<p><strong>ಬೆಂಗಳೂರು:</strong> ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸಿನಂತೆ ದೊರೆಯಬೇಕಿದ್ದ ಅನುದಾನದ ಪೈಕಿ ಶೇ 38.30ರಷ್ಟನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಹೇಳಿದೆ.</p>.<p>ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಈ ವರದಿಯನ್ನು ಮಂಡಿಸಲಾಯಿತು. 2014–15ರಿಂದ 2018–19ರ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ₹44,691.04 ಕೋಟಿ ಅನುದಾನವನ್ನು ನೀಡಬೇಕಿತ್ತು. ಆದರೆ, ವಾಸ್ತವಿಕವಾಗಿ ₹17,119.02 ಕೋಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದೇ ಅವಧಿಯಲ್ಲಿ ₹12,007.65 ಕೋಟಿಯನ್ನು ಅಂಗಸಂಸ್ಥೆಗಳ ಸಾಲ ಪಾವತಿಗಾಗಿ ಕಡಿತ ಮಾಡಲಾಗಿತ್ತು. ಈ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ವರ್ಗಾವಣೆಯಲ್ಲಿ ₹ 15,564 ಕೋಟಿಯಷ್ಟು ಕೊರತೆ ಇತ್ತು ಎಂಬ ಉಲ್ಲೇಖ ವರದಿಯಲ್ಲಿದೆ.</p>.<p>ನಾಲ್ಕನೇ ರಾಜ್ಯ ಹಣಕಾಸು ಆಯೋಗದ ರಚನೆಯಲ್ಲಿ ವಿಳಂಬವಾಗಿದ್ದ ಕಾರಣದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ 2016–17ರಲ್ಲಿ ₹ 443.68 ಕೋಟಿ, 2017–18ರಲ್ಲಿ ₹ 936.07 ಕೋಟಿ ಮತ್ತು 2018–19ರಲ್ಲಿ ₹1,036.03 ಕೋಟಿಯಷ್ಟು ಅನುದಾನದ ನಷ್ಟವಾಗಿದೆ. 2014–15ರಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ಶೇ 53ರಷ್ಟು ಬಿಡುಗಡೆಯಾಗಿದ್ದರೆ, 2017–18ರಲ್ಲಿ ಈ ಮೊತ್ತ ಶೇ 20ರಷ್ಟಿತ್ತು ಎಂಬುದು ಬಹಿರಂಗವಾಗಿದೆ.</p>.<p>2019ರ ಮಾರ್ಚ್ ಅಂತ್ಯದಲ್ಲಿ 271 ನಗರ ಸ್ಥಳೀಯ ಸಂಸ್ಥೆಗಳಲ್ಲಿ ₹ 503.09 ಕೋಟಿ ಆಸ್ತಿ ತೆರಿಗೆ ಬಾಕಿ ಇತ್ತು. 43 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಣಿಜ್ಯ ಸಂಸ್ಥೆಗಳಿಂದ ₹ 21.39 ಕೋಟಿ ಕಟ್ಟಡ ಬಾಡಿಗೆ ಬಾಕಿ ಇತ್ತು. 2013–14ರಲ್ಲಿ ನೀರನ ಕರದ ಬಾಕಿ ₹ 98.75 ಕೋಟಿ ಇತ್ತು. 2018–19ರ ಅಂತ್ಯದಲ್ಲಿ ಅದು ₹ 209.15 ಕೋಟಿಗೆ ಹೆಚ್ಚಿತ್ತು. ಇದು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಆದಾಯವನ್ನು ವೃದ್ಧಿಸಿಕೊಳ್ಳಲು ಪರಿಣಾಮಕಾರಿ ಪ್ರಯತ್ನ ನಡೆಸಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಸಿಎಜಿ ಹೇಳಿದೆ.</p>.<p><strong>ಶೇ 31ರಷ್ಟು ಹುದ್ದೆ ಖಾಲಿ:</strong> ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ 56,493 ಮಂಜೂರಾದ ಹುದ್ದೆಗಳಿದ್ದವು. ಈ ಪೈಕಿ ಶೇ 31ರಷ್ಟು (17,480) ಖಾಲಿ ಇದ್ದವು. 19,105 ಹುದ್ದೆಗಳನ್ನು ನೇಮಕಾತಿಯಿಂದ ತುಂಬಿದ್ದರೆ, 1,330 ಹುದ್ದೆಗಳನ್ನು ನಿಯೋಜನೆಯಿಂದ ಭರ್ತಿ ಮಾಡಲಾಗಿತ್ತು. 18,578 ಅಧಿಕಾರಿಗಳು, ಸಿಬ್ಬಂದಿ ಹೊರ ಗುತ್ತಿಗೆ ಮತ್ತು ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ವರದಿಯಲ್ಲಿದೆ.</p>.<p><strong>ದುರ್ಬಲ ಮೇಯರ್</strong><br />ರಾಜ್ಯದಲ್ಲಿ ಮಹಾನಗರ ಪಾಲಿಕೆಗಳ ಮೇಯರ್ಗಳ ಅವಧಿ ಒಂದು ವರ್ಷ. ಇತರ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಅವಧಿ 30 ತಿಂಗಳು ಇದೆ. ದೇಶದ 16 ನಗರಗಳಲ್ಲಿ ಮೇಯರ್ಗಳ ಅಧಿಕಾರದ ಅವಧಿ 5 ವರ್ಷ. ಈ ನಗರಗಳಿಗೆ ಹೋಲಿಸಿದರೆ ಕರ್ನಾಟಕದ ಮೇಯರ್ಗಳು ದುರ್ಬಲರಾಗಿದ್ದಾರೆ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.</p>.<p>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಯಾವುದೇ ಮಹಾನಗರ ಪಾಲಿಕೆಗಳು ವಾರ್ಡ್ ಸಮಿತಿಗಳನ್ನು ರಚಿಸಿರಲಿಲ್ಲ. ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಇದು ಸೋಲಿಸಿತು ಎಂದು ವರದಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸಿನಂತೆ ದೊರೆಯಬೇಕಿದ್ದ ಅನುದಾನದ ಪೈಕಿ ಶೇ 38.30ರಷ್ಟನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಹೇಳಿದೆ.</p>.<p>ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಈ ವರದಿಯನ್ನು ಮಂಡಿಸಲಾಯಿತು. 2014–15ರಿಂದ 2018–19ರ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ₹44,691.04 ಕೋಟಿ ಅನುದಾನವನ್ನು ನೀಡಬೇಕಿತ್ತು. ಆದರೆ, ವಾಸ್ತವಿಕವಾಗಿ ₹17,119.02 ಕೋಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದೇ ಅವಧಿಯಲ್ಲಿ ₹12,007.65 ಕೋಟಿಯನ್ನು ಅಂಗಸಂಸ್ಥೆಗಳ ಸಾಲ ಪಾವತಿಗಾಗಿ ಕಡಿತ ಮಾಡಲಾಗಿತ್ತು. ಈ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ವರ್ಗಾವಣೆಯಲ್ಲಿ ₹ 15,564 ಕೋಟಿಯಷ್ಟು ಕೊರತೆ ಇತ್ತು ಎಂಬ ಉಲ್ಲೇಖ ವರದಿಯಲ್ಲಿದೆ.</p>.<p>ನಾಲ್ಕನೇ ರಾಜ್ಯ ಹಣಕಾಸು ಆಯೋಗದ ರಚನೆಯಲ್ಲಿ ವಿಳಂಬವಾಗಿದ್ದ ಕಾರಣದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ 2016–17ರಲ್ಲಿ ₹ 443.68 ಕೋಟಿ, 2017–18ರಲ್ಲಿ ₹ 936.07 ಕೋಟಿ ಮತ್ತು 2018–19ರಲ್ಲಿ ₹1,036.03 ಕೋಟಿಯಷ್ಟು ಅನುದಾನದ ನಷ್ಟವಾಗಿದೆ. 2014–15ರಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ಶೇ 53ರಷ್ಟು ಬಿಡುಗಡೆಯಾಗಿದ್ದರೆ, 2017–18ರಲ್ಲಿ ಈ ಮೊತ್ತ ಶೇ 20ರಷ್ಟಿತ್ತು ಎಂಬುದು ಬಹಿರಂಗವಾಗಿದೆ.</p>.<p>2019ರ ಮಾರ್ಚ್ ಅಂತ್ಯದಲ್ಲಿ 271 ನಗರ ಸ್ಥಳೀಯ ಸಂಸ್ಥೆಗಳಲ್ಲಿ ₹ 503.09 ಕೋಟಿ ಆಸ್ತಿ ತೆರಿಗೆ ಬಾಕಿ ಇತ್ತು. 43 ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಣಿಜ್ಯ ಸಂಸ್ಥೆಗಳಿಂದ ₹ 21.39 ಕೋಟಿ ಕಟ್ಟಡ ಬಾಡಿಗೆ ಬಾಕಿ ಇತ್ತು. 2013–14ರಲ್ಲಿ ನೀರನ ಕರದ ಬಾಕಿ ₹ 98.75 ಕೋಟಿ ಇತ್ತು. 2018–19ರ ಅಂತ್ಯದಲ್ಲಿ ಅದು ₹ 209.15 ಕೋಟಿಗೆ ಹೆಚ್ಚಿತ್ತು. ಇದು ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಆದಾಯವನ್ನು ವೃದ್ಧಿಸಿಕೊಳ್ಳಲು ಪರಿಣಾಮಕಾರಿ ಪ್ರಯತ್ನ ನಡೆಸಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಸಿಎಜಿ ಹೇಳಿದೆ.</p>.<p><strong>ಶೇ 31ರಷ್ಟು ಹುದ್ದೆ ಖಾಲಿ:</strong> ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ 56,493 ಮಂಜೂರಾದ ಹುದ್ದೆಗಳಿದ್ದವು. ಈ ಪೈಕಿ ಶೇ 31ರಷ್ಟು (17,480) ಖಾಲಿ ಇದ್ದವು. 19,105 ಹುದ್ದೆಗಳನ್ನು ನೇಮಕಾತಿಯಿಂದ ತುಂಬಿದ್ದರೆ, 1,330 ಹುದ್ದೆಗಳನ್ನು ನಿಯೋಜನೆಯಿಂದ ಭರ್ತಿ ಮಾಡಲಾಗಿತ್ತು. 18,578 ಅಧಿಕಾರಿಗಳು, ಸಿಬ್ಬಂದಿ ಹೊರ ಗುತ್ತಿಗೆ ಮತ್ತು ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ವರದಿಯಲ್ಲಿದೆ.</p>.<p><strong>ದುರ್ಬಲ ಮೇಯರ್</strong><br />ರಾಜ್ಯದಲ್ಲಿ ಮಹಾನಗರ ಪಾಲಿಕೆಗಳ ಮೇಯರ್ಗಳ ಅವಧಿ ಒಂದು ವರ್ಷ. ಇತರ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಅವಧಿ 30 ತಿಂಗಳು ಇದೆ. ದೇಶದ 16 ನಗರಗಳಲ್ಲಿ ಮೇಯರ್ಗಳ ಅಧಿಕಾರದ ಅವಧಿ 5 ವರ್ಷ. ಈ ನಗರಗಳಿಗೆ ಹೋಲಿಸಿದರೆ ಕರ್ನಾಟಕದ ಮೇಯರ್ಗಳು ದುರ್ಬಲರಾಗಿದ್ದಾರೆ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.</p>.<p>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಯಾವುದೇ ಮಹಾನಗರ ಪಾಲಿಕೆಗಳು ವಾರ್ಡ್ ಸಮಿತಿಗಳನ್ನು ರಚಿಸಿರಲಿಲ್ಲ. ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಇದು ಸೋಲಿಸಿತು ಎಂದು ವರದಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>