನರಿಗೆ ವಿಶ್ವಾಸವಿದೆ. ಗ್ರಾಹಕಸ್ನೇಹಿ ಶಾಪಿಗಳೊಂದಿಗೆ ಇನ್ನಷ್ಟು ಜನರನ್ನು ಆಕರ್ಷಿಸಲು ಕೆಎಂಎಫ್ ಪ್ರಯತ್ನಿಸುತ್ತಿದೆ. ಈ ವರ್ಷದಲ್ಲಿ ಹೊಸ ಶಾಪಿಗಳನ್ನು ಆರಂಭಿಸಲು ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ’ ಎಂದು ಮಾರುಕಟ್ಟೆ ನಿರ್ದೇಶಕ ಎಂ.ಎಸ್. ಸತೀಶ್ ಕುಮಾರ್ ತಿಳಿಸಿದರು.</p><p><strong>ಬ್ರಾಂಡ್ ವಿಸ್ತರಣೆಗೆ ಒತ್ತು:</strong> ನಂದಿನಿ ಉತ್ಪನ್ನಗಳನ್ನು 53 ವರ್ಷದಿಂದ ತಲುಪಿಸುವ ಮೂಲಕ ಕೆಎಂಎಫ್ ಜನರಿಗೆ ಹತ್ತಿರವಾಗಿದೆ. ಮೊದಲೆಲ್ಲ ಹಾಲು, ಮೊಸರು, ತುಪ್ಪದಂತಹ ಉತ್ಪನ್ನಗಳು ಮಾತ್ರ ಸಿಗುತ್ತಿದ್ದವು. ಒಂದು ದಶಕದ ಈಚೆಗೆ ಉತ್ಪನ್ನಗಳ ಸಂಖ್ಯೆ 200ರ ಗಡಿ ತಲುಪಿದೆ. ಹೊರ ರಾಜ್ಯ, ದೇಶಗಳಿಗೂ ಸೇವೆ ವಿಸ್ತರಿಸಿದೆ.</p><p>ಹಾಲಿನ ಪುಡಿ, ಮೈಸೂರು ಪಾಕ್, ಕೇಕ್ಗಳು, ಐಸ್ಕ್ರೀಂಗಳ ಸಹಿತ ವಿವಿಧ ಸ್ವಾದದ ಉತ್ಪನ್ನಗಳಿಂದ ‘ನಂದಿನಿ’ ಜನರಿಗೆ ತಲುಪಿ ಸಹಕಾರ ವಲಯದ ಪ್ರಮುಖ ಬ್ರಾಂಡ್ ಆಗಿ ಹೊರಹೊಮ್ಮಿದೆ.</p><p>‘ನಂದಿನಿ ಉತ್ಪನ್ನಗಳು ನವದೆಹಲಿ, ಮುಂಬೈ, ಚೆನ್ನೈ, ಪುಣೆ ಸಹಿತ ಪ್ರಮುಖ ನಗರಗಳಲ್ಲದೇ, ಹೊರ ದೇಶಗಳಲ್ಲೂ ಲಭ್ಯವಾಗುವಂತೆ ನೋಡಿಕೊಂಡಿದ್ದೇವೆ. ಈ ಬ್ರ್ಯಾಂಡ್ ಅನ್ನು ಜನರಿಗೆ ಸುಲಭವಾಗಿ ತಲುಪಿಸಲು, ಜನ ನಂದಿನಿ ಮಳಿಗೆಗಳಿಗೆ ಬರಲೆಂದೇ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ’ ಎಂದು ಮಾರುಕಟ್ಟೆ ನಿರ್ದೇಶಕ ಎಂ.ರಘುನಂದನ್ ಹೇಳಿದರು.</p>.<p><strong>ಇನ್ನಷ್ಟು ‘ಕೆಫೆ ಮೂ’</strong></p><p>ಶಾಪಿಗಳಿಗಿಂತಲೂ ಹೈಟೆಕ್ ಆಗಿರುವ ನಂದಿನಿ ಕೆಫೆ ಮೂ ಆರಂಭಕ್ಕೂ ಕೆಎಂಎಫ್ ಒತ್ತುನೀಡಿದೆ.</p><p>ರೇವಾ ವಿಶ್ವವಿದ್ಯಾಲಯ, ಚಾಲುಕ್ಯ ವಿಶ್ವವಿದ್ಯಾಲಯ, ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಕೆಫೆ ಮೂ ಇದೆ. ಇನ್ನೂ ಎರಡು ಕಡೆ ಸದ್ಯದಲ್ಲೇ ಕೆಫೆ ಮೂ ಆರಂಭಿಸಲು ತಯಾರಿಯೂ ನಡೆಯುತ್ತಿದೆ.</p><p>‘ಇಲ್ಲಿ ನಂದಿನಿ ಉತ್ಪನ್ನಗಳ ಖರೀದಿ ಮಾತ್ರವಲ್ಲದೇ ಕುಳಿತು ಸೇವಿಸುವ ವ್ಯವಸ್ಥೆಯೂ ಇರಲಿದೆ. ಕಾಫಿ, ಪಿಜ್ಜಾ, ಸ್ಯಾಂಡ್ವಿಚ್, ಐಸ್ಕ್ರೀಂ ಸ್ಕೂಪ್ ಕೂಡ ಸಿಗಲಿದೆ. ಕೇರಳದಲ್ಲಿ ‘ಕೆಫೆ ಮೂ’ಗೆ ಬೇಡಿಕೆ ಇದ್ದು, ಹಲವು ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗದೇ ಇರುವುದರಿಂದ ನಿಧಾನವಾಗಿ ವಿಸ್ತರಿಸುತ್ತಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.</p>.<div><blockquote>ಈಗಿರುವ ನಂದಿನಿ ಶಾಪಿಗಳ ಆಧುನೀಕರಣಕ್ಕೂ ಒತ್ತು ನೀಡಿದ್ದೇವೆ. ಬಿಡಿಎ, ಜಿಬಿಎ ಜಾಗ ನೀಡಿದರೆ ಇನ್ನಷ್ಟು ಕಡೆ ಶಾಪಿಗಳು ಬರಲಿವೆ. ಜಾಗ ನೀಡುವಂತೆ ಮುಖ್ಯಮಂತ್ರಿ ಕೂಡ ಸೂಚನೆ ನೀಡಿದ್ದಾರೆ.</blockquote><span class="attribution">– ಬಿ.ಶಿವಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಹಾಲು ಮಹಾಮಂಡಳವು ನಂದಿನಿ ಉತ್ಪನ್ನಗಳನ್ನು ಜನರಿಗೆ ತಲುಪಿಸಿ, ಇನ್ನಷ್ಟು ಹತ್ತಿರವಾಗಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ವಹಿವಾಟು ವಿಸ್ತರಣೆಗೆ ನಂದಿನಿ ಶಾಪಿಗಳನ್ನು ಹೆಚ್ಚಿಸುತ್ತಿದೆ.</p><p>ಈಗಾಗಲೇ ಮದರ್ಡೇರಿ ಆರಂಭಿಸಿದ್ದ ಶಾಪಿಗಳಿಗೆ ಕೆಎಂಎಫ್ ಹೊಸ ರೂಪ ನೀಡಿ ಗ್ರಾಹಕಸ್ನೇಹಿಯಾಗಿಸುವ ಜತೆಗೆ ಹೊಸದಾಗಿ ಶಾಪಿಗಳನ್ನು ತೆರೆಯಲು ಜಾಗಗಳನ್ನು ಗುರುತಿಸುತ್ತಿದೆ.</p><p>‘ಗೋವಿನಿಂದ ಗ್ರಾಹಕರವರೆಗೆ’ ಎನ್ನುವ ಘೋಷವಾಕ್ಯ, ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಬಗೆಬಗೆಯ ಉತ್ಪನ್ನಗಳು ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಜತೆಗೆ ಜನರಿಗೆ ಉದ್ಯೋಗ ನೀಡುವುದಕ್ಕೂ ಒತ್ತು ನೀಡುತ್ತಿದೆ.</p><p>ನಂದಿನಿ ಉತ್ಪನ್ನಗಳನ್ನು ಮೊದಲು ಬಲ್ಕ್ ವೆಂಡಿಂಗ್ ಬೂತ್ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ನಂತರ ಅವುಗಳಿಗೆ ಪಾರ್ಲರ್ಗಳ ರೂಪ ನೀಡಲಾಯಿತು. ಬಳಿಕ ಪ್ರಾಂಚೈಸಿ ನೀಡಿ ಮಾರಾಟವನ್ನು ವಿಸ್ತರಣೆ ಮಾಡಲಾಯಿತು.</p><p>ಹೊಸ ಕಾಲಘಟ್ಟಕ್ಕೆ ಅನುಗುಣವಾಗಿ ಶಾಪಿಗಳನ್ನು ಶುರು ಮಾಡಿ ಅವುಗಳನ್ನು ಜನಾಕರ್ಷಕ ಕೇಂದ್ರಗಳಾಗಿ ರೂಪಿಸಲಾಗಿದೆ. ಕೆಲವು ಕಡೆ ಪಾರ್ಲರ್ಗಳೇ ಶಾಪಿಗಳ ರೂಪ ಪಡೆದುಕೊಂಡರೆ, ಹಲವು ಕಡೆ ಹೊಸದಾಗಿ ಶಾಪಿಗಳನ್ನು ಆರಂಭಿಸಲು ಕೆಎಂಎಫ್ ಅನುಮತಿ ನೀಡುತ್ತಿದೆ.</p><p>ನಗರದಲ್ಲಿ ಬಮೂಲ್ ಜತೆಗೆ ಕೆಎಂಎಫ್ನ ಮದರ್ಡೇರಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ತುಮಕೂರು ಹಾಲು ಒಕ್ಕೂಟಗಳು ವಹಿವಾಟು ನಡೆಸುತ್ತಿವೆ. ಆರು ಘಟಕಗಳು ಪಾರ್ಲರ್, ಪ್ರಾಂಚೈಸಿ ಘಟಕಗಳನ್ನು ಹೊಂದಿವೆ. ಆದರೆ 130 ಶಾಪಿಗಳನ್ನು ಮಾತ್ರ ಮದರ್ಡೇರಿ ನಿರ್ವಹಣೆ ಮಾಡುತ್ತಿದೆ.</p><p><strong>ಹೇಗಿವೆ ಶಾಪಿಗಳು?</strong></p><p>ನಗರದ ವಿಲ್ಸನ್ ಗಾರ್ಡನ್, ಎಂ.ಜಿ. ರಸ್ತೆ, ಹೆಬ್ಬಾಳ, ರಾಜಾಜಿನಗರ ಸೇರಿದಂತೆ ಹಲವು ಭಾಗಗಳಲ್ಲಿ ನಂದಿನಿ ಶಾಪಿಗಳಿವೆ. ವಿಶಾಲವಾದ ಜಾಗ ಇರುವ ಕಡೆಗಳಲ್ಲಿ ಪಾರ್ಕಿಂಗ್ ಸೇರಿ ಅಗತ್ಯ ಸೌಲಭ್ಯಗಳನ್ನು ಶಾಪಿಗಳ ಆವರಣದಲ್ಲಿಯೇ ನೀಡಲಾಗಿದೆ.</p><p>ಸಣ್ಣ ಜಾಗ ಇರುವ ಕಡೆ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಡೀ ಮಳಿಗೆ ಗ್ರಾಹಕರನ್ನು ಆಕರ್ಷಿಸುವ ರೀತಿ ಅಂದಗಾಣಿಸುವಂತೆ ರೂಪಿಸಲಾಗುತ್ತದೆ. ನಂದಿನಿ ಉತ್ಪನ್ನಗಳ ಚಿತ್ರಗಳು ಶಾಪಿಯಲ್ಲಿ ಗಮನಸೆಳೆಯಲಿವೆ. ಶಾಪಿಯ ಒಳ ಹೊಕ್ಕರೆ ಮಾಲ್ ರೀತಿಯಲ್ಲಿಯೇ ಕಾಣುತ್ತದೆ.</p><p>ಕೆಲವು ಪ್ರದೇಶಗಳಲ್ಲಿ ದಿನಕ್ಕೆ ಒಂದು ಶಾಪಿಯಲ್ಲಿ ₹1.50 ಲಕ್ಷದವರೆಗೂ, ಕೆಲವೆಡೆ ₹50 ಸಾವಿರಕ್ಕೂ ಅಧಿಕ ವಹಿವಾಟು ನಡೆಯುತ್ತದೆ. ನಂದಿನಿ ಶಾಪಿ ಆರಂಭಕ್ಕೆ ₹5 ಲಕ್ಷದಿಂದ ₹7 ಲಕ್ಷದವರೆಗೂ ಸಹಾಯಧನವನ್ನು ಕೆಎಂಎಫ್ ನೀಡಲಿದೆ.</p><p><strong>ಹೊಸ ಶಾಪಿ: </strong>ಈಗಾಗಲೇ ಇರುವ ಶಾಪಿಗಳ ನಿರ್ವಹಣೆ ಹಾಗೂ ಮಾರಾಟಕ್ಕೆ ಒತ್ತು ನೀಡುವ ಜತೆಗೆ ಹೊಸದಾಗಿ ಈ ವರ್ಷದಲ್ಲಿಯೇ 70 ಶಾಪಿಗಳನ್ನು ತೆರೆದು, ಒಟ್ಟು 200ರ ಗಡಿ ತಲುಪುವ ಗುರಿಯನ್ನು ಕೆಎಂಎಫ್ ಹೊಂದಿದೆ. ಇವುಗಳಿಗೆ ಮಿನಿ ಮಾಲ್ಗಳ ರೂಪ ನೀಡುವ ಉದ್ದೇಶ ಹೊಂದಲಾಗಿದೆ.</p><p>ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಸಿಎ ನಿವೇಶನ ಇಲ್ಲವೇ ಸ್ಥಳೀಯವಾಗಿ ಲಭ್ಯ ಇರುವ ಜಾಗವನ್ನು ನಂದಿನಿ ಶಾಪಿಗೆ ನೀಡುವಂತೆ ಕೋರಲಾಗಿದೆ.</p><p>‘ನಂದಿನಿ ಉತ್ಪನ್ನಗಳ ಮೇಲೆ ಜನರಿಗೆ ವಿಶ್ವಾಸವಿದೆ. ಗ್ರಾಹಕಸ್ನೇಹಿ ಶಾಪಿಗಳೊಂದಿಗೆ ಇನ್ನಷ್ಟು ಜನರನ್ನು ಆಕರ್ಷಿಸಲು ಕೆಎಂಎಫ್ ಪ್ರಯತ್ನಿಸುತ್ತಿದೆ. ಈ ವರ್ಷದಲ್ಲಿ ಹೊಸ ಶಾಪಿಗಳನ್ನು ಆರಂಭಿಸಲು ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ’ ಎಂದು ಮಾರುಕಟ್ಟೆ ನಿರ್ದೇಶಕ ಎಂ.ಎಸ್. ಸತೀಶ್ ಕುಮಾರ್ ತಿಳಿಸಿದರು.</p><p><strong>ಬ್ರಾಂಡ್ ವಿಸ್ತರಣೆಗೆ ಒತ್ತು:</strong> ನಂದಿನಿ ಉತ್ಪನ್ನಗಳನ್ನು 53 ವರ್ಷದಿಂದ ತಲುಪಿಸುವ ಮೂಲಕ ಕೆಎಂಎಫ್ ಜನರಿಗೆ ಹತ್ತಿರವಾಗಿದೆ. ಮೊದಲೆಲ್ಲ ಹಾಲು, ಮೊಸರು, ತುಪ್ಪದಂತಹ ಉತ್ಪನ್ನಗಳು ಮಾತ್ರ ಸಿಗುತ್ತಿದ್ದವು. ಒಂದು ದಶಕದ ಈಚೆಗೆ ಉತ್ಪನ್ನಗಳ ಸಂಖ್ಯೆ 200ರ ಗಡಿ ತಲುಪಿದೆ. ಹೊರ ರಾಜ್ಯ, ದೇಶಗಳಿಗೂ ಸೇವೆ ವಿಸ್ತರಿಸಿದೆ.</p><p>ಹಾಲಿನ ಪುಡಿ, ಮೈಸೂರು ಪಾಕ್, ಕೇಕ್ಗಳು, ಐಸ್ಕ್ರೀಂಗಳ ಸಹಿತ ವಿವಿಧ ಸ್ವಾದದ ಉತ್ಪನ್ನಗಳಿಂದ ‘ನಂದಿನಿ’ ಜನರಿಗೆ ತಲುಪಿ ಸಹಕಾರ ವಲಯದ ಪ್ರಮುಖ ಬ್ರಾಂಡ್ ಆಗಿ ಹೊರಹೊಮ್ಮಿದೆ.</p><p>‘ನಂದಿನಿ ಉತ್ಪನ್ನಗಳು ನವದೆಹಲಿ, ಮುಂಬೈ, ಚೆನ್ನೈ, ಪುಣೆ ಸಹಿತ ಪ್ರಮುಖ ನಗರಗಳಲ್ಲದೇ, ಹೊರ ದೇಶಗಳಲ್ಲೂ ಲಭ್ಯವಾಗುವಂತೆ ನೋಡಿಕೊಂಡಿದ್ದೇವೆ. ಈ ಬ್ರ್ಯಾಂಡ್ ಅನ್ನು ಜನರಿಗೆ ಸುಲಭವಾಗಿ ತಲುಪಿಸಲು, ಜನ ನಂದಿನಿ ಮಳಿಗೆಗಳಿಗೆ ಬರಲೆಂದೇ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ’ ಎಂದು ಮಾರುಕಟ್ಟೆ ನಿರ್ದೇಶಕ ಎಂ.ರಘುನಂದನ್ ಹೇಳಿದರು.</p>.<p><strong>ಇನ್ನಷ್ಟು ‘ಕೆಫೆ ಮೂ’</strong></p><p>ಶಾಪಿಗಳಿಗಿಂತಲೂ ಹೈಟೆಕ್ ಆಗಿರುವ ನಂದಿನಿ ಕೆಫೆ ಮೂ ಆರಂಭಕ್ಕೂ ಕೆಎಂಎಫ್ ಒತ್ತುನೀಡಿದೆ.</p><p>ರೇವಾ ವಿಶ್ವವಿದ್ಯಾಲಯ, ಚಾಲುಕ್ಯ ವಿಶ್ವವಿದ್ಯಾಲಯ, ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಕೆಫೆ ಮೂ ಇದೆ. ಇನ್ನೂ ಎರಡು ಕಡೆ ಸದ್ಯದಲ್ಲೇ ಕೆಫೆ ಮೂ ಆರಂಭಿಸಲು ತಯಾರಿಯೂ ನಡೆಯುತ್ತಿದೆ.</p><p>‘ಇಲ್ಲಿ ನಂದಿನಿ ಉತ್ಪನ್ನಗಳ ಖರೀದಿ ಮಾತ್ರವಲ್ಲದೇ ಕುಳಿತು ಸೇವಿಸುವ ವ್ಯವಸ್ಥೆಯೂ ಇರಲಿದೆ. ಕಾಫಿ, ಪಿಜ್ಜಾ, ಸ್ಯಾಂಡ್ವಿಚ್, ಐಸ್ಕ್ರೀಂ ಸ್ಕೂಪ್ ಕೂಡ ಸಿಗಲಿದೆ. ಕೇರಳದಲ್ಲಿ ‘ಕೆಫೆ ಮೂ’ಗೆ ಬೇಡಿಕೆ ಇದ್ದು, ಹಲವು ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗದೇ ಇರುವುದರಿಂದ ನಿಧಾನವಾಗಿ ವಿಸ್ತರಿಸುತ್ತಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.</p>.<div><blockquote>ಈಗಿರುವ ನಂದಿನಿ ಶಾಪಿಗಳ ಆಧುನೀಕರಣಕ್ಕೂ ಒತ್ತು ನೀಡಿದ್ದೇವೆ. ಬಿಡಿಎ, ಜಿಬಿಎ ಜಾಗ ನೀಡಿದರೆ ಇನ್ನಷ್ಟು ಕಡೆ ಶಾಪಿಗಳು ಬರಲಿವೆ. ಜಾಗ ನೀಡುವಂತೆ ಮುಖ್ಯಮಂತ್ರಿ ಕೂಡ ಸೂಚನೆ ನೀಡಿದ್ದಾರೆ.</blockquote><span class="attribution">– ಬಿ.ಶಿವಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>