ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟ ನೀಡಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕರೆಯ ಅಂಗವಾಗಿ ಈ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಬಸವನಗುಡಿ, ಕುಮಾರಸ್ವಾಮಿ ಬಡಾವಣೆ, ಬನಶಂಕರಿ, ತ್ಯಾಗರಾಜನಗರ, ರಾಜಾಜಿನಗರ, ಉದಯನಗರ, ಕೆ.ಆರ್.ಪುರ, ಕೂಡ್ಲು ಗೇಟ್, ಯಶವಂತಪುರ, ಬಸವೇಶ್ವರನಗರ, ಕಮಲಾನಗರ, ಶ್ರೀರಾಂಪುರ, ಕಾವೇರಿನಗರ, ಹೆಗ್ಗನಹಳ್ಳಿ, ಎಂ.ಎಸ್. ಪಾಳ್ಯ, ಸಿ.ವಿ. ರಾಮನ್ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಸಿಐಟಿಯು ಸದಸ್ಯರು ಪ್ರತಿಭಟನೆ ನಡೆಸಿದರು.