ಭಾರತಿ ಎಂಬುವರಿಗೆ ಕೃಷ್ಣಮೂರ್ತಿ ಹಿಂಬಾಲಕರು ಕೈ ತಿರುಚಿ ಬೂಟು ಗಾಲಿನಿಂದ ಹೊಟ್ಟೆಗೆ ಒದ್ದ ಪರಿಣಾಮ ಹೊಟ್ಟೆನೋವು ಕಾಣಿಸಿಕೊಂಡು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನಿಂಗ್ ಮಾಡಿಸಲಾಗಿ ಪೆಟ್ಟು ಬಿದ್ದಿರುವುದಾಗಿ ತಿಳಿದುಬಂದಿದೆ. ಗೀತಾ ಎಂಬಾಕೆಯ ಕಾಲು ಬೆರಳು ಗಳನ್ನು ಜಜ್ಜಲಾಗಿದೆ. ರಮೇಶ್ ಎಂಬುವವರು ಗಾಯಗೊಂಡಿದ್ದಾರೆ.
ಕೆ.ಸಿ.ಅಶೋಕ್, ನಾಗಭೂಷಣ್, ನಾಗಲಕ್ಷ್ಮಿ, ಎಬಿಬಿ ಮಂಜುನಾಥ್, ರವಿಕುಮಾರ್, ಬಿ.ಎಂ. ಜಗದೀಶ್ ಸೇರಿ ಅನೇಕ ಸ್ಥಳೀಯ ಮುಖಂಡರು ಮೂಕವಿಸ್ಮಿತರಾಗಿ ಗಲಭೆಯನ್ನು ನೋಡುತ್ತಿದ್ದರು.