ಶುಕ್ರವಾರವೇ ಏಕೆ?: ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ, ಅದೇ ದಿನ ಕಾರ್ಯಾಚರಣೆಗೆ ಇಳಿಯುವ ಯಲ್ಲಮ್ಮ, ಮಕ್ಕಳನ್ನು ಎತ್ತಿಕೊಂಡು ನೂಕು–ನುಗ್ಗಲಿನಲ್ಲಿ ಕಷ್ಟ ಪಡುತ್ತಿರುವ ಮಹಿಳೆಯರನ್ನು ಗುರುತಿಸಿಕೊಳ್ಳುತ್ತಾರೆ. ಬಳಿಕ ನೆರವಾಗುವ ನೆಪದಲ್ಲಿ ಹತ್ತಿರ ಹೋಗಿ, ಮಹಿಳೆಗೆ ಗೊತ್ತಾಗದಂತೆ ಮಗುವಿನ ಸರ ಬಿಚ್ಚಿಕೊಂಡು ಹೊರನಡೆಯುತ್ತಾರೆ.