<p><strong>ಬೆಂಗಳೂರು:</strong> ಕ್ರಿಸ್ತು ಜಯಂತಿ ಕಾಲೇಜು ‘ಡೀಮ್ಡ್ ಟು ಬಿ ವಿಶ್ವವಿದ್ಯಾಲಯ’ವಾಗಿ ಕಾರ್ಯಾರಂಭಿಸಿದೆ.</p>.<p>ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ‘ಕ್ರಿಸ್ತು ಜಯಂತಿ ಡೀಮ್ಡ್ ಟುಬಿ ವಿಶ್ವವಿದ್ಯಾಲಯಕ್ಕೆ’ ಅನುಮೋದನೆ ನೀಡಿರುವುದರಿಂದ, ಅದರ ಐತಿಹಾಸಿಕ ಮೈಲಿಗಲ್ಲಿನ ಸ್ಮರಣೆಗಾಗಿ ಸೋಮವಾರ ‘ಉದ್ಘಾಟನಾ ಸಮಾರಂಭ’ ಆಯೋಜಿಸಲಾಗಿತ್ತು.</p>.<p>'ವಿಶ್ವವಿದ್ಯಾಲಯದ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಎನ್. ರಾಮ್, ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಲಭ್ಯವಾಗುವಂತೆ ಮಾಡಲು ವಿಶ್ವವಿದ್ಯಾಲಯ ಕೈಗೊಂಡಿರುವ ಕಾರ್ಯಗಳನ್ನು ಶ್ಲಾಘಿಸಿದರು. </p>.<p>ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜೋಶಿ ಮ್ಯಾಥ್ಯೂ ರಚಿಸಿರುವ 'ಲುಮಿನೆಸೆನ್ಸ್' – ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಬೆಳ್ಳಿ ಪಯಣ ಎಂಬ ಕೃತಿಯನ್ನು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕುಲಪತಿ ಅಗಸ್ಟೀನ್ ಜಾರ್ಜ್ ಬಿಡುಗಡೆ ಮಾಡಿದರು.</p>.<p>ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ (ಸಿಎಂಐ) ಸಭೆಯ ಪ್ರಿಯರ್ ಜನರಲ್ ಥಾಮಸ್ ಚಾಥಂಪರಂಪಿಲ್ ಅವರು, ವಿದ್ಯಾರ್ಥಿಗಳಿಗೆ ಅಂತರ್ಗತ ಮತ್ತು ಸಮಗ್ರ ಜೀವನ ಶಿಕ್ಷಣವನ್ನು ಬೆಳೆಸುವಲ್ಲಿ ವಿಶ್ವವಿದ್ಯಾನಿಲಯದ ಪಾತ್ರದ ಬಗ್ಗೆ ಒತ್ತಿಹೇಳಿದರು.</p>.<p>ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕುಲಾಧಿಪತಿ ಅಬ್ರಹಾಂ ವೆಟ್ಟಿಯಂಕಲ್ ಭಾಗವಹಿಸಿದ್ದರು. ಸಂಸ್ಥೆಯ ಎಲ್ಲಾ ಮಾಜಿ ಪ್ರಾಂಶುಪಾಲರು ಮತ್ತು ಸಿಎಂಐ ಸಭೆಯ ಮಿಷನರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕ್ರಿಸ್ತು ಜಯಂತಿ ಕಾಲೇಜು ‘ಡೀಮ್ಡ್ ಟು ಬಿ ವಿಶ್ವವಿದ್ಯಾಲಯ’ವಾಗಿ ಕಾರ್ಯಾರಂಭಿಸಿದೆ.</p>.<p>ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ‘ಕ್ರಿಸ್ತು ಜಯಂತಿ ಡೀಮ್ಡ್ ಟುಬಿ ವಿಶ್ವವಿದ್ಯಾಲಯಕ್ಕೆ’ ಅನುಮೋದನೆ ನೀಡಿರುವುದರಿಂದ, ಅದರ ಐತಿಹಾಸಿಕ ಮೈಲಿಗಲ್ಲಿನ ಸ್ಮರಣೆಗಾಗಿ ಸೋಮವಾರ ‘ಉದ್ಘಾಟನಾ ಸಮಾರಂಭ’ ಆಯೋಜಿಸಲಾಗಿತ್ತು.</p>.<p>'ವಿಶ್ವವಿದ್ಯಾಲಯದ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಎನ್. ರಾಮ್, ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಲಭ್ಯವಾಗುವಂತೆ ಮಾಡಲು ವಿಶ್ವವಿದ್ಯಾಲಯ ಕೈಗೊಂಡಿರುವ ಕಾರ್ಯಗಳನ್ನು ಶ್ಲಾಘಿಸಿದರು. </p>.<p>ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜೋಶಿ ಮ್ಯಾಥ್ಯೂ ರಚಿಸಿರುವ 'ಲುಮಿನೆಸೆನ್ಸ್' – ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಬೆಳ್ಳಿ ಪಯಣ ಎಂಬ ಕೃತಿಯನ್ನು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕುಲಪತಿ ಅಗಸ್ಟೀನ್ ಜಾರ್ಜ್ ಬಿಡುಗಡೆ ಮಾಡಿದರು.</p>.<p>ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ (ಸಿಎಂಐ) ಸಭೆಯ ಪ್ರಿಯರ್ ಜನರಲ್ ಥಾಮಸ್ ಚಾಥಂಪರಂಪಿಲ್ ಅವರು, ವಿದ್ಯಾರ್ಥಿಗಳಿಗೆ ಅಂತರ್ಗತ ಮತ್ತು ಸಮಗ್ರ ಜೀವನ ಶಿಕ್ಷಣವನ್ನು ಬೆಳೆಸುವಲ್ಲಿ ವಿಶ್ವವಿದ್ಯಾನಿಲಯದ ಪಾತ್ರದ ಬಗ್ಗೆ ಒತ್ತಿಹೇಳಿದರು.</p>.<p>ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕುಲಾಧಿಪತಿ ಅಬ್ರಹಾಂ ವೆಟ್ಟಿಯಂಕಲ್ ಭಾಗವಹಿಸಿದ್ದರು. ಸಂಸ್ಥೆಯ ಎಲ್ಲಾ ಮಾಜಿ ಪ್ರಾಂಶುಪಾಲರು ಮತ್ತು ಸಿಎಂಐ ಸಭೆಯ ಮಿಷನರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>