<p><strong>ಬೆಂಗಳೂರು:</strong> ‘ಭಾರತದಲ್ಲಿ ವಿವೇಕದ ಜಾಗತೀಕರಣ ಆಗಬೇಕಿತ್ತು. ಆದರೆ,ಜಾತಿಯ ಜಾಗತೀಕರಣವಾಗಿದೆ’ ಎಂದುಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.</p>.<p>ಲೇಖಕ ಮಲ್ಲಿಕಾರ್ಜುನ ಕಡಕೋಳರಚಿಸಿದ 'ಯಡ್ರಾಮಿ ಸೀಮೆ ಕಥನಗಳು' ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಭಾರತದಲ್ಲಿನ ಜಾಗತೀಕರಣ ಏಕಮುಖ ಚಲನೆ<br />ಯಾಗಿದೆ. ಸ್ಥಳೀಯತೆಯೇ ನಿಜವಾದ ತಾಯಿ ಬೇರು. ಸ್ಥಳೀಯ ಚರಿತ್ರೆ ಬಹಳ ಮುಖ್ಯ. ಇಂತಹ ಸ್ಥಳೀಯ ಸತ್ಯವನ್ನು ಅನಾವರಣಗೊಳಿಸುವಂತಹ ಕೆಲಸವನ್ನು ಕಡಕೋಳ ಅವರು ಈ ಕೃತಿಯಲ್ಲಿ ಮಾಡಿದ್ದಾರೆ’ ಎಂದರು.</p>.<p>‘ಭೀಮಾತೀರ ಎಂದರೆ ಬರೀ ಹಂತಕರ ನಾಡೆಂಬ ಹಣೆಪಟ್ಟಿ ಇದೆ. ಆದರೆ ಲೇಖಕರು ಇಲ್ಲಿ ಬೆಳದಿಂಗಳೂ ಇದೆ ಎಂಬುದನ್ನು ಮನಗಾಣಿಸುತ್ತಾರೆ’ ಎಂದು ಹೇಳಿದರು.</p>.<p>ಲೇಖಕ ಪ್ರೊ. ಬಸವರಾಜ ಸಬರದ ಮಾತನಾಡಿ, ‘ಕಡಕೋಳ ಕೃತಿಯು ಯಡ್ರಾಮಿಗೆ ಸೀಮಿತವಾಗದೇ ಹೈದರಾಬಾದ್ ಕರ್ನಾಟಕದ ಚಿತ್ರಣ ಕಟ್ಟಿಕೊಟ್ಟಿದ್ದಾರೆ’ ಎಂದರು.</p>.<p>‘ಹೈದರಾಬಾದ್ ಕರ್ನಾಟಕ ವಿಮೋಚನೆಯು ಹತ್ಯಾಕಾಂಡವಾಗಿತ್ತು. ಇದನ್ನು ಸಂಭ್ರಮಿಸುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸರ್ಕಾರಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ತಕ್ಷಣ ಅಭಿವೃದ್ಧಿಯಾಗುವುದಿಲ್ಲ. ಹೆಚ್ಚಿನ ಅನುದಾನ ನೀಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಭಾರತದಲ್ಲಿ ವಿವೇಕದ ಜಾಗತೀಕರಣ ಆಗಬೇಕಿತ್ತು. ಆದರೆ,ಜಾತಿಯ ಜಾಗತೀಕರಣವಾಗಿದೆ’ ಎಂದುಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.</p>.<p>ಲೇಖಕ ಮಲ್ಲಿಕಾರ್ಜುನ ಕಡಕೋಳರಚಿಸಿದ 'ಯಡ್ರಾಮಿ ಸೀಮೆ ಕಥನಗಳು' ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಭಾರತದಲ್ಲಿನ ಜಾಗತೀಕರಣ ಏಕಮುಖ ಚಲನೆ<br />ಯಾಗಿದೆ. ಸ್ಥಳೀಯತೆಯೇ ನಿಜವಾದ ತಾಯಿ ಬೇರು. ಸ್ಥಳೀಯ ಚರಿತ್ರೆ ಬಹಳ ಮುಖ್ಯ. ಇಂತಹ ಸ್ಥಳೀಯ ಸತ್ಯವನ್ನು ಅನಾವರಣಗೊಳಿಸುವಂತಹ ಕೆಲಸವನ್ನು ಕಡಕೋಳ ಅವರು ಈ ಕೃತಿಯಲ್ಲಿ ಮಾಡಿದ್ದಾರೆ’ ಎಂದರು.</p>.<p>‘ಭೀಮಾತೀರ ಎಂದರೆ ಬರೀ ಹಂತಕರ ನಾಡೆಂಬ ಹಣೆಪಟ್ಟಿ ಇದೆ. ಆದರೆ ಲೇಖಕರು ಇಲ್ಲಿ ಬೆಳದಿಂಗಳೂ ಇದೆ ಎಂಬುದನ್ನು ಮನಗಾಣಿಸುತ್ತಾರೆ’ ಎಂದು ಹೇಳಿದರು.</p>.<p>ಲೇಖಕ ಪ್ರೊ. ಬಸವರಾಜ ಸಬರದ ಮಾತನಾಡಿ, ‘ಕಡಕೋಳ ಕೃತಿಯು ಯಡ್ರಾಮಿಗೆ ಸೀಮಿತವಾಗದೇ ಹೈದರಾಬಾದ್ ಕರ್ನಾಟಕದ ಚಿತ್ರಣ ಕಟ್ಟಿಕೊಟ್ಟಿದ್ದಾರೆ’ ಎಂದರು.</p>.<p>‘ಹೈದರಾಬಾದ್ ಕರ್ನಾಟಕ ವಿಮೋಚನೆಯು ಹತ್ಯಾಕಾಂಡವಾಗಿತ್ತು. ಇದನ್ನು ಸಂಭ್ರಮಿಸುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸರ್ಕಾರಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ತಕ್ಷಣ ಅಭಿವೃದ್ಧಿಯಾಗುವುದಿಲ್ಲ. ಹೆಚ್ಚಿನ ಅನುದಾನ ನೀಡಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>