<p><strong>ಬೆಂಗಳೂರು</strong>: ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಾತಿಗಳಾಗಿ ವಿಂಗಡಣೆ ಮಾಡುವ ಬದಲು ಏಳು ವರ್ಗಗಳಾಗಿ ವಿಂಗಡಿಸುವುದು ಸೂಕ್ತ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಿಳಿಸಿದೆ.</p>.<p>ಆಕ್ಷೇಪಣೆಗಳ ಜತೆಗೆ ಸಲಹೆಗಳನ್ನು ಒಳಗೊಂಡ ಮನವಿ ಪತ್ರವನ್ನು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಅವರು ಆಯೋಗಕ್ಕೆ ನೀಡಿದ್ದಾರೆ. ಅತಿ ಮುಂದುವರಿದ, ಮಧ್ಯಮ ಮುಂದುವರಿದ, ಮುಂದುವರಿಯುತ್ತಿರುವ, ಮಧ್ಯಮ ಹಿಂದುಳಿದ, ಹಿಂದುಳಿದ ಹಾಗೂ ಹಿಂದುಳಿದ ವರ್ಗಗಳಿಂದ ಕೆಳಗಿರುವ ವರ್ಗಗಳಾಗಿ ವಿಂಗಡಿಸಬಹುದು ಎಂದು ತಿಳಿಸಿದ್ದಾರೆ.</p>.<p><strong>ಮಹಾಸಭಾದ ಬೇಡಿಕೆಗಳು ಏನು?</strong></p>.<p>* ಮೀಸಲಾತಿ ಸೌಲಭ್ಯ ಬಳಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಹೊಂದಿರುವ ಹಿಂದುಳಿದ ವರ್ಗದವರನ್ನು ಸೌಲಭ್ಯದಿಂದ ಹೊರಗೆ ಇಡಬೇಕು.</p>.<p>* ಆಯೋಗವು ಸಮೀಕ್ಷೆಗೆ ಪರ್ಯಾಯ ಪದ್ದತಿಗಳನ್ನು ರೂಪಿಸಿಕೊಂಡು ಹಿಂದುಳಿತ ಜಾತಿ ಇಲ್ಲವೇ ಮುಂದುವರಿದ ಜಾತಿ ಎಂದು ಪರಿಗಣಿಸುವುದು ಸೂಕ್ತ.</p>.<p>* ಬ್ರಾಹ್ಮಣ ಸಮುದಾಯದಲ್ಲೂ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ನೀಡುವ ನಿಟ್ಟಿನಲ್ಲಿ ಯೋಚಿಸಬೇಕು. </p>.<p>* ಸಮುದಾಯದ 62 ಉಪಪಂಗಡಗಳನ್ನು ಬ್ರಾಹ್ಮಣ ಎಂದೇ ಪರಿಗಣಿಸಬೇಕು.</p>.<p>* ಆಯೋಗವು ಬ್ರಾಹ್ಮಣ ಮುಸ್ಲಿಂ, ಬ್ರಾಹ್ಮಣ ಕ್ರಿಶ್ಚಿಯನ್, ವೈಶ್ಯ ಬ್ರಾಹ್ಮಣ ಎನ್ನುವ ಪಟ್ಟಿ ನೀಡಿದ್ದು, ಇದನ್ನು ತೆಗೆದು ಹಾಕಬೇಕು. ಯಾವುದೇ ವ್ಯಕ್ತಿ ಬ್ರಾಹ್ಮಣ ಇಲ್ಲವೇ ಕ್ರಿಶ್ಚಿಯನ್ ಆಗಿರಬಹುದು. ಎರಡೂ ಆಗಿರಲು ಸಾಧ್ಯವಿಲ್ಲ.</p>.<div><blockquote>ಬ್ರಾಹ್ಮಣರನ್ನು ಮುಂದುವರಿದವರು ಎಂದು ಪರಿಗಣಿಸುವ ನಿರ್ಧಾರವನ್ನು ಹಿಂದುಳಿದ ವರ್ಗಗಳ ಆಯೋಗ ಮಾಡಿದ್ದರೆ ಸಮುದಾಯವನ್ನು ಸಮೀಕ್ಷೆಯಿಂದ ದೂರ ಇಡುವುದು ಸೂಕ್ತ </blockquote><span class="attribution">ಎಸ್.ರಘುನಾಥ್ ಅಧ್ಯಕ್ಷ ಬ್ರಾಹ್ಮಣ ಮಹಾಸಭಾ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಾತಿಗಳಾಗಿ ವಿಂಗಡಣೆ ಮಾಡುವ ಬದಲು ಏಳು ವರ್ಗಗಳಾಗಿ ವಿಂಗಡಿಸುವುದು ಸೂಕ್ತ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಿಳಿಸಿದೆ.</p>.<p>ಆಕ್ಷೇಪಣೆಗಳ ಜತೆಗೆ ಸಲಹೆಗಳನ್ನು ಒಳಗೊಂಡ ಮನವಿ ಪತ್ರವನ್ನು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಅವರು ಆಯೋಗಕ್ಕೆ ನೀಡಿದ್ದಾರೆ. ಅತಿ ಮುಂದುವರಿದ, ಮಧ್ಯಮ ಮುಂದುವರಿದ, ಮುಂದುವರಿಯುತ್ತಿರುವ, ಮಧ್ಯಮ ಹಿಂದುಳಿದ, ಹಿಂದುಳಿದ ಹಾಗೂ ಹಿಂದುಳಿದ ವರ್ಗಗಳಿಂದ ಕೆಳಗಿರುವ ವರ್ಗಗಳಾಗಿ ವಿಂಗಡಿಸಬಹುದು ಎಂದು ತಿಳಿಸಿದ್ದಾರೆ.</p>.<p><strong>ಮಹಾಸಭಾದ ಬೇಡಿಕೆಗಳು ಏನು?</strong></p>.<p>* ಮೀಸಲಾತಿ ಸೌಲಭ್ಯ ಬಳಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಹೊಂದಿರುವ ಹಿಂದುಳಿದ ವರ್ಗದವರನ್ನು ಸೌಲಭ್ಯದಿಂದ ಹೊರಗೆ ಇಡಬೇಕು.</p>.<p>* ಆಯೋಗವು ಸಮೀಕ್ಷೆಗೆ ಪರ್ಯಾಯ ಪದ್ದತಿಗಳನ್ನು ರೂಪಿಸಿಕೊಂಡು ಹಿಂದುಳಿತ ಜಾತಿ ಇಲ್ಲವೇ ಮುಂದುವರಿದ ಜಾತಿ ಎಂದು ಪರಿಗಣಿಸುವುದು ಸೂಕ್ತ.</p>.<p>* ಬ್ರಾಹ್ಮಣ ಸಮುದಾಯದಲ್ಲೂ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ನೀಡುವ ನಿಟ್ಟಿನಲ್ಲಿ ಯೋಚಿಸಬೇಕು. </p>.<p>* ಸಮುದಾಯದ 62 ಉಪಪಂಗಡಗಳನ್ನು ಬ್ರಾಹ್ಮಣ ಎಂದೇ ಪರಿಗಣಿಸಬೇಕು.</p>.<p>* ಆಯೋಗವು ಬ್ರಾಹ್ಮಣ ಮುಸ್ಲಿಂ, ಬ್ರಾಹ್ಮಣ ಕ್ರಿಶ್ಚಿಯನ್, ವೈಶ್ಯ ಬ್ರಾಹ್ಮಣ ಎನ್ನುವ ಪಟ್ಟಿ ನೀಡಿದ್ದು, ಇದನ್ನು ತೆಗೆದು ಹಾಕಬೇಕು. ಯಾವುದೇ ವ್ಯಕ್ತಿ ಬ್ರಾಹ್ಮಣ ಇಲ್ಲವೇ ಕ್ರಿಶ್ಚಿಯನ್ ಆಗಿರಬಹುದು. ಎರಡೂ ಆಗಿರಲು ಸಾಧ್ಯವಿಲ್ಲ.</p>.<div><blockquote>ಬ್ರಾಹ್ಮಣರನ್ನು ಮುಂದುವರಿದವರು ಎಂದು ಪರಿಗಣಿಸುವ ನಿರ್ಧಾರವನ್ನು ಹಿಂದುಳಿದ ವರ್ಗಗಳ ಆಯೋಗ ಮಾಡಿದ್ದರೆ ಸಮುದಾಯವನ್ನು ಸಮೀಕ್ಷೆಯಿಂದ ದೂರ ಇಡುವುದು ಸೂಕ್ತ </blockquote><span class="attribution">ಎಸ್.ರಘುನಾಥ್ ಅಧ್ಯಕ್ಷ ಬ್ರಾಹ್ಮಣ ಮಹಾಸಭಾ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>