<p><strong>ಬೆಂಗಳೂರು</strong>: ದೀರ್ಘ ಕಾಲದಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಬಡ್ಡಿ ಮತ್ತು ದಂಡ ರಹಿತವಾಗಿ ಹಿಂಬಾಕಿ ಪಾವತಿಗೆ ಅವಕಾಶ ಕಲ್ಪಿಸಲು ‘ಒಂದು ಬಾರಿ ಪರಿಹಾರ ಯೋಜನೆ’(ಒಟಿಎಸ್) ಜಾರಿಗೊಳಿಸಲು ಜಲಮಂಡಳಿ ಸಿದ್ಧತೆ ನಡೆಸಿದೆ. ಮೇ ತಿಂಗಳಿನಿಂದಲೇ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.</p>.<p>‘ಜಲಮಂಡಳಿಯ ನಿರ್ವಹಣಾ ವೆಚ್ಚ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿ ಗ್ರಾಹಕರಿಂದ ₹ 701.70 ಕೋಟಿ ನೀರಿನ ಬಿಲ್ ಬಾಕಿ ಇದೆ. ಬಾಕಿ ಬಿಲ್ ಸಂಗ್ರಹಿಸಲು ಒಟಿಎಸ್ ವ್ಯವಸ್ಥೆ ಜಾರಿಗೆ ಮಂಡಳಿ ಮುಂದಾಗಿದೆ. ಸರ್ಕಾರದಿಂದ ಅನುಮತಿ ದೊರೆತರೆ ಮೇ ತಿಂಗಳಿನಿಂದಲೇ ಜಾರಿಗೊಳಿಸುವ ಸಾಧ್ಯತೆ ಇದೆ. ಯೋಜನೆ ಜಾರಿಯಾದಾಗಿನಿಂದ ಮೂರು ತಿಂಗಳವರೆಗೆ ಈ ಯೋಜನೆಯನ್ನು ಮುಂದವರಿಸಲಾಗುತ್ತದೆ’ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.</p>.<p>ಒಳಚರಂಡಿ ಮತ್ತು ನೀರು ಸರಬರಾಜು ಶುಲ್ಕ ಜಲಮಂಡಳಿಗೆ ಪ್ರಮುಖ ಆದಾಯದ ಮೂಲವಾಗಿದೆ. ಹೀಗಾಗಿ ಬಾಕಿ ಶುಲ್ಕ ಸಂಗ್ರಹಣೆಗೆ ಒಟಿಎಸ್ ಜಾರಿಗೊಳಿಸಲು ಜಲಮಂಡಳಿ ಉದ್ದೇಶಿಸಿದೆ. ಈ ಯೋಜನೆ ಜಾರಿಯಾದರೆ ಗ್ರಾಹಕರು ಈವರೆಗೆ ಬಾಕಿ ಉಳಿಸಿಕೊಂಡಿರುವ ಶುಲ್ಕಕ್ಕೆ ಹಾಕಿರುವ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಜಲಮಂಡಳಿಯ ನಿಯಮಗಳ ಉಲ್ಲಂಘನೆಗಾಗಿ ವಿಧಿಸಿದ್ದ ದಂಡವನ್ನು ಮನ್ನಾ ಮಾಡಿ, ಬಾಕಿ ಶುಲ್ಕವನ್ನಷ್ಟೇ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ನಗರದಲ್ಲಿ 11.2 ಲಕ್ಷ ನೀರಿನ ಸಂಪರ್ಕಗಳಿವೆ. ಇದರಲ್ಲಿ 2 ಲಕ್ಷದಷ್ಟು ಸರ್ಕಾರಿ ಇಲಾಖೆಗಳು, ಕೈಗಾರಿಕೆ, ವಾಣಿಜ್ಯ ಕಟ್ಟಡಗಳು, 9 ಲಕ್ಷ ಮನೆಗಳಿವೆ. ಪ್ರತಿ ತಿಂಗಳು ₹119 ಕೋಟಿ ಆದಾಯ ಸಂಗ್ರಹವಾದರೂ, ತಿಂಗಳಿಗೆ ₹170 ಕೋಟಿ ವೆಚ್ಚವಾಗುತ್ತದೆ. ಪ್ರತಿ ತಿಂಗಳು ₹51 ಕೋಟಿ ನಷ್ಟವಾಗುತ್ತಿದೆ ಎನ್ನುತ್ತಾರೆ ಮಂಡಳಿಯ ಅಧಿಕಾರಿಗಳು.</p>.<p>ಇತ್ತೀಚೆಗಷ್ಟೇ ಬಿಬಿಎಂಪಿ ಅಧೀನದಲ್ಲಿದ್ದ1,145 ಶುದ್ಧ ನೀರಿನ ಘಟಕಗಳು ಮತ್ತು ಸುಮಾರು 4,000ಕ್ಕೂ ಹೆಚ್ಚು ಕೊಳವೆ ಬಾವಿಗಳ ನಿರ್ವಹಣೆಯೂ ಜಲಮಂಡಳಿಯ ಹೆಗಲೇರಿದೆ. ಇದರಿಂದ ನಿರ್ವಹಣಾ ವೆಚ್ಚ ಮತ್ತಷ್ಟು ಹೆಚ್ಚಾಗುತ್ತಿದೆ.</p>.<div><blockquote>ಬಾಕಿ ಶುಲ್ಕ ಸಂಗ್ರಹಕ್ಕಾಗಿ ಒಟಿಎಸ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸರ್ಕಾರದ ಅನುಮತಿ ದೊರೆತರೆ ಮೇ ತಿಂಗಳಿನಿಂದ ಜಾರಿಗೊಳಿಸುತ್ತೇವೆ.</blockquote><span class="attribution">ರಾಮ್ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ</span></div>.<p>ಸದ್ಯ ಜಲಮಂಡಳಿ ತಿಂಗಳಿಗೆ ₹59 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಒಂದೊಮ್ಮೆ ಕಾವೇರಿ 5ನೇ ಹಂತದ ಯೋಜನೆ ಪೂರ್ಣ ಅನುಷ್ಠಾನಗೊಂಡರೆ ಈ ಬಿಲ್ ಮೊತ್ತ ₹ 86 ಕೋಟಿ ದಾಟಬಹುದು. ಇದರಿಂದ ತಿಂಗಳ ನಿರ್ವಹಣಾ ವೆಚ್ಚ₹170 ಕೋಟಿಯಿಂದ ₹210 ಕೋಟಿ ಮೀರಲಿದೆ. ನೀರಿನ ಬಿಲ್ ವಸೂಲಿಯಾಗದ ಕಾರಣ, ಜಲಮಂಡಳಿ ₹566 ಕೋಟಿಗೂ ಹೆಚ್ಚು ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ. ಇದೆಲ್ಲವನ್ನೂ ನಿಭಾಯಿಸಲು ಒಟಿಎಸ್ ಮೂಲಕ ಬಾಕಿ ಶುಲ್ಕ ಸಂಗ್ರಹಕ್ಕೆ ಜಲಮಂಡಳಿ ಮುಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದೀರ್ಘ ಕಾಲದಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಬಡ್ಡಿ ಮತ್ತು ದಂಡ ರಹಿತವಾಗಿ ಹಿಂಬಾಕಿ ಪಾವತಿಗೆ ಅವಕಾಶ ಕಲ್ಪಿಸಲು ‘ಒಂದು ಬಾರಿ ಪರಿಹಾರ ಯೋಜನೆ’(ಒಟಿಎಸ್) ಜಾರಿಗೊಳಿಸಲು ಜಲಮಂಡಳಿ ಸಿದ್ಧತೆ ನಡೆಸಿದೆ. ಮೇ ತಿಂಗಳಿನಿಂದಲೇ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.</p>.<p>‘ಜಲಮಂಡಳಿಯ ನಿರ್ವಹಣಾ ವೆಚ್ಚ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿ ಗ್ರಾಹಕರಿಂದ ₹ 701.70 ಕೋಟಿ ನೀರಿನ ಬಿಲ್ ಬಾಕಿ ಇದೆ. ಬಾಕಿ ಬಿಲ್ ಸಂಗ್ರಹಿಸಲು ಒಟಿಎಸ್ ವ್ಯವಸ್ಥೆ ಜಾರಿಗೆ ಮಂಡಳಿ ಮುಂದಾಗಿದೆ. ಸರ್ಕಾರದಿಂದ ಅನುಮತಿ ದೊರೆತರೆ ಮೇ ತಿಂಗಳಿನಿಂದಲೇ ಜಾರಿಗೊಳಿಸುವ ಸಾಧ್ಯತೆ ಇದೆ. ಯೋಜನೆ ಜಾರಿಯಾದಾಗಿನಿಂದ ಮೂರು ತಿಂಗಳವರೆಗೆ ಈ ಯೋಜನೆಯನ್ನು ಮುಂದವರಿಸಲಾಗುತ್ತದೆ’ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.</p>.<p>ಒಳಚರಂಡಿ ಮತ್ತು ನೀರು ಸರಬರಾಜು ಶುಲ್ಕ ಜಲಮಂಡಳಿಗೆ ಪ್ರಮುಖ ಆದಾಯದ ಮೂಲವಾಗಿದೆ. ಹೀಗಾಗಿ ಬಾಕಿ ಶುಲ್ಕ ಸಂಗ್ರಹಣೆಗೆ ಒಟಿಎಸ್ ಜಾರಿಗೊಳಿಸಲು ಜಲಮಂಡಳಿ ಉದ್ದೇಶಿಸಿದೆ. ಈ ಯೋಜನೆ ಜಾರಿಯಾದರೆ ಗ್ರಾಹಕರು ಈವರೆಗೆ ಬಾಕಿ ಉಳಿಸಿಕೊಂಡಿರುವ ಶುಲ್ಕಕ್ಕೆ ಹಾಕಿರುವ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಜಲಮಂಡಳಿಯ ನಿಯಮಗಳ ಉಲ್ಲಂಘನೆಗಾಗಿ ವಿಧಿಸಿದ್ದ ದಂಡವನ್ನು ಮನ್ನಾ ಮಾಡಿ, ಬಾಕಿ ಶುಲ್ಕವನ್ನಷ್ಟೇ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ನಗರದಲ್ಲಿ 11.2 ಲಕ್ಷ ನೀರಿನ ಸಂಪರ್ಕಗಳಿವೆ. ಇದರಲ್ಲಿ 2 ಲಕ್ಷದಷ್ಟು ಸರ್ಕಾರಿ ಇಲಾಖೆಗಳು, ಕೈಗಾರಿಕೆ, ವಾಣಿಜ್ಯ ಕಟ್ಟಡಗಳು, 9 ಲಕ್ಷ ಮನೆಗಳಿವೆ. ಪ್ರತಿ ತಿಂಗಳು ₹119 ಕೋಟಿ ಆದಾಯ ಸಂಗ್ರಹವಾದರೂ, ತಿಂಗಳಿಗೆ ₹170 ಕೋಟಿ ವೆಚ್ಚವಾಗುತ್ತದೆ. ಪ್ರತಿ ತಿಂಗಳು ₹51 ಕೋಟಿ ನಷ್ಟವಾಗುತ್ತಿದೆ ಎನ್ನುತ್ತಾರೆ ಮಂಡಳಿಯ ಅಧಿಕಾರಿಗಳು.</p>.<p>ಇತ್ತೀಚೆಗಷ್ಟೇ ಬಿಬಿಎಂಪಿ ಅಧೀನದಲ್ಲಿದ್ದ1,145 ಶುದ್ಧ ನೀರಿನ ಘಟಕಗಳು ಮತ್ತು ಸುಮಾರು 4,000ಕ್ಕೂ ಹೆಚ್ಚು ಕೊಳವೆ ಬಾವಿಗಳ ನಿರ್ವಹಣೆಯೂ ಜಲಮಂಡಳಿಯ ಹೆಗಲೇರಿದೆ. ಇದರಿಂದ ನಿರ್ವಹಣಾ ವೆಚ್ಚ ಮತ್ತಷ್ಟು ಹೆಚ್ಚಾಗುತ್ತಿದೆ.</p>.<div><blockquote>ಬಾಕಿ ಶುಲ್ಕ ಸಂಗ್ರಹಕ್ಕಾಗಿ ಒಟಿಎಸ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸರ್ಕಾರದ ಅನುಮತಿ ದೊರೆತರೆ ಮೇ ತಿಂಗಳಿನಿಂದ ಜಾರಿಗೊಳಿಸುತ್ತೇವೆ.</blockquote><span class="attribution">ರಾಮ್ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ</span></div>.<p>ಸದ್ಯ ಜಲಮಂಡಳಿ ತಿಂಗಳಿಗೆ ₹59 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಒಂದೊಮ್ಮೆ ಕಾವೇರಿ 5ನೇ ಹಂತದ ಯೋಜನೆ ಪೂರ್ಣ ಅನುಷ್ಠಾನಗೊಂಡರೆ ಈ ಬಿಲ್ ಮೊತ್ತ ₹ 86 ಕೋಟಿ ದಾಟಬಹುದು. ಇದರಿಂದ ತಿಂಗಳ ನಿರ್ವಹಣಾ ವೆಚ್ಚ₹170 ಕೋಟಿಯಿಂದ ₹210 ಕೋಟಿ ಮೀರಲಿದೆ. ನೀರಿನ ಬಿಲ್ ವಸೂಲಿಯಾಗದ ಕಾರಣ, ಜಲಮಂಡಳಿ ₹566 ಕೋಟಿಗೂ ಹೆಚ್ಚು ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ. ಇದೆಲ್ಲವನ್ನೂ ನಿಭಾಯಿಸಲು ಒಟಿಎಸ್ ಮೂಲಕ ಬಾಕಿ ಶುಲ್ಕ ಸಂಗ್ರಹಕ್ಕೆ ಜಲಮಂಡಳಿ ಮುಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>